ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಂದ್ರಹಾಸ ಮಿಠ್ಠಾಗೆ ಅಭಿನಂದನೆಗಳ ಮಹಾಪುರ

0
57

ಸುರಪುರ: ತಾಲೂಕಿನ ಲಕ್ಷ್ಮೀಪುರ ಗ್ರಾಮದ ಸಂಗೀತ ಕಲಾವಿದ ಚಂದ್ರಹಾಸ ಚೌಡಪ್ಪ ಮಿಠ್ಠಾ ಇವರಿಗೆ ಈ ವರ್ಷದ ಯಾದಗಿರಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ.ನವೆಂಬರ್ ೧ ರಂದು ಯಾದಗಿರಿಯಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ:ರಾಗಪ್ರೀಯ ಅವರು ಪ್ರಶಸ್ತಿ ನೀಡಿ ಗೌರವಿಸಿದ್ದರು.

ಈ ಸಂದರ್ಭದಲ್ಲಿ ಶಾಸಕರಾದ ವೆಂಕಟರಡ್ಡಿ ಮುದ್ನಾಳ ಜಿಲ್ಲಾ ಪಂಚಾಯತ ಅಧ್ಯಕ್ಷ ಬಸನಗೌಡ ಯಡಿಯಾಪುರ ಜಿಲ್ಲಾ ಪಂಚಾಯತಿ ಸಿಇಒ ಶಿಲ್ಪಾ ಶರ್ಮಾ ಹಾಗು ಜಿಲ್ಲಾ ಪೊಲೀಸ್ ವರಿಷ್ಠ ಋಷಿಕೇಶ ಭಗವಾನ್ ಉಪಸ್ಥಿತರಿದ್ದರು.

Contact Your\'s Advertisement; 9902492681

ಚಂದ್ರಹಾಸ ಮಿಠ್ಠಾ ಅವರಿಗೆ ಪ್ರಶಸ್ತಿ ಬಂದಿದ್ದಕ್ಕೆ ತಾಲೂಕಿನ ಅನೇಕ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.ಈ ಕುರಿತು ಲಕ್ಷ್ಮೀಪುರ ಶ್ರೀಗಿರಿ ಮಠದ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಾತನಾಡಿ,ಅನೇಕ ವರ್ಷಗಳಿಂದ ಸಂಗೀತ ಸೇವೆ ಮಾಡುತ್ತಿರುವ ಚಂದ್ರಹಾಸ ಮಿಠ್ಠಾ ಅವರಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ,ಅವರಿಗೆ ಇನ್ನೂ ಹೆಚ್ಚಿನ ಪ್ರಶಸ್ತಿಗಳು ಒಲಿದು ಬರಲೆಂದು ಹಾರೈಸಿದ್ದಾರೆ.

ಅದರಂತೆ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಶಾಂತಪ್ಪ ಬೂದಿಹಾಳ ಶಿವರಾಜಪ್ಪ ಗೋಲಗೇರಿ ಸೂಗುರೇಶ ವಾರದ ಸೋಮಶೇಖರ ಶಾಹಾಬಾದಿ ಸಂಗಣ್ಣ ಎಕ್ಕೆಳ್ಳಿ ಮಂಜುನಾಥ ಜಾಲಹಳ್ಳಿ ಪ್ರಕಾಶ ಅಂಗಡಿ ಚಂದ್ರಶೇಖರ ಡೊಣೂರ ಮುರಳಿಧರ ಅಂಬುರೆ ನಾಗಭೂಷಣ ಯಾಳಗಿ ಸೇರಿದಂತೆ ಅನೇಕರು ಅಭಿನಂದನೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here