ಬಿಜೆಪಿ ಸರ್ಕಾರ ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತ: ಶರಣ ಕೊತ್ತಲಪ್ಪ ತೊನಸನಹಳ್ಳಿ

0
74

ಕಲಬುರಗಿ: ತಳವಾರ, ಪರಿವಾರದವರಿಗೆ ಪರಿಶಿಷ್ಟ ಪಂಗಡ ಜಾತಿ  ಪ್ರಮಾಣ ಪತ್ರ ಕೊಡದೆ ಹೋದರೆ ಮುಂದಿನ ದಿನಗಳಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವುದಿಲ್ಲ ಎಂದು ಶರಣ ಕೊತ್ತಲಪ್ಪ ತೊನಸನಹಳ್ಳಿ ಭವಿಷ್ಯನುಡಿದಿದ್ದಾರೆ.

ಪರತಾಬಾದ ವಲಯ ಮಟ್ಟದ ತಳವಾರ, ಪರಿವಾರ ಎಸ್.ಟಿ ಹೋರಾಟ ಸಮಿತಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ತಳವಾರ ಪರಿವಾರ ಸಮುದಾಯದವರು ಮೊದಲಿನಂತೆ ದಡ್ಡರಲ್ಲ ಇವತ್ತು ಅವರಿಗೆ ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆ ಬಂದಿದೆ ಸಮಾಜದಲ್ಲಿನ ಇತರ ಸಮುದಾಯಗಳಂತೆ ಈ ಸಮುದಾಯಗಳು ಕೂಡ ತಮ್ಮ ಅಭಿವೃದ್ಧಿಗಾಗಿ ಪಣತೊಟ್ಟಿದೆ.

Contact Your\'s Advertisement; 9902492681

ಅದರಂತೆ ಅವರಿಗೆ ಈ ದೇಶದ ಪ್ರಜೆಗಳಿಗೆ ಸಿಗಬೇಕಾದ ಕಾನೂನು-ಸುವ್ಯವಸ್ಥೆ ಹಾಗೂ ಮೂಲಭೂತ ಹಕ್ಕುಗಳ ಅರಿವಿನಿಂದ ಇವತ್ತು ತಳವಾರ ಪರಿವಾರ ಸಮುದಾಯದವರು ರಾಜ್ಯದಲ್ಲಿ ಗ್ರಾಮಮಟ್ಟದಿಂದ ರಾಜ್ಯಮಟ್ಟದವರೆಗೆ ಹಂತಹಂತವಾಗಿ ಹೋರಾಟ ನಡೆಸುತ್ತಿದ್ದಾರೆ ಕೂಡಲೇ ಸರಕಾರ ಎಚ್ಚೆತ್ತುಕೊಂಡು ಬೇಗನೆ ಈ ಸಮಸ್ಯೆಗೆ ಪರಿಹಾರ ಎಂಬಂತೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣಪತ್ರ ನೀಡಬೇಕು ಒಂದುವೇಳೆ ನೀಡದೇ ಹೋದರೆ ಸಮಾಜದ ಜನರನ್ನು ಒಗ್ಗೂಡಿಸಿಕೊಂಡು ರಾಜ್ಯದಲ್ಲಿ ದೊಡ್ಡಮಟ್ಟದ ಹೋರಾಟ ಮಾಡಬೇಕಾಗುತ್ತದೆ ಅದರ ಪರಿಣಾಮ ಮುಂದಿನ ದಿನಗಳಲ್ಲಿ ಬಿಜೆಪಿ ಸರಕಾರ ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತ  ಎಂದರು.

ಈ ಸಂದರ್ಭದಲ್ಲಿ ಡಾ.ಸರ್ದಾರ್ ರಾಯಪ್ಪ ತಳವಾರ ಪರಿವಾರ  S T ಹೋರಾಟ ಸಮಿತಿಯ ರಾಜ್ಯ ಅಧ್ಯಕ್ಷರು, ಹೋರಾಟ ಸಮಿತಿಯ ಮಹಿಳಾ ಮುಖಂಡರಾದ ಸುನಿತಾ ತಳವಾರ್ , ರಾಜೇಂದ್ರ ರಾಜವಾಳ, ಸಿದ್ದು ಬೂಸಾ, ಅವ್ವನ್ ಗೌಡ ಪಾಟೀಲ್, ಶಿವು ಸುಣಗಾರ್, ಸಿದ್ದು ತಳವಾರ್, ಆಕಾಶ್ ಬೂದಿಹಾಳ, ಸಾಯಿಬಣ್ಣ ಬಾಗೇವಾಡಿ, ಅಶೋಕ್ ತಳವಾರ್, ಸಂಜು ಸರಡಗಿ, ಬೆಳ್ಯಪ್ಪ ಶಾಬಾದ್, ರವಿ ಗೋಳಾ, ಇನ್ನು ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here