ಬಿಸಿ ಬಿಸಿ ಸುದ್ದಿ

ಕತ್ತಲಾದೊಡನೆ ಇಲ್ಲಿ ರಸ್ತೆ ದಾಟಲು, ಟಾರ್ಚ ಹಿಡಿದೇ ತೆರಳಬೇಕು!

ಶಹಾಬಾದ: ಕತ್ತಲಾದೊಡನೆ ಇಲ್ಲಿನ ರಸ್ತೆ ದಾಟಬೇಕಿದ್ದರೆ, ಟಾರ್ಚ ಹಿಡಿದೇ ತೆರಳಬೇಕು. ಯಾಕೆಂದರೆ ರಸ್ತೆ ಬದಿ ಬೀದಿ ದೀಪಗಳಿಲ್ಲ. ಹೈಮಾಸ್ಟ ದೀಪ ಇದ್ದರೂ ಇಲ್ಲದಂತಾಗಿದೆ.ಸಂಜೆ ಕತ್ತಲು ಉಂಟಾಗುತ್ತಿದ್ದಂತೆ ಸ್ಮಶಾನ ಮೌನ ಆವರಿಸಿ ಇಲ್ಲಿ ಯಾರು ನಿಲ್ಲದಂತಾಗುತ್ತದೆ.ಇದು ರಾಷ್ಟ್ರೀಯ ಹೆದ್ದಾರಿ-೧೫೦ಗೆ ಹೊಂದಿಕೊಂಡಿರುವ ರಸ್ತೆಯಲ್ಲಿ ಕಂಡು ಬರುವ ನಿತ್ಯದ ಸ್ಥಿತಿ.

ಹೌದು, ನಗರದ ವಾಡಿ-ಶಹಾಬಾದ ವೃತ್ತದಲ್ಲಿ ಹೈಮಾಸ್ಟ ದೀಪ ಇದ್ದು ಇಲ್ಲದಂತಾಗಿದ್ದು, ಜನರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಡಿಯೂರಪ್ಪ ಅಪರೂಪದ ರಾಜಕಾರಣಿ: ನಿಂಗಣ್ಣ ಹುಳಗೋಳಕರ್

ಸುಮಾರು ಐದಾರು ತಿಂಗಳ ಹಿಂದೆ ಜಿಪಂ ಚಿತ್ತಾಪೂರ ವಿಭಾಗದಿಂದ ಲಕ್ಷಗಟ್ಟಲೇ ಅನುದಾನದಲ್ಲಿ ಹೈಮಾಸ್ಟ ಕಂಬ ಮತ್ತು ದೀಪ ಅಳವಡಿಸಿ ಹೋಗಲಾಗಿದೆ.ಆದರೆ ಇಲ್ಲಿಯವರೆಗೆ ವಿದ್ಯುತ್  ಜೋಡಣೆ ಮಾಡದಿರುವುದರಿಂದ ಇಲ್ಲಿನ ಬಹುತೇಖ ಸಾರ್ವಜನಿಕರು ಹಾಗೂ ಪ್ರಯಾಣಿಕರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ. ರಾಷ್ಟ್ರೀಯ ಹೆದ್ದಾರಿ-೧೫೦ಗೆ ಹೊಂದಿಕೊಂಡಿರುವ ಮುಖ್ಯ ವೃತ್ತದಲ್ಲಿ ಈ ರಿತೀಯ ವ್ಯವಸ್ಥೆ ಕಂಡು ಬಂದಿದ್ದು, ಇಲ್ಲಿನ ಜನಪ್ರತಿನಿಧಿಗಳು ಕಾರ್ಯವೈಖರಿಗೆ ಹಿಡಿಶಾಪ ಹಾಕುತ್ತಿದ್ದಾರೆ.ದಟ್ಟ ಸಂಚಾರಿ ವ್ಯವಸ್ಥೆ ಹಾಗೂ ಚಿತ್ತಾಪೂರ,ವಾಡಿ, ಯಾದಗಿರಿ ಮುಖ್ಯ ನಗರಕ್ಕೆ ಈ ಮಾರ್ಗದ ಮೂಲಕವೇ ಸಾಕಷ್ಟು ವಾಹನಗಳು ಹೋಗುತ್ತವೆ. ಮುಖ್ಯ ವೃತ್ತವಾಗಿರುವುದರಿಂದ ಜನದಟ್ಟಣೆ ಸಾಕಷ್ಟಿರುತ್ತದೆ.

ಸಂಜೆ  ಕತ್ತಲು ಆವರಿಸಿರುವುದರಿಂದ ಪಾದಚಾರಿಗಳು, ವಾಯುವಿಹಾರ ಮಾಡುವವರು, ಪ್ರಯಾಣಿಕರು ಈ ಕಡೆ ಬರಲು ಭಯ ಪಡುತ್ತಿದ್ದಾರೆ. ಅಲ್ಲದೇ ವಾಹನಗಳ ಅಪಘಾತಗಳು ಹೆಚ್ಚುತ್ತಿವೆಯದರೂ ಯಾರು ಈ ಕಡೆ ಗಮಹರಿಸುತ್ತಿಲ್ಲ.ಹೈಮಾಸ್ಟ ದೀಪ ಅಳವಡಿಸಿ ವಿದ್ಯುತ್ ಜೋಡಣೆ ಮಾಡದಿರುವ ಗುತ್ತಿಗೆದಾರರಿಗೆ  ಮೇಲೆ ಕ್ರಮಕೈಗೊಂಡಿಲ್ಲ.ಅಲ್ಲದೇ ಸುಮಾರು ತಿಂಗಳಿಂನಿಂದ ಸಂಬಂಧಪಟ್ಟ ಅಧಿಕಾರಿ ಮೌನವಾಗಿದ್ದಾರೆ. ದೀಪವೇ ಉರಿಯುತ್ತಿಲ್ಲ ಎಂದರೆ ಲಕ್ಷಗಟ್ಟಲೇ ಸಾರ್ವಜನಿಕ ಹಣ ಪೋಲು ಮಾಡುವುದಾದರೂ ಯಾಕೇ? ಎಂಬ ಪ್ರಶ್ನೆ ಸಾರ್ವಜನಿಕರದ್ದು.ಜಿಪಂ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದರೇ ವಿದ್ಯುತ್ ಜೋಡಣೆ ಮಾಡದಿರುವುದು ಕೂಡ ಅವರಿಗೆ ಗೊತ್ತಿಲ್ಲ ಎಂಬ ಹೇಳಿಕೆ ನೀಡಿರುವುದು ಮಾತ್ರ ವಿಷಾದಧ ಸಂಗತಿ.ಕೂಡಲೇ ಹೈಮಾಸ್ಟ ದೀಪ ಉರಿಯುವಂತೆ ಮಾಡಬೇಕೆಂಬುದು ಸಾರ್ವಜನಿಕರು ಆಗ್ರಹವಾಗಿದೆ.

ವಾಡಿ-ಶಹಾಬಾದ ವೃತ್ತದಲ್ಲಿ ಬೆಳಕಿನ ವ್ಯವಸ್ಥೆ ಮಾಡಲು ಸಂಬಂಧಪಟ್ಟ ಅಧಿಕಾರಿಗೆ ತಿಳಿಸಿ ವ್ಯವಸ್ಥೆ ಮಾಡಿಸುತ್ತೆನೆ.ಅಲ್ಲದೇ ಪ್ರಯಾಣಿಕರಿಗೆ ಕೂಡಲು ಯಾವುದೇ ವ್ಯವಸ್ಥೆ ಇಲ್ಲ ಎಂದು ತಿಳಿದುಬಂದಿದ್ದು, ಸದ್ಯದಲ್ಲೇ ಬಸ್ ಸ್ಟ್ಯಾಂಡ್ ನಿರ್ಮಾಣ ಮಾಡಲಾಗುವುದು.  ಬಸವರಾಜ ಮತ್ತಿಮಡು ಶಾಸಕರು.

“ಮೇ ಆಜಾದ್ ತಾ. ಆಜಾದ್ ಹೊಂಔ ಆಜಾದ್ ಹೀ ರಹೊಂಗಾ “

ಮೊದಮೊದಲು ಅಧಿಸೂಚಿತ ಕ್ಷೇತ್ರ ಸಮಿತಿಯವರು ಹೈಮಾಸ್ಟ ದೀಪ ಅಳವಡಿಸಿದ್ದಾರೆ ಎಂದು ತಿಳಿದುಕೊಂಡಿದ್ದರು.ನಂತರ ದೀಪ ಬೆಳಗತ್ತಿಲ್ಲ ಎಂದು ಅವರಿಗೆ ತಿಳಿಸಿದರೇ,ಅದನ್ನು ನಾವು ಅಳವಡಿಸಿಲ್ಲ್ಲ ಎಂದು ಹೇಳಿದರು.ನಂತರ ನಗರಸಭೆಯ ಅಧಿಕಾರಿಗಳಿಗೆ ತಿಳಿಸಿದಾಗ ಅವರು ನಾವು ಅಳವಡಿಸಿದಲ್ಲ ಎಂದರು.ಆಗ ಯಾರಿಗೆ ಸೇರಿದ್ದು ಎಂಬ ಗೊಂದಲ ಉಂಟಾಗಿತ್ತು.ನಂತರ ಜಿಪಂ ಸಂಬಂಧಿಸಿದ್ದು ಎಂದು ತಿಳಿದಾಗ ಗೊಂದಲ ನಿವಾರಣೆಯಾಗಿದೆ.ಆದರೆ ಗೊಂದಲ ನಿವಾರಣೆಯಾದರೂ ಬೆಳಕಿನ ವ್ಯವಸ್ಥೆಯಾಗದಿರುವುದು ಮಾತ್ರ ದುರ್ದೈವ.

ಚಿತ್ತಾಪೂರ ಜಿಪಂದಿಂದ ಹೈಮಾಸ್ಟ ಕಂಬ ಮತ್ತು ದೀಪ ಅಳವಡಿಸಲಾಗಿದೆ.ಆದರೆ ವಿದ್ಯುತ್ ಜೋಡಣೆ ಮಾಡದಿರುವ ಬಗ್ಗೆ ಮಾಹಿತಿ ಇಲ್ಲ.ಕೂಡಲೇ ವಿದ್ಯುತ್ ದೀಪ ಬೆಳಗುವಂತೆ ಕ್ರಮಕೈಗೊಳ್ಳುತ್ತೆನೆ. -ಶ್ರೀಧರ್ ಜಿಪಂ ಎಇಇ ಚಿತ್ತಾಪೂರ

sajidpress

Recent Posts

ಜೇವರ್ಗಿ: ಲಂಚಾಪಡೆಯುತ್ತಿದ್ದಾಗ ಮಹಿಳಾ ಸಿಬ್ಬಂದಿ ಲೋಕಾಯುಕ್ತರ ಬಲೆಗೆ

ಕಲಬುರಗಿ: ನೀರಿನ ಕನೆಕ್ಷನಗಾಗಿ ಹತ್ತು ಸಾವಿರ ಲಂಚಾಪಡೆಯುತ್ತಿದ್ದಾಗ ಜೇವರ್ಗಿ ಪುರಸಭೆಯ ಮಹಿಳಾ ಸಿಬ್ಬಂದಿ ಲಣೊಕಾಯುಕ್ತರ ಬಲೆಗೆ ಬಿದ್ದ ಘಟನೆ ಬುಧವಾರ…

12 hours ago

371 ಜೆ ಅಡಿ ಉದ್ಯೋಗ ನೇಮಕಾತಿ ಸಂಬಂಧದ ಗೊಂದಲ ನಿವಾರಿಸಿ ಮಾರ್ಗಸೂಚಿ ಸಿದ್ಧಪಡಿಸಲು ಸಚಿವರ ಸೂಚನೆ

ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 371 ಜೆ ಅಡಿ ಉದ್ಯೋಗ ನೇಮಕಾತಿ ಹಾಗೂ ಬಡ್ತಿ ಸಂಬಂಧದಲ್ಲಿ ಆಗಿರುವ ಗೊಂದಲಗಳನ್ನು ನಿವಾರಿಸಿ…

13 hours ago

ಶ್ಯಾಮರಾವ ನಾಟಿಕಾರಗೆ ಅಧ್ಯಕ್ಷರನ್ನಾಗಿ ನೇಮಕಕ್ಕೆ ಡಾ. ಮಲ್ಲಿಕಾರ್ಜುನ ಖರ್ಗೆಗೆ ಮನವಿ

ಕಲಬುರಗಿ: ಆದಿಜಾಂಬವ ಸರ್ಕಾರಿ ಅರೆ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದ ನಿಯೋಗ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನ ಖರ್ಗೆ…

14 hours ago

ಚಿರಂಜೀವಿ ವೆಂಕಯ್ಯ ಕುಶಾಲ್ ಗುತ್ತೇದಾರ್ ಗೆ ಸನ್ಮಾನ

ಕಲಬುರಗಿ: ಮಾಜಿ ಸಚಿವರಾದ ಮಾಲಿಕೆಯ್ಯಾ ಗುತ್ತೇದಾರ್ ಅವರ ಅಪ್ಪಟ ಅಭಿಮಾನಿ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ…

14 hours ago

ಮಹಿಳಾ ಘಟಕದ ನೂತನ ಪದಾಧಿಕಾರಿಗಳ ನೇಮಕ

ಕಲಬುರಗಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಪ್ರಶಾಂತ್ ಗೌಡ ಮಾಲಿಪಾಟೀಲ್ ಅವರ ನೇತೃತ್ವದಲ್ಲಿ ಜಿಲ್ಲಾ…

14 hours ago

ಮಜರ್ ಆಲಂ ಖಾನ್ ಅಧ್ಯಕತೆಯಲ್ಲಿ ನಗರದ ವಿನ್ಯಾಸ ಮಾಲೀಕರು, ಡೆವಲಪರ್ಸ್, ಬಿಲ್ಡರ್ಸ್ ಅವರೊಂದಿಗೆ ಸಭೆ

ಕಲಬುರಗಿ: ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂ ಖಾನ್ ಇವರ ಅಧ್ಯಕ್ಷತೆಯಲ್ಲಿ ನಗರದ ಬಿಲ್ಡರ್ಸ್ ಡೆವಲಪರ್ಸ್ ಮತ್ತು ವಿನ್ಯಾಸದ ಮಾಲೀಕರವರೊಂದಿಗೆ…

14 hours ago