ಸಿಯುಕೆಯಲ್ಲಿ ಯಶಸ್ವಿ ಪ್ರದರ್ಶನ ಕಂಡ ‘ಸರ್ವರಿಗೂ ಸಂವಿಧಾನ’ ನಾಟಕ

ಕಲಬುರಗಿ: ಇಂದು ನಮ್ಮ ಕೇಂದ್ರೀಯ ವಿಶ್ವವಿದ್ಯಾಲಯ ಒಂದು ಐತಿಹಾಸಿಕ ಘಳಿಗೆಗೆ ಸಾಕ್ಷಿಯಾಗುತ್ತಿದೆ ಎಂದು ನಾನು ಭಾವಿಸಿದ್ದೇನೆ. ಡಾ. ಬಿ ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರ ರಂಗಾಯಣದ ಜೊತೆಗೂಡಿ ಇಂತಹ ಅದ್ಭುತವಾದ ವಿಷಯದ ಬಗ್ಗೆ ನಾಟಕವೊಂದನ್ನು ರಚಿಸಿದೆ.

ಸಂವಿಧಾನವನ್ನು ಅರಿಯುವುದು ಮತ್ತು ಅದನ್ನು ಅನುಷ್ಠಾನ ಮಾಡುವುದು ವ್ಯಕ್ತಗತ ಹಾಗು ಸಾಮೂಹಿಕ. ಇದನ್ನು ಜನಸಾಮ್ಯಾನರಿಗೆ ಅರಿಯುವಂತೆ ಮಾಡಿದರೆ ಈ ನಾಟಕದ ಗುರಿ ತಲುಪಿದಂತೆ. ಸಂವಿಧಾನದ ಎಲ್ಲಾ ಅಂಶಗಳಿಗೆ ಈ ನಾಟಕ ಹೇಗೆ ಒತ್ತು ನೀಡುತ್ತದೆ ಎಂಬುದು ಈ ನಾಟಕದ ಪ್ರಾಮುಖ್ಯತೆ ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಎಂ.ವಿ ಅಲಗವಾಡಿ ಹೇಳಿದರು.

ಕೋವಿಡ್ ಲಸಿಕೆ ಪಡೆದ ಹೈಕೋರ್ಟ್ ಪೀಠದ ನ್ಯಾಯಾಧೀಶರು

ಅವರು ವಿಶ್ವವಿದ್ಯಾಲಯದ ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರವು ರಂಗಾಯಣ ಕಲಬುರಗಿಯ ಸಹಯೋಗದೊಂದಿಗೆ ಪ್ರಸ್ತುತಪಡಿಸಿದ ‘ಸರ್ವರಿಗೂ ಸಂವಿಧಾನ’ ಎಂಬ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ.ಎಚ್.ಟಿ.ಪೋತೆ ಮಾತನಾಡಿ, ಭಾರತೀಯ ಪ್ರಜೆಯೆಂದು ಹೇಳಲು ನಾವು ಹೆಮ್ಮೆ ಪಡುವುದು ನಮ್ಮ ಸಂವಿಧಾನದಿಂದ. ಅದರ ನಿರ್ಮಾಣ ಮಾಡಿದವರಿಗೆ ನಾವು ಯಾವತ್ತಿಗೂ ಚಿರಋಣಿಯಾಗಿರಬೇಕು. ಸಮಾನ ಹಕ್ಕು ಸಂವಿಧಾನದ ಮಹತ್ವ ಸಾರುತ್ತದೆ. ಸಂವಿಧಾನ ಇಡೀ ಭಾರತೀಯರಿಗೆ ಮಾಡಿರುವಂತದ್ದು ಯಾವುದೇ ಒಂದು ಸಮುದಾಯಕ್ಕಾಗಿ ಅಲ್ಲ ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಸಂವಿಧಾನದ ವಿದ್ಯಾರ್ಥಿಗಳಿಗೆ ರುವು ಮೂಡಿಸುವ ನಿಟ್ಟಿನಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಮೊದಲ ಹೆಜ್ಜೆಯನ್ನು ಇಟ್ಟಿದೆ. ಇದಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದರು.

ಮನೆ ಮನೆಗೆ ತೆರಳಿ ಕೊರೋನಾ ಲಸಿಕೆ ಹಾಕಲು ಶಿವರಾಜ ಅಂಡಗಿ ಆಗ್ರಹ

ಇನ್ನೊರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಬಸವರಾಜ ಡೋಣೂರ ಮಾತನಾಡಿ, ಸರ್ವರಿಗೂ ಸಂವಿಧಾನ ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿ ಬರೆದಿಲ್ಲ ಬದಲಾಗಿ ಎಲ್ಲಾ ಭಾರತೀಯದ ಹಿತಾಸಕ್ತಿ ಇದರಲ್ಲಿ ಅಡಗಿದೆ. ನಾವು ಆಡುವ ಮಾತು, ಬರಹ ನಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ ಅದರಂತೆಯೇ ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರ ವ್ಯಕ್ತಿತ್ವ ಸಂವಿಧಾನದ ಮೂಲಕ ವ್ಯಕ್ತವಾಗಿದೆ. ನಾವು ಯಾವತ್ತು ಸಂವಿಧಾನಕ್ಕೆ ಬದ್ಧವಾಗಿ ಕೆಲಸ ಮಾಡುತ್ತೇವೆಯೋ ಅಂದು ಅದಕ್ಕೆ ಅರ್ಥ ಬರಲಿದೆ. ಇಂದು ಯಾರು ಸಂವಿಧಾನಕ್ಕೆ ಪೂರಕವಾಗಿ ಕೆಲಸ ಮಾಡುವವರನ್ನು ಪ್ರಶಂಸಿಸುವ ಬದಲಾಗಿ ಟೀಕೆ ಮಾಡಲಾಗುತ್ತಿದೆ, ಈ ನಡೆ ಬದಲಾಗಬೇಕು. ನನ್ನ ಪ್ರಕಾರ ಇಡಿಯ ಭಾರತೀಯ ಸಾಹಿತ್ಯದಲ್ಲಿ ಸಂವಿಧಾನದ ಬಗ್ಗೆ ನಾಟಕ ಬಂದಿರುವುದು ಇದೇ ಮೊದಲು. ಈ ಕೀರ್ತಿ ನಾಟಕದ ಕರ್ತೃ ಅಪ್ಪಗೆರೆ ಸೋಮಶೇಖರ್ ಅವರಿಗೆ ಸಲ್ಲುತ್ತದೆ ಎಂದರು.

ರಂಗಾಯಣದ ಆಡಳಿತಾಧಿಕಾರಿ ದತ್ತಪ್ಪ ಸಾಗನೂರು ಮಾತನಾಡಿ, ಸರ್ವರಿಗೂ ಸಂವಿಧಾನ ನಮ್ಮ ರಂಗಾಯಣದ ಕನಸಿನ ಕೂಸು ಇದನ್ನು ಅಪ್ಪಗೆರೆ ಸೋಮಶೇಖರ್ ಅವರು ಚೆನ್ನಾಗಿ ರಚಿಸಿ ಕೊಟ್ಟಿದ್ದಾರೆ. ಯಾರೂ ಮುಟ್ಟದ ವಿಷಯನ್ನು ಕಲಬುರಗಿಯ ರಂಗಾಯಣ ಕೈಗೆತ್ತಿಕೊಂಡಿದೆ ಹಾಗು ಅದರಲ್ಲಿ ಯಶಸ್ವಿಯಾಗಿದೆ ಎಂದರು.

ನಿಧನ ವಾರ್ತೆ: ಸುಭಾಶ್ಚಂದ್ರ ಸುಲೇಗಾಂವ ನಿಧನ

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ರಂಗಾಯಣ ಕಲಬುರಗಿಯ ನಿರ್ದೇಶಕ ಪ್ರಭಾಕರ ಜೋಶಿ ಮಾತನಾಡಿ, ರಂಗಾಯಣದ ಮಹತ್ವಾಕಾಂಶೆ ಯೋಜನೆಯಾದ ಸಂವಿಧಾನದ ಬಗೆಗಿನ ನಾಟಕವನ್ನು, ಕರ್ನಾಟಕದ ಯಾವುದೇ ರಂಗಾಯಣ ಕೈಗೆತ್ತಿಕೊಳ್ಳಲಿಲ್ಲ ಆದರೆ ನಾವು ಕೈಹೆತ್ತಿಕೊಂಡು ಅದು ಯಶಸ್ವಿಯಾಗಲು ಸಂಪೂರ್ಣ ಸಹಕಾರ ನೀಡಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಧನ್ಯವಾದ ತಿಳಿಸಿ ಅಂಬೇಡ್ಕರ್ ಜಯಂತಿಯ ಸಂದರ್ಭದಲ್ಲಿ ಈ ನಾಟಕ ಸಿದ್ಧಪಡಿಸಿದ್ದು ಬಹಳ ಸಾಂಧರ್ಭಿಕ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಾಟಕದ ನಿರ್ದೇಶಕರಾದ ಅನಿಲ್ ರೇವೂರ, ನಾಟಕ ತಂಡದ ಸಂಚಾಲಕರಾದ ಹರಿಕೃಷ್ಣ ಎಸ್. ಬಿ, ಸಿಯುಕೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಕೋವಿಡ್-19ರ ನಿಯಮಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲಾಗಿದೆ.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

7 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

9 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

10 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

10 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

10 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

10 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420