ಜೋಶಿಯವರನ್ನೇ ಯಾಕೆ ಆಯ್ಕೆ ಮಾಡಬೇಕು

0
77
  • ಡಾ. ಶಿವರಂಜನ್ ಸತ್ಯಂಪೇಟೆ

ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಅಧ್ತಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನಾಡೋಜ ಮಹೇಶ ಜೋಶಿಯವರು ಇಂದು ಕಲಬುರಗಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಅವರನ್ನು ಇ-ಮೀಡಿಯಾ ಮಾತನಾಡಿಸಿತು. ಅದರ ವಿವರ ಇಲ್ಲಿದೆ.

Contact Your\'s Advertisement; 9902492681

ಪ್ರ: ಕಸಾಪ ಚುನಾವಣೆಗೆ ನಿಲ್ಲುವ ಉದ್ದೇಶವೇನು?

ಉತ್ತರ: ದೂರದರ್ಶನ ಚಂದನ ದೆಹಲಿ ಮತ್ತು ದಕ್ಷಿಣ ಭಾರತದ ಹೆಚ್ಚುವರಿ ಮಹಾ ನಿರ್ದೇಶಕನಾಗಿ ವಿಶ್ರಾಂತ ಜೀವನ ನಡೆಸುತ್ತಿರುವ ನಾನು, ನನ್ನ ಕೈಲಾದಷ್ಟು ಕನ್ನಡ ಸೇವೆ ಮಾಡುವ ಉದ್ದೇಶವಿದೆ.

ಪ್ರ: ನಿಮ್ಮನ್ನು ಯಾಕೆ ಗೆಲ್ಲಿಸಬೇಕು?

ಉತ್ತರ: ನಾನು ಕಸಾಪ ಸ್ಪರ್ಧಾಳು ಅಲ್ಲ. ನಾನು ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಆಕಾಂಕ್ಷಿ ಅಲ್ಲ. ಕನ್ನಡದ ಸೇವಾಕಾಂಕ್ಷಿ.

ಪ್ರ: ನೀವು ಆಯ್ಕೆಯಾದರೆ ಮಾಡುವ ಕೆಲಸವೇನು?

ಉತ್ತರ: ಮತದಾರ ಪ್ರಭುಗಳು ನನ್ನನ್ನು ಆಯ್ಕೆ ಮಾಡಿದರೆ ಕನ್ನಡದ ಸೇವೆಯ ಜೊತೆಗೆ ಕಸಾಪವನ್ನು ಜನೋಪಯೋಗಿ ಹಾಗೂ ಜನಪರವಾಗಿಸುತ್ತೇನೆ. ಈಗಿರುವ ಕಸಾಪ ಬೈಲಾವನ್ನು ತಿದ್ದುಪಡಿ ಮಾಡಲು ನಿವೃತ್ತ ನ್ಯಾಯಾಧೀಶರ ಸಮಿತಿ ರಚಿಸುವ ಮೂಲಕ ಕಾಲದ ಬದಲಾವಣೆಗೆ ಪರಿಷತ್ತು ಒಗ್ಗಿಕೊಳ್ಳುವಂತೆ ಮಾಡುತ್ತೇನೆ.

ಪ್ರ: ಸಂತ ಶಿಶುನಾಳ ಶರೀಫ್ ಮತ್ತು ಅವರ ಗುರುಗಳಾದ ಗುರುಗೋವಿಂದ ಭಟ್ಟರ ಟ್ರಂಪ್ ಕಾರ್ಡ್ ಚುನಾವಣೆಯಲ್ಲಿ ಯಶಸ್ವಿಯಾಗಬಹುದೇ?

ಉತ್ತರ: ನಮ್ಮದು ಬಹುತ್ವದ ನಾಡು, ಇಲ್ಲಿ ಭಾವೈಕ್ಯತೆಯಲ್ಲಿ ಐಕ್ಯತೆ ಕಾಣುವುದು ಮುಖ್ಯವಾಗಿದೆ. ಮೇಲಾಗಿ ನಮ್ಮಜ್ಜ ಆ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಹೀಗಿದ್ದಾಗ ಈ ಟ್ರಂಪ್ ಕಾರ್ಡ್ ನ್ನು ನಾನು ಬಳಸುವುದರಲ್ಲಿ ತಪ್ಪೇನಿದೆ?

ಪ್ರ: ನೀವು ಕಸಾಪ ಕಟ್ಟುವ ಬಗೆ ಹೇಗೆ?

ಉತ್ತರ: ಸದಸ್ಯತ್ವ ಪಡೆಯುವ ವಿಧಾನವನ್ನು ಸರಳೀಕರಣಗೊಳಿಸುವುದು, ವೆಬ್ ಸೈಟ್ ಮೂಲಕ ಕಸಾಪ ಕಾರ್ಯಚಟುವಟಿಕೆಗಳನ್ನು ಸೀಮಿತ ವರ್ಗಕ್ಕೆ ತಲುಪಿಸುವುದು, ಹಳ್ಳಿ ಹಳ್ಳಿಗೆ ಪಾದಯಾತ್ರೆ ಮಾಡಿ ಅಲ್ಲಿರುವ ಕನ್ನಡ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡುವುದು ಸೇರಿದಂತೆ ನನ್ನದೇ ಆದ ಹಲವು ಯೋಜನೆ-ಯೋಚನೆಗಳನ್ನು ಹಾಕಿಕೊಂಡಿದ್ದೇನೆ.

ಪ್ರ: ಕನ್ನಡ ಅನ್ನದ ಭಾಷೆ ಆಗುವುದು ಯಾವಾಗ?

ಉತ್ತರ: ಕನ್ನಡಿಗರಿಗೆ ಉದ್ಯೋಗದಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಎಲ್ಲರ ಗಮನ ಸೆಳೆದು ಕನ್ನಡ ಅನ್ನದ ಭಾಷೆಯಾಗಲು ಭಗೀರಥ ಪ್ರಯತ್ನ ನಡೆಸುತ್ತೇನೆ. ಅಖಿಲ ಭಾರತ ಮಟ್ಟದ ಪರೀಕ್ಷೆಯಲ್ಲಿ ಕನ್ನಡವನ್ನು ಒಂದು ಮಾಧ್ಯಮವನ್ನಾಗಿ ಮಾಡಿಸುತ್ತೇನೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here