ಶೀಘ್ರವೇ ತೊಗರಿ ಖರೀದಿ ಕೇಂದ್ರ ಆರಂಭಕ್ಕೆ ಆಗ್ರಹ

0
37

ಕಲಬುರಗಿ: ತೊಗರಿ ನಾಡು ಕಲಬುರ್ಗಿಯಲ್ಲಿ ತೊಗರಿ ಬೆಳೆ ರಾಶಿಮಾಡುತ್ತಿದ್ದು ಕೂಡಲೇ ಖರೀದಿ ಕೇಂದ್ರ ಆರಂಭ ಮಾಡಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಭಾರಿ ಮಳೆಗೆ ತೊಗರಿ ಬೆಳೆ ಹಾಳಾಗಿದ್ದು, ಇಳುವರಿ ಕಡಿಮೆಯಾಗುತ್ತಿದೆ.ಎಕರೆಗೆ 4 ರಿಂದ 5 ಕ್ವಿಂಟಾಲ್ ಬರುತ್ತಿದ್ದ ಬೆಳೆ ಎಕರೆಗೆ ಕೇವಲ 1ರಿಂದ 2 ಕ್ವಿಂಟಾಲ್ ಇಳುವರಿ ಬರುತ್ತಿದೆ.ಇದರಿಂದ ರೈತರು ಕಂಗಾಲಾಗಿದ್ದಾರೆ.ಕಸ ಕಳೆ ಖರ್ಚು ಈ ಬಾರಿ ಅಧೀಕವಾಗಿದೆ ಇದರಿಂದ ರೈತರು ಆರ್ಥಿಕವಾಗಿ ಜರ್ಜೀತಗೊಂಡಿದ್ದಾರೆ.

Contact Your\'s Advertisement; 9902492681

ಇದ್ದ ಬದ್ಧ ತೊಗರಿ ಬೆಳೆ ಮಾತ್ರ ರೈತರ ಜೀವನಕ್ಕೆ ಆಸರವಾಗಿದೆ.ಮೇಲಿಂದ ಪ್ರವಾಹ ಸೃಷ್ಟಿಯಾಗಿ ಜಮೀನುಗಳು ಹಾಳಾಗಿವೆ.ಸರಕಾರ ಪರಿಹಾರ ಹಣ ನೀಡಿಲ್ಲ.ಕೂಡಲೇ ಸರ್ಕಾರ ತೊಗರಿ ಖರೀದಿ ಕೇಂದ್ರ ಆರಂಭ ಮಾಡಬೇಕು.ಬೆಂಬಲ ಬೆಲೆ ನೀಡಿ ಕ್ವೀಂಟಾಲ್ ಗೆ 8 ಸಾವಿರ ನಿಗದಿ ಮಾಡಿ ಖರೀದಿಸಬೇಕು.ಕೂಡಲೇ ರೈತರ ಖಾತೆಗೆ ಜಮಾ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here