ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಕ್ಕೆ ಮಾದರಿಯನ್ನಾಗಿಸುವ ಗುರಿ: ನಿರಗುಡಿ

0
31

ಆಳಂದ: ಕಸಾಪ ಮತದಾರರು ಅವಕಾಶ ಒದಗಿಸಿಕೊಟ್ಟರೆ ಹಿರಿಯ, ಕಿರಿಯ ಸಾಹಿತಿಗಳು ಮತ್ತು ಕನ್ನಡಾಭಿಮಾನಿಗಳನ್ನು ಒಂದುಗೂಡಿಸಿ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವಿನೂತನ ಕಾರ್ಯ ಚಟುವಟಿಕೆಗಳು ಜಾರಿಗೆ ತರುವ ಮೂಲಕ ರಾಜ್ಯಕ್ಕೆ ಮಾದರಿಯನ್ನಾಗಿಸುವ ಎಂದು ಕಸಾಪ ಜಿಲ್ಲಾ ಮಾಜಿ ಗೌರವ ಕಾರ್ಯದರ್ಶಿ ಲೇಖಕ ಬಿ.ಎಚ್. ನಿರಗುಡಿ ಅವರು ಹೇಳಿದರು.

ತಾಲೂಕಿನ ಖಜೂರಿ ಕೋರಣೇಶ್ವರ ಮಠಕ್ಕೆ ಕಸಾಪ ಚುನಾವಣೆ ಹಿನ್ನೆಲೆಯಲ್ಲಿ ಸ್ವತಃ ಸ್ಪರ್ಧಾ ಆಕ್ಷಾಂಕಿಯಾಗಿರುವ ನಿರುಗಡಿ ಅವರು, ಶನಿವಾರ ಭೇಟಿ ನೀಡಿದ ಬಳಿಕ ಪೀಠಾಧಿಪತಿ, ಕಸಾಪ ಆಜೀವ ಸದಸ್ಯರಾದ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳಿಂದ ಆಶೀರ್ವಾದ ಪಡೆದು ಅವರು ಮಾತನಾಡಿದರು.

Contact Your\'s Advertisement; 9902492681

ದೇವರಗೋನಾಲ ತಾಪಂ ಕ್ಷೇತ್ರ ಸ್ಥಳಾಂತರಿಸದಂತೆ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ

ಈಗಾಗಲೇ ಜಿಲ್ಲಾ ಕಸಾಪ ಹಲವು ಹುದ್ದೆಗಳಿಂದ ಸಾಹಿತ್ಯಕವಾಗಿ ವಿನೂತನ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಬಾರಿಯೂ ಕಸಾಪ ಮತದಾರರ ಒತ್ತಾಯಸೆಯ ಮೆರೆಗೆ ಚುನಾವಣೆಗೆ ಕಣಕ್ಕಿಳಿಯುತ್ತಿದ್ದೇನೆ. ಕಲಬುರಗಿ ನಗರ ಸೇರಿ ಎಲ್ಲ ತಾಲೂಕುಗಳಲ್ಲಿ ಮತದಾರರ ಒಲವು ತೋರಿಸಿದ್ದು, ಇಷ್ಟಾಗಿಯೂ ಸಹ ಹೆಚ್ಚಿನ ಮತಗಳಿಂದ ಗೆಲ್ಲಲು ಬಯಸಿದ್ದು, ಮತದಾರರ ಆಶೀರ್ವದಿಸಬೇಕು ಎಂದು ಮನವಿ ಅವರು ಮಾಡಿದರು.

ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ, ಹಿರಿಯ ಪತ್ರಕರ್ತ ಪಿ.ಎಂ. ಮಣ್ಣೂರ ಮಾತನಾಡಿ, ಜಿಲ್ಲೆಯಲ್ಲಿ ಸಾಹಿತ್ಯ ವಾತಾವರಣಕ್ಕೆ ಮತದಾರರು ಹೊಸ ಮುಖವನ್ನು ಬಯಸಿದ್ದಾರೆ. ಹೀಗಾಗಿ ಬಿ.ಎಚ್. ನಿರಗುಡಿ ಅವರು ಸಾಹಿತಿ, ಕವಿ, ಲೇಖಕ ಉಪನ್ಯಾಸಕರಾಗಿದ್ದು, ಅಲ್ಲದೆ ಈ ಹಿಂದೆ ಕಸಾಪ ಜಿಲ್ಲಾ ಕಾರ್ಯದರ್ಶಿಯಾಗಿ, ಗೌರವ ಕಾರ್ಯದರ್ಶಿಯಾಗಿ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ನಿರಗುಡಿ ಅವರು ಸೂಕ್ತವ್ಯಕ್ತಿಯಾಗಿದ್ದಾರೆ. ಮತದಾರರು ಒಗ್ಗಟ್ಟಿನಿಂದ ಇವರಿಗೆ ಮತನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಬೇಸಿಗೆ ಬರುತ್ತಿದೆ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಿ: ವೆಂಕಟೇಶ ಬೇಟೆಗಾರ

ಜಿಲ್ಲಾ ಕಸಾಪ ಚುನಾವಣೆ ಸಂಭ್ಯಾವ್ಯ ಅಭ್ಯರ್ಥಿ ಬಿ.ಎಚ್. ನಿರಗುಡಿ ಅವರಿಗೆ ಪೀಠಾಧಿಪತಿ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು ಶಾಲು ಹೊದಸಿ ಆಶೀರ್ವದಿಸಿ ಮಾತನಾಡಿದ ಅವರು, ಬಿ.ಎಚ್. ನಿರಗುಡಿ ಅವರು ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸೂಕ್ತವ್ಯಕ್ತಿಯಾಗಿದ್ದಾರೆ. ಕಸಾಪ ಕಾರ್ಯಚಟುವಟಿಕೆ ನಿಂತ ನೀರಾಗದೆ ಹರಿಯುವ ನದಿಯಂತೆ ಸಾಹಿತ್ಯದ ವಾತಾವರಣ ಸೃಷ್ಟಿಯಾಗಬೇಕು. ನಿರಗುಡಿಯಂತ ಸಾಹಿತ್ಯಾಸಕ್ತರು ಅಧಿಕಾರಕ್ಕೆ ಬರಬೇಕು ಎಂದರು.

ಜಿಪಂ ಮಾಜಿ ಸದಸ್ಯ ಶರಣಪ್ಪ ಚಿಂಚೋಳಿ, ಕವಿ ಚಾಮರಾಜ ದೊಡ್ಡಮನಿ ಮಾತನಾಡಿದರು. ಉಪನ್ಯಾಸಕ ರಾಜಕುಮಾರ ಹಿರೇಮಠ, ಶಾಂತಪ್ಪ ಕೋರೆ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here