ಕಲಬುರಗಿ: ಜಿಲ್ಲಾದ್ಯಂತ ಸುರುದ ಭಾರಿ ಮಳೆಯಿಂದ ಹಲವು ಗ್ರಾಮಗಳು ಮುಳುಗಿದ್ದು, ಗ್ರಾಮದ ಸಂಪರ್ಕ ಕಡಿತಗೊಂಡು ನಿರಾಶ್ರಿತರಾಗುದ್ದಾರೆ.
ಇಂತಹ ಘಟನೆಯಲ್ಲಿ ಸಿಲುಕಿದ ಕಮಲಾಪೂರ ತಹಶೀಲ್ದಾರರಾದ ಅಂಜುಮ್ ತಬಸುಮ್ ಹಾಗೂ ತಂಡದವರು ಕುರಿಕೋಟಾ ಪ್ರವಾಹ ಪೀಡಿತರಿಗೆ ನೆರವು ಆಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ನಿರಾಶ್ರಿತರಿಗೆ ಕಳೆದ ರಾತ್ರಿ ಚಾದರ್, ಟಾವೆಲ್, ಮಾಸ್ಕ್ ಸಾಬೂನು, ಸ್ಯಾನಿಟೈಜರ್, ಬಿಸ್ಕಿಟ್ ವಿತರಿಸಿ, ಪ್ರವಾಹ ಪೀಡಿತ ಸಂತ್ರಸ್ತರಿಗೆ ಮೂರು ಹೋತ್ತಿನ ಊಟದ ವ್ಯವಸ್ಥೆ ಮಾಡಿದ್ದಾರೆಂದು ತಿಳಿದುಬಂದಿದೆ.
ಸ್ಥಳದಲ್ಲಿ ಉಪತಹಶಿಲ್ದಾರ ಸೈಯದ್ ನಿಸರ್ ಅಹ್ಮದ, ಕಂದಾಯ ನಿರಿಕ್ಷಕರಾದ ವೆಂಕಟೇಶ್ ಉಪಸ್ಥಿತರಿದ್ದರು.