ಪ್ರಿಯಾಂಕ್ ಖರ್ಗೆ ಜನುಮ ದಿನದ ಅಂಗವಾಗಿ ರೋಗಿಗಳಿಗೆ ಹಾಲು ಹಣ್ಣು ವಿತರಣೆ

0
37

ಸುರಪುರ: ಪ್ರಯಾಂಕ್ ಖರ್ಗೆಜಿ ಅವರು ನಮ್ಮಂತಹ ಅನೇಕ ಜನ ಯೂತ್ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರಿಗೆ ಮಾದರಿಯಾಗಿದ್ದಾರೆ.ಅವರು ಶಾಸಕರಾಗಿ ಚಿತ್ತಾಪುರ ಅಭಿವೃಧ್ಧಿಯ ಜೊತೆಗೆ ಕಾಂಗ್ರೆಸ್ ಪಕ್ಷದಲ್ಲಿ ಒಬ್ಬ ನಾಯಕರಾಗಿ ಬೆಳೆದಿರುವುದು ದೊಡ್ಡ ಸಾಧನೆಯಾಗಿದೆ ಎಂದು ಯೂತ್ ಕಾಂಗ್ರೆಸ್ ಪಕ್ಷದ ಮುಖಂಡ ರಾಜಾ ಕುಮಾರ ನಾಯಕ ಮಾತನಾಡಿದರು.

ಶಾಸಕ ಪ್ರಿಯಾಂಕ್ ಖರ್ಗೆ ಅವರ ೪೨ನೇ ಜನುಮ ದಿನದ ಅಂಗವಾಗಿ ನಗರದ ತಾಲೂಕು ಆಸ್ಪತ್ರೆ ಮತ್ತು ತಿಮ್ಮಾಪುರದ ಸರಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಾಲು ಹಣ್ಣು ಬ್ರೇಡ್ ವಿತರಿಸಿ ಮಾತನಾಡಿ,ಇಂದು ನಾವೆಲ್ಲರು ಕಾಂಗ್ರೆಸ್ ಪಕ್ಷ ಸದೃಢವಾಗಿ ಕಟ್ಟುವ ಮೂಲಕ ಮತ್ತೆ ಅಧಿಕಾರಕ್ಕೆ ತರಲು ಯೂತ್ ಕಾಂಗ್ರೆಸ್ ಸಂಘಟಿಸೋಣ ಎಂದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಯುವ ಮುಖಂಡರಾದ ರಾಜಾ ಸಂತೋಷ ಕುಮಾರ ನಾಯಕ ರಾಜಾ ವಿಜಯಕುಮಾರ ನಾಯಕ ಯೂತ್ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ದಾವೂದ್ ಪಠಾಣ್ ಆನಂದ ಮುಧೋಳ ರಮೇಶ ಅರಕೇರಿ ಪ್ರವೀಣ ಕುಮಾರ ಡೊಣ್ಣಿಗೇರಾ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here