ಕಕ್ಕೇರಾ ಪುರಸಭೆ ಮುಖ್ಯಾಧಿಕಾರಿ ಓಂಕಾರೆಪ್ಪ ಪೂಜಾರಿಗೆ ಸನ್ಮಾನ

0
31

ಸುರಪುರ: ಸ್ಥಳಿಯ ಎಲ್ಲಾ ಜನಪ್ರತಿನಿಧಿಗಳು ಹಾಗು ಮುಖಂಡರ ಸಲಹೆಗಳನ್ನು ಪಡೆದು ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನಿಸುವುದಾಗಿ ಕಕ್ಕೇರಾ ಪುರಸಭೆಗೆ ನೂತನ ಮುಖ್ಯಾಧಿಕಾರಿಗಳಾಗಿ ಆಗಮಿಸಿದ ಓಂಕಾರೆಪ್ಪ ಪೂಜಾರಿ ಮಾತನಾಡಿದರು.

ಪುರಸಭೆ ಕಾರ್ಯಾಲಯದಲ್ಲಿ ದಲಿತ ವಿಮೋಚನಾ ಸೇನೆಯಿಂದ ನಡೆದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ,ಕಕ್ಕೇರಾ ಸಾರ್ವಜನಿಕರ ಸಹಕಾರ ಬಹಳ ಮುಖ್ಯವಾಗಿದೆ.ಎಲ್ಲರ ವಿಶ್ವಾಸ ಪಡೆದು ಉತ್ತಮವಾಗಿ ಕೆಲಸ ಮಾಡುವೆನು,ಸ್ಥಳಿಯವಾಗಿ ಮೂಲಭೂತ ಸೌಕರ್ಯಗಳಿಗೆ ಮೊದಲ ಆದ್ಯತೆ ನೀಡುವುದಾಗಿ ತಿಳಿಸಿದರು.

Contact Your\'s Advertisement; 9902492681

ದಲಿತ ವಿಮೋಚನಾ ಸೇನೆಯ ತಾಲೂಕು ಅಧ್ಯಕ್ಷ ಚಂದ್ರಶೇಖರ ಕವಡಿಮಟ್ಟಿ ಮಾತನಾಡಿ,ಓಂಕಾರೆಪ್ಪ ಪೂಜಾರಿಯವರು ಒಬ್ಬ ದಕ್ಷ ಅಧಿಕಾರಿಗಳಾಗಿ ಈಗಾಗಲೆ ಸುರಪುರ ನಗರಸಭೆಯಲ್ಲಿ ಉತ್ತಮವಾದ ಸೇವೆ ಸಲ್ಲಿಸಿ ಜನ ಮೆಚ್ಚುಗೆ ಪಡೆದಂತವರು,ಅದೇರೀತಿಯಾಗಿ ಕಕ್ಕೇರಾದಲ್ಲಿಯು ಉತ್ತಮವಾದ ಸೇವೆ ನೀಡಲಿದ್ದಾರೆ ಎಂಬು ಭರವಸೆಯಿದೆ.ಸ್ಥಳಿಯ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಸಹಕಾರ ನೀಡುವ ಭರವಸೆಯಿದೆ ಎಂದರು.

ಇದೇ ಸಂದರ್ಭದಲ್ಲಿ ಓಂಕಾರೆಪ್ಪ ಪೂಜಾರಿಗೆ ಶಾಲು ಹೊದಿಸಿ ಹೂಮಾಲೆ ಹಾಕಿ ಸನ್ಮಾನಿಸಿ ಕರ್ತವ್ಯಕ್ಕೆ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ದಲಿತ ವಿಮೋಚಲಾ ಸೇನೆಯ ಜಿಲ್ಲಾಧ್ಯಕ್ಷ ಮರೆಪ್ಪ ಕಟ್ಟಿಮನಿ ಬೋವಿ ಒಡ್ಡರ ಯುವಕ ಸಂಘದ ಜಿಲ್ಲಾಧ್ಯಕ್ಷ ಆನಂದ ಕುಮಾರ ಅಮ್ಮಾಪುರಕರ್ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here