ಚರಣ್‌ ಸಹಕಾರ ಬ್ಯಾಂಕ್‌ ನಿಂದ ಮೊಬೈಲ್‌ ಬ್ಯಾಂಕಿಂಗ್‌ ಸೌಲಭ್ಯ: ಬುಧವಾರ ಉದ್ಘಾಟನೆ

0
17

ಬೆಂಗಳೂರು: ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳುವುದರ ಮೂಲಕ ತಮ್ಮ ಗ್ರಾಹಕರಿಗೆ ಅತ್ಯುತ್ತಮ ಸೌಲಭ್ಯ ನೀಡುವಲ್ಲಿ ಮುಂಚೂಣಿಯಲ್ಲಿರುವ ಶ್ರೀ ಚರಣ್‌ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್‌ ಲಿ. ನ ವತಿಯಿಂದ ಸಹಕಾರ ಬ್ಯಾಂಕಗಳ ವಲಯದಲ್ಲೇ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಮೊಬೈಲ್‌ ಬ್ಯಾಂಕಿಂಗ್‌ ಸೇವೆಯನ್ನು ನೀಡಲಾಗುತ್ತಿದೆ. ಈ ಸೌಲಭ್ಯಕ್ಕೆ ಅಕ್ಟೋಬರ್‌ 21 ರಂದು ಬೆಳಿಗ್ಗೆ ಚಾಲನೆ ನೀಡಲಾಗುತ್ತಿದ್ದು, ಕರ್ನಾಟಕ ರಾಜ್ಯ ಸಹಕಾರಿ ಅರ್ಬನ್‌ ಬ್ಯಾಂಕ್‌ ಫೆಡರೇಷನ್‌ ನ ಸಿಇಓ ಪುಂಡಲಿಕ್‌ ಎನ್‌ ಕೆರೋರೆ ಇದಕ್ಕೆ ಚಾಲನೆ ನೀಡಲಿದ್ದಾರೆ.

ಈ ಮೊಬೈಲ್‌ ಬ್ಯಾಂಕಿಂಗ್‌ ಸೌಲಭ್ಯವನ್ನು ಬಳಸಿಕೊಳ್ಳುವ ಮೂಲಕ ಗ್ರಾಹಕರು ತಮ್ಮ ಮೊಬೈಲ್‌ ನಿಂದಲೇ ಬ್ಯಾಲೇನ್ಸ್‌ ನ ಬಗ್ಗೆ ಮಾಹಿತಿ, ಮಿನಿ ಸ್ಟೇಟ್‌ಮೆಂಟ್‌, ಹಣ ವರ್ಗಾವಣೆ, ಹತ್ತಿರದ ಏಟಿಎಂ ಗಳನ್ನು ಹುಡುಕುವಂತಹ ಹಲವಾರು ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಶ್ರೀ ಚರಣ್‌ ಬ್ಯಾಂಕಿನ ಮುಖ್ಯ ಕಚೇರಿ ಬಸವನಗುಡಿಯಲಿ ಈ ಕಾರ್ಯಕ್ರಮ ನಡೆಯಲಿದ್ದು. ಬ್ಯಾಂಕಿನ ಪ್ರಮುಖ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here