ವಿಶ್ವ ರಂಗಭೂಮಿ ದಿನಾಚರಣೆ

0
137

ಕಲಬುರಗಿ: ಭಗತ್ ಯುವ ಬಳಗ ಹಾಗೂ ನವಚೇತನ ಸಾಂಸ್ಕೃತಿಕ ಕಲಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯ ಆಚರಿಸಲಾಯಿತು. ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಲಾಯಿತು.

ದೇವಾನಂದ್ ಎಸ್ ಪಿ ಅವರಿಂದ ಪ್ರಾರ್ಥನಾ ಗೀತೆ , ಗಂಗಮ್ಮ ವಾಲಿಕಾರ್ ಅವರಿಂದ ಸ್ವಾಗತ ಗೀತೆ , ಭಾಗ್ಯಶ್ರೀ ಮಾಲಿಪಾಟೀಲ ಅವರಿಂದ ಸ್ವಾಗತ ಭಾಷಣ.
ಸೈಬಣ್ಣಾ (ಉಪ್ಪಿ) ರಂಗಭೂಮಿ ಕಲಾವಿದರು ಕಲಬುರಗಿ ಉದ್ಘಾಟಿಸಿದರೆ , ಮುಖ್ಯ ಅತಿಥಿಗಳಾಗಿ ರಂಗಭೂಮಿ ಕಲಾವಿದರಾದ ಭೈರವ ಎಂ ಪೂಜಾರಿ ವೇದಿಕೆ ಅಲಂಕರಿಸಿ
ರಂಗಭೂಮಿ ದಿನದ ರಂಗ ಸಂದೇಶ ವಾಚನ ಮಾಡಿದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಪ್ರವೀಣ ನಾಯಕ್ ಅವರು ಅಧ್ಯಕ್ಷತೆ ವಹಿಸಿದ್ದರು.

Contact Your\'s Advertisement; 9902492681

ರಂಗಸಂದೇಶದ ನೆನಪಿನ ಕಾಣಿಕೆ ಕೊಡುವುದರ ಮೂಲಕ ಗಣ್ಯರನ್ನು ಗೌರವಿಸಲಾಯಿತು. ಅಂಬರೀಶ್ ಮರಾಠಾ ನಿರೂಪಿಸಿದರು , ಸಾಗರ್ ಘಾಳೆ ವಂದನಾಪರ್ಣೆ ಮಾಡಿದರು.

ನಂತರ ಭಗತ್ ಯುವ ಬಳಗ ಪ್ರಸ್ತುತಿಯಲ್ಲಿ ನಾಟಕ “ಛಲವಂತ ಮಕ್ಕಳು” ಪ್ರದರ್ಶನವಾಯಿತು. ತದನಂತರ ನವಚೇತನ ಸಾಂಸ್ಕೃತಿಕ ಕಲಾ ಸಂಸ್ಥೆ ಪ್ರಸ್ತುತಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರ್ಯಕ್ರಮದ ಕಳೆ ಹೆಚ್ಚಿಸಿದವು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here