ಸರಕಾರ ರೈತರ ನೆರವಿಗೆ ಬರದಿದ್ದಲ್ಲಿ ಜಯಕರ್ನಾಟಕ ಹೋರಾಟ: ರವಿ ನಾಯಕ ಬೈರಿಮಡ್ಡಿ

0
29

ಸುರಪುರ: ನಗರದ ಟೈಲರ್ ಮಂಜಿಲ್‌ನಲ್ಲಿ ಜಯಕರ್ನಾಟಕ ಸಂಘಟನೆಯ ಮುಖಂಡರು ಸಭೆ ನಡೆಸಿ ಸರಕಾರ ರೈತರ ನೆರವಿಗೆ ಬರುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಂಘಟನೆ ತಾಲೂಕು ಅಧ್ಯಕ್ಷ ರವಿ ನಾಯಕ ಬೈರಿಮಡ್ಡಿ ಮಾತನಾಡಿ,ಸರಕಾರ ಪ್ರವಾಹ ಸಂದರ್ಭದಲ್ಲಿ ಕೂಡಲೆ ರೈತರ ನೆರವಿಗೆ ಬರಬೇಕು ಆದರೆ ಸರಕಾರದ ನಡೆ ತುಂಬಾ ನಿಧಾನವಾಗಿದೆ,ಆದ್ದರಿಂದ ಇದೇ ತಿಂಗಳ ೨೨ನೇ ತಾರೀಖು ನಮ್ಮ ಸಂಘಟನೆ ರಾಜ್ಯಾಧ್ಯಕ್ಷರಾದ ಬಿ.ಎನ್.ಜಗದೀಶ ಅವರು ಯಾದಗಿರಿ ಜಿಲ್ಲಾ ಪ್ರವಾಸಕ್ಕೆ ಬರುತ್ತಿದ್ದು ಅದೇ ದಿನ ಸರಕಾರಕ್ಕೆ ಒತ್ತಾಯಿಸಿ ಕೂಡಲೆ ನೆರೆಯಿಂದ ಹಾನಿಗೀಡಾದ ಜನರ ನೆರವಿಗೆ ಹಾಗು ರೈತರಿಗೆ ಕೂಡಲೆ ಪರಿಹಾರ ಬಿಡುಗಡೆ ಮಾಡುವಂತೆ ಆಗ್ರಹಿಸಲಿದ್ದೇವೆ ಎಂದು ತಿಳಿಸಿದರು.

Contact Your\'s Advertisement; 9902492681

ಸರಕಾರ ಇಂತಹ ಸಂದರ್ಭದಲ್ಲಿ ಜನರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಆದರೆ ಯಾದಗಿರಿ ಜಿಲ್ಲೆಯ ಅನೇಕ ಕಡೆಗಳಲ್ಲಿ ತೆರೆಯಲಾದ ಕಾಳಗಿ ಕೇಂದ್ರಗಳಲ್ಲಿ ಸರಿಯಾದ ವ್ಯವಸ್ಥೆ ಇರದಿರುವುದರಿಂದ ಜನರು ಬೇಸತ್ತು ಕಾಳಜಿ ಕೇಂದ್ರದಿಂದ ಹೊರ ಹೋಗುತ್ತಿರುವುದು ಬೇಸರದ ಸಂಗತಿಯಾಗಿದೆ,ಕೂಡಲೆ ಜನರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ರಾಜು ದರಬಾರಿ ಶರಣು ಬೈರಿಮಡ್ಡಿ ಮಲ್ಲಪ್ಪ ನಾಯಕ ಯಲ್ಲಪ್ಪ ಕಲ್ಲೋಡಿ ಹಣಮಂತ್ರಾಯ ನಾಯಕ ಚಿಗರಿಹಾಳ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here