ನುರಿತ ಸಿಬ್ಬಂಧಿಗಳು ಮಹಾವಿದ್ಯಾಲಯಗಳ ಬೆನ್ನೆಲುಬು: ಡಾ. ಎಸ್ಎಸ್ ಹೆಬ್ಬಾಳ

ಕಲಬುರಗಿ: ಪ್ರಸ್ತುತ ತಾಂತ್ರಿಕ ಶಿಕ್ಷಣ ಕ್ಷೇತ್ರಗಳಲ್ಲಿ ನುರಿತ ಸಿಬ್ಬಂಧಿಗಳ ಕೊರತೆಯಿದ್ದು ಇದನ್ನು ನಿವಾರಿಸಲು ತಾಂತ್ರಿಕ ಕಾರ್ಯಾಗಾರಗಳ ಅವಶ್ಯಕತೆಯಿದ್ದು, ಸಿಬ್ಬಂಧಿಗಳು ಇಂತಹ ಕಾರ್ಯಾಗಾರಗಳಲ್ಲಿ ಭಾಗವಹಿಸಿ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಪ್ರಸ್ತುತ ಮಾಹಿತಿ ತಂತ್ರಜ್ಞಾನದ ಯುಗವಾಗಿದ್ದು, ಮಾಹಿತಿಯನ್ನು ಕಲೆಹಾಕುವುದು, ಸಂರಕ್ಷಿಸುವುದು ಹಾಗೂ ಅದನ್ನು ನಮಗೆ ಬೇಕಾಗಿರುವ ರೀತಿಯಲ್ಲಿ ಪ್ರಸ್ತುತ ಪಡಿಸುವದು ಅವಶ್ಯಕವಾಗಿದೆ ಅದಕ್ಕಾತಿ ಬೇಕಾಗಿರುವ ಎಲ್ಲ ರೀತಿಯ ಸಾಫ್ಟ್ ವೇರಗಳನ್ನು ಬಳಸುವುದು ಕಲಿಯಬೇಕು ಎಂದು ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯ ಪ್ರಾಚಾರ್ಯರಾದ ಡಾ. ಎಸ್. ಎಸ್. ಹೆಬ್ಬಾಳ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.  ಅವರು ಇಂದು ಇಲ್ಲಿನ ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ನಡೆಯುವ ಟೆಕ್ವಿಪ್-೩ ಪ್ರಾಯೋಜಿತ ಐದು ದಿನಗಳ “ಡೇಟಾ ಬೇಸ್ ಅಡ್ಮಿನಿಸ್ಟ್ರೇಶನ್ ಮತ್ತು ನೆಟ್ ವರ್ಕ ಮ್ಯಾನೇಜಮೆಂಟ ಕಾರ್ಯಾಗಾರ” ವನ್ನು ಉದ್ಘಾಟಿಸಿ ಮಾತನಾಡಿದರು.

ಉದ್ಘಾಟನಾ ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಆಗಮಿಸಿದ ಮಹಾವಿದ್ಯಾಲಯದ ಡೀನ ಅಕಾಡೆಮಿಕ ಡಾ. ಎಸ್. ಆರ್. ಪಾಟೀಲ ಅವರು ಮಾತನಾಡಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ನಾವು ಕಾರ್ಯಾಗಾರಗಳಲ್ಲಿ ಭಾಗವಹಿಸುವುದು ಹಾಗೂ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದು ಅತಿ ಅವಶ್ಯವಾಗಿದೆ ಹಾಗೂ ಇದರಿಂದಾಗಿ ನಮಗೆ ಪ್ರಸ್ತುತ ಜಗತ್ತಿಗೆ ಬೇಕಾಗಿರುವ ತಾಂತ್ರಿಕ ಜ್ಞಾನದ ಅಗತ್ಯತೆಯ ಅರಿವಾಗುವುದು ಎಂದು ಹೇಳಿದರು.

ಸಾಯಬಣ್ಣಾ ಗುಡುಬಾ ಇವರಿಗೆ ಪಿಎಚ್‍ಡಿ

ಮಹಾವಿದ್ಯಾಲಯದ ಟೆಕ್ವಿಪ್-೩ ರ ಸಂಚಾಲಕರಾದ ಪ್ರೊ. ಶರಣ ಪಡಶೆಟ್ಟಿ ಅವರು ಮಾತನಾಡಿ ಮಾರ್ಚ ೨೨ ರಿಂದ ೨೬ರ ವರೆಗೆ ನಡೆಯುವ ಈ ಕಾರ್ಯಾಗಾರಕ್ಕೆ ತಾಂತ್ರಿಕ ಶಿಕ್ಷಣ ಕ್ಷೇತ್ರದ ಸುಮಾರು ೬೦ ಸಿಬ್ಬಂಧಿಗಳು ಭಾಗವಹಿಸಿದ್ದು ಇದರ ಲಾಭ ಪಡೆಯಲಿದ್ದಾರೆಂದು ತಿಳಿಸಿದರು. ಅದೇ ರೀತಿ ಪಿ.ಡಿ.ಎ. ಕಾಲೇಜಿನ ಇನ್ನೂ ಹಲವಾರು ವಿಭಾಗಗಳಲ್ಲಿ  ಇದೇ ರೀತಿಯ ಕಾರ್ಯಗಾರ ಹಾಗೂ ಉಪನ್ಯಾಸ ಮಾಲಿಕೆಗಳು ನಡೆಯುತ್ತಿದ್ದು ಇದರಿಂದಾಗಿ ಶಿಕ್ಷರಿಗೆ ಹಾಗೂ ಸಿಬ್ಬಂಧಿಗಳಿಗೆ ಅನುಕೂಲವಾಗುವುದು ಎಂದು ಹೇಳಿದರು.

ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥೆ ಮತ್ತು ಕಾರ್ಯಾಗಾರದ ಸಂಯೋಜಕಿಯಾದ ಡಾ. ಭಾರತಿ ಹರಸೂರ ಅವರು ಸರ್ವರಿಗೂ ಸ್ವಾಗತಿಸಿ ಕಾರ್ಯಾಗಾರದಲ್ಲಿ ಭಾಗಹಿಸಿದ ಸಿಬ್ಬಂಧಿಗಳಿಗೆ ಇದರ ಸದುಪಯೋಗ ಪಡೆಯಲು ವಿನಂತಿಸಿಕೊಂಡರು. ಕಾರ್ಯಕ್ರಮದ ಸಂಚಾಲಕರಾದ ಪ್ರೊ. ಅಶೋಕ ಪಾಟೀಲರು, ಕಾರ್ಯಾಗಾರದ ಕುರಿತು ಸಮಗ್ರ ಮಾಹಿತಿ ನೀಡಿದರು. ಪ್ರೊ. ಗುರಪ್ಪ ಕಲ್ಯಾಣಿ ಅವರು ಸಹ ಸಂಚಾಲಕರಾಗಿ ತಮ್ಮ ಕಾರ್ಯ ನಿರ್ವಹಿಸಿದರು. ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಉದಯ ಬಳಗಾರ ಅವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮವನ್ನು ವಿಭಾಗದ ಪ್ರೊ. ಪ್ರಿಯಾಂಕಾ ದೇವಣಿ ಅವರು ನಿರೂಪಿಸಿದರು.

ತೊಗರಿ ಕಣಜ ಸ್ಥಾಪನೆಗೆ ಕನ್ನಡ ಭೂಮಿ ಆಗ್ರಹ

ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎಸ್.ಎಸ್.ಹೆಬ್ಬಾಳ ಅವರು ಈ ವಿಚಾರ ಸಂಕಿರಣದ ಜನರಲ್ ಚೇರ್ ಅಗಿದ್ದು, ಡಾ.ಭಾರತಿ ಹರಸೂರು, ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥರು ಇವರು ಸಂಯೋಜಕರಾಗಿ ಹಾಗೂ ಅದೇ ವಿಭಾಗದ ಶ್ರೀ. ಅಶೋಕ ಪಾಟೀಲ ಹಾಗೂ ಗುರಪ್ಪ ಕಲ್ಯಾಣಿ ಅವರು ಕಾರ್ಯಾಗಾರದ ಸಂಚಾಲಕರಾಗಿ ತಮ್ಮ ಕಾರ್ಯ ನಿರ್ವಹಿಸಿದರು.

ಉಪ-ಪ್ರಾಚಾರ್ಯರಾದ ಡಾ. ಎಸ್. ಎಸ್. ಕಲಶೇಟ್ಟಿ, ಡೀನ ಅಕಾಡೆಮಿಕ ಡಾ. ಎಸ್. ಆರ್. ಪಾಟೀಲ, ಟೆಕ್ವಿಪ್ ಸಂಚಾಲಯಕರಾದ ಪ್ರೊ. ಶರಣ ಪಡಶೆಟ್ಟಿ, ಹೆಚ್ಚುವರಿ ಡೀನ ಡಾ. ವಿಶ್ವನಾಥ ಬುರಕಪಳ್ಳಿ ಸಲಹೇಗಾರರಾಗಿ ತಮ್ಮ ಕಾರ್ಯನಿರ್ವಹಿಸಿದರು.

ಸಾಯಬಣ್ಣಾ ಗುಡುಬಾ ಇವರಿಗೆ ಪಿಎಚ್‍ಡಿ

ವಿಭಾಗದ ಚಂದ್ರಕಾಂತ ಬೀರಾದಾರ, ನಿತಿನ ಕಟ್ಟಿಶೆಟ್ಟರ, ಗೌರಿ ಪಾಟೀಲ, ಶರಣು ಹುಲಿ, ರಶ್ಮೀ ತಳ್ಳಳಿ, ಅರ್ಚನಾ ಪಾಟೀಲ, ಸುಮಾ, ಮಲ್ಲಿಕಾರ್ಜುನ ರೆಡ್ಡಿ, ಅಂಬಾರಾಯ, ಗಂಗಾ ಧಾರಕ ಗೀತಾ,  ಕವಿತಾ ಮತ್ತು ಸುವರ್ಣಾ ಎಮ್.ಐ. ಅವರು ಕಾರ್ಯಾಗಾರದ ಸಂಘಟಕರಾಗಿ ಕಾರ್ಯನಿರ್ವಹಿಸಿದರು.

emedialine

Recent Posts

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

28 mins ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

37 mins ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

39 mins ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

45 mins ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

47 mins ago

ನಮೋಶಿ ನೇತೃತ್ವದಲ್ಲಿ, ಕಲ್ಯಾಣ ಕರ್ನಾಟಕ ವಿಭಾಗದ ಪ್ರೌಢಶಾಲಾ ಶಿಕ್ಷಕರ ಸಭೆ

ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…

51 mins ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420