ಟೇಂಗಳಿ ಗ್ರಾಮದಲ್ಲಿ ಮಾಸಿಕ ವಚನೋತ್ಸವ

ಕಲಬುರಗಿ: ಕಾಳಗಿ ತಾಲೂಕಿನ ಟೇಂಗಳಿ ಗ್ರಾಮದಲ್ಲಿ ಲಿಂಗೈಕ್ಯ ನಾಗಣ್ಣಾ ಆಂದೇಲಿ ಅವರ ೩ನೇ ಪುಣ್ಯಸ್ಮರಣೆ ಹಾಗು ಶಿಲಾಭವನ ನಿರ್ಮಾಣ ಉದ್ಘಾಟನೆ ನಿಮಿತ್ತ ಮಾಸಿಕ ವಚನೋತ್ಸವ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ್ ಟೇಂಗಳಿ ಶಾಂತೇಶ್ವರ ಮಠದ ಪೂಜ್ಯ ಡಾ. ಶಾಂತಸೋಮನಾಥ ಶಿವಾಚಾರ್ಯರು ಆಶೀರ್ವಚನ ನೀಡಿದರು. ವಚನೋತ್ಸವ ಯುವ ಘಟಕದ ಅಧ್ಯಕ್ಷ ಶಿವರಾಜ ಅಂಡಗಿ ಮಾತನಾಡುತ್ತಾ ವಚನ ಸಾಹಿತ್ಯವನ್ನು ಜನಸಾಮಾನ್ಯರಿಗೆ ಮುಟ್ಟುವಂತೆ ತಿಂಗಳಿಗೊಮ್ಮೆ ಮಾಸಿಕ ವಚನೋತ್ಸವ ಎಂಬ ಶಿರ್ಷಿಕೆಯಡಿಯಲ್ಲಿ ಯುವ ಘಟಕದ ವತಿಯಿಂದ ನಡೆಸುವ ಮೂಲಕ ವಿಶೇಷವಾಗಿ ಮಕ್ಕಳು ಮತ್ತು ಮಹಿಳೆಯರು ವಚನ ವಿಶ್ಲೇಷಣೆಯಲ್ಲಿ ಭಾಗವಹಿಸುವ ಮೂಲಕ ಮಕ್ಕಳಿಂದ ವಚನ ಪಠಣ  ಜರುಗುವುದು ಎಂದು ಪ್ರಸ್ತಾವಿಕವಾಗಿ ಮಾತನಾಡಿದರು.

ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸರ್ಕಾರಿ ನೌಕರರ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಮನವಿ

ನಿವೃತ್ತ ಪಿ.ಎಸ್.ಐ ಶರಣಬಸಪ್ಪ ಅವಂಟಿ, ಮಲ್ಲಿನಾಥ ಬೆರನ್, ತೋಟಯ್ಯಾ ಸ್ವಾಮಿ ಸಂಗಾವಿ, ಪ್ರೊ. ಸಿದ್ರಾಮಪ್ಪ ಅಂಡಗಿ, ಡಾ. ಓಂಪ್ರಕಾಶ ಹೆಬ್ಬಾಳ ವೇದಿಕೆ ಮೇಲೆ ಉಪಸ್ಥಿತರಿದ್ದರು. ಶಿಲಾಭವನ ನಿರ್ಮಾಣ ಮಾಡಿದ 3ಜನ ಅಂದರೆ ಸಕ್ರೆಪ್ಪ ಲಾಳಿ, ಮಹಾದೇವ ವಾರದ ಮತ್ತು ಓಂಪ್ರಕಾಶ ಹೆಬ್ಬಾಳ ಅವರಿಗೆ ಶ್ರೀಗಳಿಂದ ನೆನಪಿನ ಕಾಣಿಕೆ ನೀಡಿ ಸತ್ಕರಿಸಲಾಯಿತು. ಪ್ರಾರಂಭದಲ್ಲಿ ಶರಣಬಸಪ್ಪಾ ಆಂದೇಲಿ ಸ್ವಾಗತಿಸಿದರು, ಅಣವೀರಪ್ಪಾ ಆಂದೇಲಿ ವಂದಿಸಿದರು. ವಿನೋದಕುಮಾರ ಜೇನವೆರಿ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಇಂಜಿನಿಯರ ಸಂಗಮೇಶ ಹೆಬ್ಬಾಳ, ಅವಿನಾಶ ಅಂಡಗಿ, ಸಂಗಣ್ಣಾ ಕುರಕುಂಟೆ, ಚಂದ್ರು ಕಡ್ಲಿ, ರವಿ ಶೀಲವಂತ, ಬಸವರಾಜ ಬಿರಾದಾರ, ಶ್ರೀಶೈಲ್ ಬಿರಾದಾರ, ಬಸಲಿಂಗಪ್ಪ ಗೋಗಿ, ಸಕ್ರೆಪ್ಪ ಲಾಳಿ, ಮಹಾದೇವ ವಾರದ, ಪಂಡಿತರಾವ ಅಂಕಲಗಿ, ಸಿದ್ದಪ್ಪ ಆಂದೇಲಿ, ಶಿವಶರಣಪ್ಪ ಶೀಲವಂತ, ನಿಜಲಿಂಗಪ್ಪ ಲಾಳಿ, ಅಮೃತರಾವ ಪಂಚಾಳ, ತಿಪ್ಪಣ್ಣ ಮಾಡಬೂಳ, ಬಾಬುರಾವ ಮರಾಠಾ, ಶರಣಬಸಪ್ಪ ಗೋಗಿ, ಶರಣಯ್ಯ ಬಂಕಲಗಿ, ಮಹಾದೇವ ಮಠಪತಿ, ಚನ್ನಬಸಪ್ಪ ಮದರಿ, ಭೀಮಾಶಂಕರ ಪಡಶೆಟ್ಟಿ, ಸಿದ್ದು ಪಂಚಾಳ, ಶರಣು ಸಾಲಕ್ಕಿ, ಅಣವೀರಪ್ಪ ಶೀಲವಂತ, ಖಾಜಾಪಟೇಲ, ಗುರುಲಿಂಗಯ್ಯಾ ಸ್ವಾಮಿ ಹಾಗು ಇತರರು ಉಪಸ್ಥಿತಿರದ್ದರು.

emedialine

Recent Posts

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

2 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

2 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

4 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

15 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

17 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

18 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420