ಛತ್ರಪತಿ ಶಿವಾಜಿ ಹುಟ್ಟಬೇಕಾದರೆ ತಾಯಂದಿರು ಜೀಜಾಬಾಯಿ ಆಗಬೇಕು: ಜಯಶ್ರೀ ಬಸವರಾಜ ಮತ್ತಿಮಡು

ಶಹಾಬಾದ: ಪ್ರತಿಯೊಬ್ಬರ ಮನೆಯಲ್ಲಿ ಛತ್ರಪತಿ ಶಿವಾಜಿಯಂತವರು ಹುಟ್ಟಬೇಕಾದರೆ ಮೊದಲು ನಾವು ತಾಯಂದಿರು ಜೀಜಾಬಾಯಿ ಆಗಬೇಕು ಎಂದು ಬಿಜೆಪಿ ಮುಖಂಡೆ ಜಯಶ್ರೀ ಬಸವರಾಜ ಮತ್ತಿಮಡು ಕರೆ ನೀಡಿದರು.

ಅವರು ನಗರದ ವಿಠ್ಠಲ್ ಮಂದಿರದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಮರಾಠಾ ಯುವಕ ಮಂಡಳಿ ವತಿಯಿಂದ ಆಯೋಜಿಸಲಾದ ಛತ್ರಪತಿ ಶಿವಾಜಿ ಮಹಾರಾಜರ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಡಿವಾಯ್‌ಎಸ್‌ಪಿ ವೆಂಕನಗೌಡ ಪಾಟೀಲ ಬಿಳ್ಕೋಡುಗೆ

ಶಿವಾಜಿ ಮಹಾರಾಜರು ಛತ್ರಪತಿ ಶಿವಾಜಿ ಮಹಾರಾಜರಾಗಲು ಅವರ ತಾಯಿ ಜೀಜಾಬಾಯಿ ಮುಖ್ಯ ಕಾರಣಳಾಗಿದ್ದಾಳೆ.ಚಿಕ್ಕಂದಿನಿಂದಲೇ ಶಿವಾಜಿಗೆ ಒಳ್ಳೆಯ ಸಂಸ್ಕಾರ, ದೈರ್ಯ ತುಂಬಿ ಬೆಳೆಸಿದವಳು. ತಾಯಂದಿರು ಮಕ್ಕಳಿಗೆ ಒಳ್ಳೆ ಸಂಸ್ಕೃತಿ, ವಿದ್ಯೆ ಕಲಿಸಬೇಕಾದರೆ ನಾವು ಸ್ವಂತ ಕಲಿತಿರಬೇಕು.ಅದಕ್ಕಾಗಿ ಹೆಣ್ಣು ಮಕ್ಕಳಿಗೆ ಹೆಚ್ಚು ಹೆಚ್ಚು ಕಲಿಸಿ. ಹೆಣ್ಣು ಮಕ್ಕಳು ವಿದ್ಯಾವಂತರಾದರೆ ಆ ಕುಟುಂಬ ತನ್ನಿಂದ ತಾನೇ ಸುಶಿಕ್ಷಿತರಾಗುತ್ತಾರೆ. ನಾವು ಮಕ್ಕಳಿಗೆ ಒಳ್ಳೆ ಸಂಸ್ಕಾರ ಕಲಿಸಿದಾಗ ಮಾತ್ರ ಮುಂದೆ ನಾವು ವೃದ್ದಾಶ್ರಮಗಳನ್ನು ಆಶ್ರಯಿಸುವದು ತಪ್ಪುತ್ತದೆ ಎಂದು ಹೇಳಿದರು.

ಉಪನ್ಯಾಸ ನೀಡಿದ ಸೋಲಾಪೂರದ ಬಾಬಾ ಸಾಹೇಬ ವಿಠ್ಠಲ್ ಭಟೆ ಮಾತನಾಡಿ, ದೇಶದ ಪ್ರತಿ ಹೆಣ್ಣು ಮಕ್ಕಳು ಜೀಜಾಬಾಯಿಯಂತಾಗಿ ತಮ್ಮ ಮಕ್ಕಳಿಗೆ ಒಳ್ಳೆ ಸಂಸ್ಕಾರ ಕೊಟ್ಟು ಶಿವಾಜಿಯಂತಹ ದೇಶಭಕ್ತ ವೀರರನ್ನು ದೇಶಕ್ಕೆ ಒಪ್ಪಿಸಬೇಕು. ಶಿವಾಜಿ ಯುದ್ದನೀತಿ, ರಣ ತಂತ್ರ ತಾಯಿ ಜೀಜಾಬಾಯಿಯಿಂದ, ಗುರು ದಾದಾಜೀ ಕೊಂಡದೇವ ಅವರಿಂದ ಕಲಿತ ಯುದ್ದ ನೀತಿಯನ್ನೆ ಬಳಸಿಕೊಂಡು ವಿಯಟ್ನಾಂ ದೇಶ ಬಲಾಢ್ಯ ಅಮೇರಿಕಾವನ್ನು ಸೋಲಿಸಿದ್ದ ಶಿವಾಜಿಯ ತಂತ್ರಗಾರಿಕೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ರಾಯಗೇರಾ ಸೀಮೆಯಲ್ಲಿ ಕೋಳಿ ಪಂದ್ಯದ ಅಡ್ಡೆ ಮೇಲೆ ದಾಳಿ: 30 ಜನ ವಶಕ್ಕೆ

ನಗರಸಭೆ ಅರ್ಧಯಕ್ಷೆ ಅಂಜಲಿ ಗಿರೀಶ ಕಂಬಾನೂರ, ವಾಡಿ-ಶಹಾಬಾದ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕನಕಪ್ಪ ದಂಡಗುಲಕರ್ ಮಾತನಾಡಿದರು. ನಗರಸಭೆ ಸದಸ್ಯ ಶ್ರವಣಕುಮಾರ,ಬಾಬುರಾವ ನಾರಾಯಣರಾವ ಸುರವಸೆ, ಮರಾಠಾ ಸಮಾಜದ ಗೌರವಾಧ್ಯಕ್ಷ ಜ್ಞಾನೇಶ್ವರ ನನ್ನವರೇ,ಕೆಕೆಎಮ್‌ಪಿ ತಾಲೂಕಾಧ್ಯಕ್ಷ ಶಂಕರ ಭಗಾಡೆ ವೇದಿಕೆಯ ಮೇಲಿದ್ದರು.ಮರಾಠಾ ಸಮಾಜದ ಅಧ್ಯಕ್ಷ ದತ್ತಾ.ವಿ.ಶಿಂಧೆ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯ ಮೇಲೆ ಭೋವಿ ಸಮಾಜದ ಅಧ್ಯಕ್ಷ ಭೀಮರಾವ ಸಾಳೊಂಕೆ, ಡಾ.ಅಶೋಕ ಜಿಂಗಾಡೆ, ರವಿ ರಾಥೋಡ, ಭಾಗಿರತಿ ಗುನ್ನಾಪುರ, ಸುನೀಲ ಭಗತ, ದತ್ತಾ ಫಂಡ್, ಜ್ಞಾನೇಶ್ವರ ನನ್ನವರೆ, ಶಂಕರಬಾಬಾ ಬಗಾಡೆ ಉಪಸ್ಥಿತಿರಿದ್ದರು.ಮರಾಠ ಸಮಾಜದ ಅಧ್ಯಕ್ಷ ದತ್ತಾ ಸಿಂಧೆ ಅಧ್ಯಕ್ಷತೆ ವಹಿಸಿದ್ದರು.

ವೀರಶೈವ ಜಂಗಮ ಅರ್ಚಕ ಪುರೋಹಿತರ ಸಂಘದ ಪದಾಧಿಕಾರಿಗಳ ನೇಮಕ

ಬಾಬಾ ಸಾಹೇಬ ಸಾಳೊಂಕೆ ಸ್ವಾಗತಿಸಿದರು. ಮನೀಷಾ ಸಾಳೊಂಕೆ ನಿರೂಪಿಸಿದರು. ಪವನಕುಮಾರ ಜಾಧವ ವಂದಿಸಿದರು.
ಸಮಾಜದ ಗಣ್ಯರಾದ ಚಂದ್ರಕಾಂತ ಸೂರ್ಯವಂಶಿ,ರಾಜೇಶ ಸಾಳುಂಕೆ,ಪ್ರದೀಪ ಸೋಲಾಪೂರಕರ್,ದಿಗಂಬರ ಮಾನೆ,ಅಶೋಕ ಶಿಂಧೆ, ಉಮಾಕಾಂತ ಸೂರ್ಯವಂಶಿ, ಭೀಮ ಭಗಾಡೆ,ಸುನೀಲ ದೇಶಮುಖ, ಶಿವುಕುಮಾರ ಭಗಾಡೆ,ದಶರಥ ಜಗತಾಪ,ಔದಂಬರ ಜಾವಳೆ, ಉಮೇಶ ಜೋಗದಂಡೆ, ಉದಯ ಚವ್ಹಾಣ, ಸಂತೋಷ ಸಾವಂತ ಸೇರಿದಂತೆ ಯುವಕರು, ಮಹಿಳೆಯರು ಪಾಲ್ಗೊಂಡಿದ್ದರು.

sajidpress

Recent Posts

ನಾಡಹಬ್ಬ ಆಚರಣೆ ಅಂಗವಾಗಿ ನಾಡ ದೇವತೆ ಸ್ತಬ್ಧ ಚಿತ್ರಗಳ ಮೆರವಣಿಗೆ

ಸುರಪುರ: ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ವತಿಯಿಂದ 38ನೇ ನಾಡಹಬ್ಬ ಉತ್ಸವಾಚರಣೆ ಅಂಗವಾಗಿ ನಗರದ…

11 hours ago

ವೀರಪ್ಪ ನಿಷ್ಠಿ ಕಾಲೇಜ್ ಮಹಾತ್ಮ ಗಾಂಧಿಜಿ ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿ

ಸುರಪುರ: ನಗರದ ಶ್ರೀ. ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆದ…

11 hours ago

ಲೈಂಗಿಕ ದೌರ್ಜನ್ಯ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ 8ಕ್ಕೆ ಸುರಪುರ ಬಂದ್

ಸುರಪುರ: ಕೊಡೇಕಲ್ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇದೇ ಅಕ್ಟೋಬರ್ 8 ರಂದು ಸುರಪುರ ಬಂದ್…

11 hours ago

ಗರ್ಭಿಣಿ ಮಹಿಳೆಯರಿಗೆ ಹಣ್ಣು ಹಂಪಲು ವಿತರಣೆ

ಕಲಬುರಗಿ:  ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಎಸ್ ಕಿಳ್ಳಿ ರವರ ಜನ್ಮ ದಿನದ ಆಂಗವಾಗಿ ಶ್ರೀನಿವಾಸ ಸರಡಗಿ…

11 hours ago

ಮಹಾತ್ಮ ಗಾಂಧೀಜಿಯವರ ತತ್ವಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ ಮತ್ತು ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರ್ಗಿಯ ಎನ್.ಎಸ್. ಎಸ್ ಘಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ…

11 hours ago

ಜುಡೋಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

ಕಲಬುರಗಿ: ಶಾಲಾ ಶಿಕ್ಷಣ ಇಲಾಖೆ ಕರ್ನಾಟಕ ರಾಜ್ಯಮಟ್ಟದ ಶಾಲಾ ಮಕ್ಕಳ ಆಟೊಗಳ ಸ್ಪರ್ಧೆ 2024 25 ಈಚೆಗೆ ಬೆಂಗಳೂರಿನಲ್ಲಿ ನಡೆದ…

11 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420