ಧೀರೋದ್ದಾತ ಶರಣಅಂಬಿಗರಚೌಡಯ್ಯ: ಡಾ.ಚಿತ್ಕಳಾ ಮಠಪತಿ

0
32

ಕಲಬುರಗಿ: ಶರಣ ವೃತ್ತಿ ಯಾವುದೇ ಇದ್ದರೂ ಅದನ್ನು ಮೆಚ್ಚಿಕೊಳ್ಳುವಂತಹ ಒಪ್ಪಿಕೊಳ್ಳುವಂತಹ ಅಭಿಮಾನ ಪಡುವಂತಹ ವ್ಯಕ್ತಿತ್ವವುಳ್ಳವರಾಗಿದ್ದರು. ಹುಟ್ಟು ಸಾವುಗಳೆಂಬ ಜೀವನದ ನದಿಯನ್ನು ಕೂಡಾದಾಟಿಸುವಂತಹ ದಾರ್ಶನಿಕ ವಚನಕಾರರಾಗಿದ್ದರು ಎಂದು ಕನ್ನಡ ಪ್ರಾಧ್ಯಾಪಕರಾದ ಡಾ.ಚಿತ್ಕಳಾ ಮಠಪತಿ ಹೇಳಿದರು.

ಇಲ್ಲಿನ ಬಸವ ಸಮಿತಿ, ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಲಿಂ. ರುದ್ರಪ್ಪ ಬೆನಕನಳ್ಳಿ ರಟಕಲ್, ಲಿಂ. ಸುಭಾಶ್ಚಂದ್ರರುದ್ರಪ್ಪ ಬೆನಕನಳ್ಳಿ ರಟಕಲ್ ಮತ್ತು ಲಿಂ. ರೇವಣಪ್ಪ ಸಂಗಪ್ಪ ಮೀಸೆ, ಲಿಂ.ಡಾ. ಅನಿಲ ರೇವಣಪ್ಪ ಮೀಸೆ ಸ್ಮರಣಾರ್ಥ ಆನ್‌ಲೈನ್‌ ಅರಿವಿನ ಮನೆ ೬೩೬ ನೆಯದತ್ತಿ ಕಾರ್ಯಕ್ರಮದಲ್ಲಿ ’ನಿಜ ಶರಣ ಅಂಬಿಗರಚೌಡಯ್ಯ’ಎಂಬ ವಿಷಯದ ಕುರಿತು ಮಾತನಾಡಿದರು.

Contact Your\'s Advertisement; 9902492681

ವೃತ್ತಿಯನ್ನು ಶರಣರುಉದರಪೋಷಣೆಂದು ಕೈ ಕೊಂಡಿದ್ದರೂಕೂಡಾಅದರ ನೆಲೆಯಲ್ಲಿದ್ದುಕೊಂಡು ಮಹಾನುಭಾವಿಗಳಾದದ್ದು ವಿಶೇಷವೆನ್ನಬಹುದು. ಅಂಬಿಗರಚೌಡಯ್ಯನವರುತಮ್ಮ ವೃತ್ತಿಯ ವೈಶಿಷ್ಟ್ಯಗಳನ್ನು ತಮ್ಮ ವಚನಗಳಲ್ಲಿ ಅದು ಬದುಕಿಗೂ ಹಾಗೂ ವೃತ್ತಿಗೂಅನ್ವಯವಾಗುವಂತೆ ಬರೆದಿದ್ದಾರೆ.ಚಂದಗೆಟ್ಟವರೆಲ್ಲಾ ಬಂದುಏರಿ ನನ್ನದೋಣಿ ಶಿವನ ನೆಲೆ ಕಾಣಿಸುವೆಎಂದು ಹೇಳುತ್ತಾ ಬದುಕಿನಬವಣೆಗಳ ಮಧ್ಯೆ ಸಿಲುಕಿಕೊಂಡವರನ್ನೂ ಆನುಭಾವಿಕ ನೆಲೆಗೆ ಕೊಂಡೊಯ್ಯವ ಮಾತುಗಳನ್ನಾಡಿದ್ದಾರೆ. ದೋಣಿಯನ್ನೇರಿದವರು ತನಗೆ ಕೊಡಬೇಕಾದ ಉದರ ಪೋಷಣೆಯದುಡ್ಡಿಗೂ ಸಹ ಹಿಡಿದ ಬಿಡುವ ಮನವನ್ನು ನನಗೆ ಕೊಡಿರೆಂದು ಹೇಳುತ್ತಾರೆ. ಮನದಚಾಂಚಲ್ಯವನ್ನು ಕಳೆದು ಜೀವನದ ಸಾರ್ಥಕತೆಯನ್ನುಕಾಣುವತ್ತ ಪಯಣಿಗರನ್ನುಒಯ್ಯುವ ಮಹದಾಸೆಯನ್ನುತಮ್ಮ ವಚನಗಳಲ್ಲಿ ವ್ಯಕ್ತಿಪಡಿಸುತ್ತಾರೆ.

ಅಂಬಿಗರಚೌಡಯ್ಯನವರ ವಚನಗಳಲ್ಲಿ ರೊಟ್ಟಿ,ಹೊಟ್ಟಿಉದರನ್ನಮುಟಿಗಿ, ಸೀತನಿ ಮುಂತಾದ ಪದಗಳು ಬರುವುದನ್ನು ನೋಡಿದರೆಅವರುಉತ್ತರಕರ್ನಾಟಕ ಭಾಗದವರೆಂಬುದುಖಚಿತವಾಗುತ್ತದೆ. ಈ ಬಗ್ಗೆ ಅನೇಕ ಸಂಶೋಧಕರೂ ಸಹಮತ ವ್ಯಕ್ತ ಪಡಿಸುತ್ತಾರೆ.ಕಲ್ಯಾಣದತ್ರಿಪುರಾಂತಕಕೆರೆಯಲ್ಲಿತನ್ನಕಾಯಕವನ್ನುಕೈಗೊಂಡಿದ್ದರ ಬಗ್ಗೆ ಉಲ್ಲೇಖಗಳು ಸಿಗುತ್ತವೆ. ಕನ್ನಡಅಭಿವೃದ್ಧಿ ಪ್ರಾಧಿಕಾರದವರು ಪ್ರಕಟಿಸಿದ ವಚನ ಸಂಕಲನದಲ್ಲಿಚೌಡಯ್ಯನವರ ೨೭೯ ವಚನಗಳನ್ನು ಕಾಣಬಹುದು ಬೇರೆ ಬೇರೆಕಡೆ ಪ್ರಕಟಗೋಂಡ ೩೦೦ ವಚನಗಳನ್ನು ನಾವು ಗುರುತಿಸಬಹುದು.

ತಮ್ಮ ಹೆಸರನ್ನೇ ವಚನಾಂಕಿತವನ್ನಾಗಿಸಿಕೊಂಡ ಏಕೈಕ ಧೀರೋದ್ದಾತ ವ್ಯಕ್ತಿತ್ವದ ಶರಣ ನೆಂದರೆ ಅದು ಅಂಬಿಗರಚೌಡಯ್ಯ ಮಾತ್ರ.ಅವರ ವಚನಗಳಲ್ಲಿ ನಿಷ್ಠುರ, ನಿರ್ಭಿಡೆಯ ನುಡಿಗಳನ್ನು ನಾವು ಸಾಕಷ್ಟು ಸಂಖ್ಯೆಯಲ್ಲಿಕಾಣಬಹುದಾಗಿದೆ.ಕಟ್ಟಿದ ಲಿಂಗವ ಬಿಟ್ಟು.ಬೆಟ್ಟದಲಿಂಗಕ್ಕೆ ಹೋಗಿ, ಹೊಟ್ಟೆಯಡಿಯಾಗಿ ಬೀಳುವ ಲೊಟ್ಟಿ ಮೂಳರ ಕಂಡರೆ ಮೆಟ್ಟಿದಎಡಪಾದರಕ್ಷೆಯಕೊಂಡು ಲೊಟ ಲೊಟನೆ ಹೊಡೆಯೆಂದಾತ ನಮ್ಮಅಂಬಿಗರಚೌಡಯ್ಯಎಂದು ಹೇಳುತ್ತಾ ಮೌಢ್ಯತೆಯ ವಿರುದ್ಧ ಮುಲಾಜಿಲ್ಲದೆಗುಡುಗಿದ್ದನ್ನು ನಾವು ಕಾಣಬಹುದಾಗಿದೆ.

ಕಾರ್ಯಕ್ರಮದಲ್ಲಿ ಕಲಬುರಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ.ವಿಲಾಸವತಿ ಖೂಬಾ, ಉಪಾಧ್ಯಕ್ಷರಾದ ಡಾ.ಜಯಶ್ರೀದಂಡೆ, ಡಾ. ಬಿ.ಡಿಜತ್ತಿ ವಚನ ಅಧ್ಯಯ ಮತ್ತು ಸಂಶೋಧನಕೇಂದ್ರದ ನಿರ್ದೇಶಕರಾದಡಾ. ವೀರಣ್ಣದಂಡೆ ಹಾಗೂ ದತ್ತಿ ದಾಸೋಹಿಗಳಾದ ಶ್ರೀ ಶೀಲಾ ಕೋಣಿನ ಮತ್ತು ಡಾ.ಶಶಿಕಾಂತ ಆರ್.ಮೀಸೆಉಪಸ್ಥಿತರಿದ್ದರು.ಶ್ರೀ ಹೆಚ್.ಕೆ.ಉದ್ದಂಡಯ್ಯಕಾರ್ಯಕ್ರಮ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here