ಸೆಪ್ಟೆಂಬರ್ 18 ರಂದು ಕ.ಕ ಉತ್ಸವದ ನಿಮಿತ್ತ ಭೂ ದಾಖಲೆ ಜಂಟಿ ನಿರ್ದೇಶಕರ ಕಚೇರಿ ಸ್ಥಾಪನೆಗೆ ಆಗ್ರಹ

0
38

ಕಲಬುರಗಿ: ಬರುವ 18 ಸೆಪ್ಟೆಂಬರ್ ರಂದು ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ ಸಮಯದಲ್ಲಿ ಜಿಲ್ಲೆಯ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಹಾಗೂ ನಗರ ಮಾಪನ ಜಂಟಿ ನಿರ್ದೇಶಕರ ಕಛೇರಿಗಳು ಸ್ಥಾಪಿಸಿ, ಉದ್ಘಾಟಿಸಲು ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಜಾಗ್ರತಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಜೇ. ವಿನೋದ ಕುಮಾರ್ ಎಸ್. ಒತ್ತಾಯಿಸಿದ್ದಾರೆ ಆಗ್ರಹಿಸಿದ್ದಾರೆ.

ಪ್ರಸ್ತುತ ಸರ್ಕಾರಕ್ಕೆ ಈ ಭಾಗ ಹಿಂದುಳಿದದ್ದರ ಬಗ್ಗೆ ಕಿಂಚಿತ್ ಕಾಳಜಿ ಇದ್ದರೆ ಸಾರ್ವಜನಿಕರ ಮತ್ತು ನ್ಯಾಯವಾದಿಗಳಿಗೆ ಆಗುತ್ತಿರುವ ತೊಂದರೆಗಳನ್ನು ತ್ವರಿತವಾಗಿ  ಸ್ಪಂದಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು, ಎರಡು ದಶಕಗಳ ಹಿಂದೆ ಇಲ್ಲಿಯೇ ಕಾರ್ಯನಿರ್ವಹಿಸುತಿದ್ದ ಕಛೇರಿಗಳು ಬೆಳಗಾವಿ ವಿಭಾಗಕ್ಕೆ ಸ್ಥಳಾಂತರಗೊಳಿಸಿ ಈ ಭಾಗದ ಜನರಿಗೆ ಅನ್ಯಾಯಗೊಳಿಸಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.

Contact Your\'s Advertisement; 9902492681

ಇಲ್ಲಿಯ ಜನಪ್ರತಿನಿಧಿಗಳು ದ್ವನಿ ಎತ್ತದೆ ಇರುವುದು ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂದು ಹಿರಿಯ ವಕೀಲರಾದ ಹಣಮಂತ ರಾವ ಬಿರಾದಾರ ಬಿಲಗುಂದಿ ತಿಳಿಸಿ, ಕಳೆದ ಬಾರಿ ಇಲ್ಲಿಗೆ ಆಗಮಿಸಿದ ಕಾನೂನು ಮಂತ್ರಿಗಳಿಗೆ ಕೆ.ಎ.ಟಿ. ಉದ್ಘಾಟಿಸುವ ಸಂದರ್ಭದಲ್ಲಿ ಮನವಿ ಸಲ್ಲಿಸಲಾಗಿತ್ತು ಎಂದು ತಿಳಿಸಿದರು.

ತಪ್ಪು ನಿರ್ಣಯಗಳ್ಳನ್ನು ಪದೇ ಪದೇ ಹೇಳಿ ಅದೇ ಸರಿ ಎನ್ನುವುದು ಸರ್ಕಾರ ನಡವಳಿಕೆ ಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಬೇಡಿಕೆಗೆ ಸ್ಪಂದಿಸಬೇಕೆಂದು ಒತ್ತಾಯಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here