ಸರಕಾರದ ಯೋಜನೆಗಳು ಅರ್ಹರಿಗೆ ತಲುಪಿಸಿ-ಕೆ.ಗುರಲಿಂಗಪ್ಪ

0
24

ಶಹಾಬಾದ:ಸರಕಾರದ ಯೋಜನೆಗಳು ಇರುವುದೇ ಜನರಿಗೋಸ್ಕರ್.ಆ ಯೋಜನೆಗಳು ಜನರಿಗೆ ಮುಟ್ಟಬೇಕಾದರೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಪ್ರಾಮಾಣಿಕವಾಗಿ ಅರ್ಹ ವ್ಯಕ್ತಿಗಳಿಗೆ ತಲುಪಿಸುವ ಕೆಲಸ ಮಾಡಬೇಕಿದೆ ನಗರಸಭೆಯ ಪೌರಾಯುಕ್ತ ಕೆ.ಗುರಲಿಂಗಪ್ಪ ಹೇಳಿದರು.

ಅವರು ಮಂಗಳವಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಲಾದ ಪೋಷಣಾ ಅಭಿಯಾನ ಯೋಜನೆಯಡಿ ಪೋಷಣಾ ರಥಕ್ಕೆ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ನವಜಾತ ಶಿಶುಗಳ ಮರಣ ಹಾಗೂ ಹುಟ್ಟುವು ಮಗುವಿನ ಅಪೌಷ್ಠಿಕತರ ಪ್ರಮಾಣ ತಗ್ಗಿಸಲು ಸರಕಾರ ಜಾರಿಗೆ ತಂದ ಜೋಜನೆಯೇ ಪೋಷಣಾ ಅಭಿಯಾನ. ಸರಕಾರವು ಯೋಜನೆ ಜಾರಿಗೊಳಿಸಿದ್ದು, ಗರ್ಭಿಣಿಯರು ಅಂಗನವಾಡಿ ಕೇಂದ್ರಗಳ ಮುಖಾಂತರ ಇದರ ಸದುಪಯೋಗಪಡಿಸಿಕೊಳ್ಳಿ ಮತ್ತು ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಪೋಷಕಾಂಶದ ಕೊರತೆ ಹೆಚ್ಚಿನ ಪ್ರಮಾಣದಲ್ಲಿ ಕಾಣುತ್ತಿದ್ದು, ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ. ನಮ್ಮ ದೇಶದಲ್ಲಿ ಹುಟ್ಟುವ ಪ್ರತಿಯೊಂದು ಮಗುವು ಪೌಷ್ಠಿಕಾಂಶದ ಕೊರತೆಯಿಂದ ನರಳುತ್ತಿದೆ.ಉತ್ತಮವಾದ ಆರೋಗ್ಯವನ್ನು ಪಡೆಯಬೇಕಾದರೆ ಪೌಷ್ಠಿಕ ಅಂಶವನ್ನು ಹೊಂದಿರುವ ಆಹಾರವನ್ನು ಬಾಣಂತಿಯರು ಮತ್ತು ಗರ್ಭಿಣಿಯರು ಸೇವಿಸಬೇಕೆಂದು ಹೇಳಿದರು.

ಅಂಗನವಾಡಿ ಮೇಲ್ವಿಚಾರಕಿ ಮೀನಾಕ್ಷಿ ಮಾತನಾಡಿ, ತಾಲೂಕಿನಿಂದ ರಾವೂರ, ವಾಡಿ,ನಾಲವಾರ,ಕೊಲ್ಲೂರ್, ಪೇಠಸಿರೂರ,ಭಂಕೂರ, ಇಂಗಗಿ, ಹೊನಗುಂಟಾ ಮುಖಾಂತರ ಶಹಾಬಾದ ನಗರದಲ್ಲಿ ರಥ ಸಂಚರಿಸಿ ಜನರಿಗೆ ಜಾಗೃತಿ ಮೂಡಿಸಲಿದೆ ಎಂದರರು.
ಅಂಗನವಾಡಿ ಮೇಲ್ವಿಚಾರಕಿ ನೇತ್ರಾವತಿ , ಶಕುಂತಲಾ ಸಾಕ್ರೆ, ಆರೋಗ್ಯ ನಿರೀಕ್ಷಕ ಶಿವರಾಜಕುಮಾರ, ಜಗನ್ನಾಥ, ಸಾಬಣ್ಣ ಸುಂಗಲರ್, ಅಶೋಕ ತುಂಗಳ ಸೇರಿದಂತೆ ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here