ಸಗರನಾಡು ಗಾನಕೋಗಿಲೆ ಮೈಲಾರಪ್ಪ ಸಗರ ಇನ್ನಿಲ್ಲ

0
36

ಶಹಾಪುರ: ರೈತಪರ ಹೋರಾಟಗಾರ ಸಗರನಾಡು ಜಾನಪದ ಲೋಕದ ಗಾನ ಕೋಗಿಲೆ ಎಂದು ಪ್ರಸಿದ್ಧಿಯನ್ನು ಪಡೆದ ಮೈಲಾರಪ್ಪ ಸಗರ ಅಪಾರ ಬಂಧು ಬಳಗವನ್ನು ಅಗಲಿ ವಿಧಿವಶರಾಗಿದ್ದಾರೆ ಎಂದು ತಿಳಿಸಲು ತುಂಬಾ ನೋವೆನಿಸುತ್ತದೆ.

ಮೈಲಾರಪ್ಪ ಸಗರ ಮೂಲತಃ ಶಹಾಪುರ ತಾಲೂಕಿನ ಸಗರ ಗ್ರಾಮದ ಕಡುಬಡತನದ ಕುಟುಂಬದಲ್ಲಿ ಜನಿಸಿ ಕೇವಲ ಮೂರನೇ ತರಗತಿವರೆಗೆ ಅಭ್ಯಾಸ ಮಾಡಿ ಜಾನಪದ ಸಾಹಿತ್ಯದ ಜೊತೆಗೆ ರೈತ ಮುಖಂಡರ ಪ್ರೊ. ನಂಜುಂಡಸ್ವಾಮಿ ಅವರ ಆದರ್ಶ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ರೈತಪರ ಚಳುವಳಿಯಲ್ಲಿ ಧುಮುಕಿದರು.ಎಲ್ಲಿ ರೈತ ಚಳುವಳಿ ಇರುತ್ತದೋ ಅಲ್ಲಿ ಮೈಲಾರಪ್ಪ ಸಗರ ಅವರ ಹಾಡು ಝೇಂಕರಿಸುತ್ತಿತು.ಗ್ರಾಮೀಣ ಸೊಗಡಿನ ಜಾನಪದ ಕಲೆಯನ್ನು ತಮ್ಮಬದುಕನ್ನಾಗಿಸಿಕೊಂಡು ಇದ್ದರು.ಅಲ್ಲದೆ ರೈತ ಕ್ರಾಂತಿಕಾರಿ ಗೀತೆಗಳನ್ನು ಹಾಡುವುದರ ಮೂಲಕ ನಾಡಿನಾದ್ಯಂತ ಪ್ರಖ್ಯಾತಿ ಪಡೆದಿದ್ದರು.ಹಿರಿಯ ಸಾಹಿತಿ ಲಿಂಗಣ್ಣ ಸತ್ಯಂಪೇಟೆಯವರ ಒಡನಾಡಿಯಾಗಿದ್ದು ಅವರೊಂದಿಗೆ ಬಸವತತ್ವದಪ್ರಚಾರದಲ್ಲಿ ಕೂಡ ಸಕ್ರಿಯವಾಗಿ ಭಾಗಿಯಾಗಿದ್ದರು.

Contact Your\'s Advertisement; 9902492681

ರಂಜಾನ್ ವ್ರತಾಚರಣೆ ಮಾಡುವ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ವಿಶೇಷ ಸುತ್ತೋಲೆ

ಅಂದಿನ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಿಂದ ೨೦೧೬ ನೇ ಸಾಲಿಗೆ ರಾಜ್ಯಮಟ್ಟದ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಯೂ ತಮ್ಮ ಮುಡಿಗೇರಿಸಿಕೊಂಡಿದ್ದರು ಯಾವುದೇ ಆಡಂಬರಗಳಿಲ್ಲದೆ ಸರಳ ಜೀವಿಗಳಾಗಿದ್ದರು.ಕಾಯಕ ನಿಷ್ಠೆ ಶ್ರದ್ಧೆಯಿಂದ ಬದುಕನ್ನು ಸವೆಸಿದವರು. ಮಕ್ಕಳಿಗೆ ನೀತಿ ಪಾಠ ಹೇಳಿ ಕೊಡೋದ್ರಲ್ಲಿ ಎತ್ತಿದ ಕೈ.ನಾಯಕ ಜನಾಂಗದ ವಿಧಿವಿಧಾನಗಳೊಂದಿಗೆ ಇಂದು ಸಾಯಂಕಾಲ ಸಗರ ಗ್ರಾಮದ ಅವರ ಸ್ವಂತ ಜಮೀನಿನಲ್ಲಿ ಶವಸಂಸ್ಕಾರ ನೆರವೇರುವುದು.

ಅಂದಿನ ಗೋಕಾಕ್ ಚಳವಳಿಯ ಮುಂದಾಳತ್ವವನ್ನು ವಹಿಸಿಕೊಂಡರುವ ಡಾ. ರಾಜಕುಮಾರ್ ಅವರು ಶಹಾಪುರ ನಗರಕ್ಕೆ ಬಂದಾಗ ವೇದಿಕೆಯ ಮೇಲೆ ಕ್ರಾಂತಿಕಾರಿ ಗೀತೆಗಳನ್ನು ಹಾಡಿ ಅವರ ಮನಸ್ಸು ಗೆದ್ದಿದ್ದರು.ಇವರ ಹಲವಾರು ಹಾಡುಗಳನ್ನು ಧ್ವನಿಮುದ್ರಣಗೊಂಡು ಸಾಕಷ್ಟು ಜನಪ್ರಿಯತೆಯನ್ನು ಪಡೆದಿವೆ.ಅಲ್ಲದೆ ಕರ್ನಾಟಕ ಸರ್ಕಾರದ ವತಿಯಿಂದ ಯಾದಗಿರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮೈಲಾರಪ್ಪ ಸಗರವರ ಇತ್ತೀಚೆಗೆ ಸಾಕ್ಷ್ಯಚಿತ್ರವು ಮಾಡಲಾಗಿದೆ.ಮೈಲಾರಪ್ಪ ಸಗರ ೫ ಗಂಡುಮಕ್ಕಳು ೧ ಹೆಣ್ಣುಮಕ್ಕಳು ೨೦ ಹೆಚ್ಚು ಮೊಮ್ಮಕ್ಕಳಿಂದ ಅಗಲಿದ್ದಾರೆ. ಐವರಲ್ಲಿ ಒಬ್ಬ ಮಗನು ದೇಶದ ಗಡಿ ಕಾಯಲು ಯೋಧನಾಗಿರುವುದು ಹೆಮ್ಮೆಯ ವಿಷಯ ಎಂದು ಆಗಾಗ ಮೈಲಾರಪ್ಪನವರು ಹೇಳುತ್ತಿದ್ದರು ನಾನು ಜೈ ಕಿಸಾನ್ ನನ್ನ ಮಗ ಜೈ ಜವಾನ್ ಎಂಬ ಘೋಷ ವಾಕ್ಯ ಅವರದ್ದಾಗಿತ್ತು.

ಮೋಹನ್ ಕುಮಾರ್ ದಾನಪ್ಪಗೆ ರೈಸಿಂಗ್ ಸ್ಟಾರ್ ಪ್ರಶಸ್ತಿ

ಸಂತಾಪ : ಶಾಸಕ ಶರಣಬಸಪ್ಪಗೌಡ ದರ್ಶನಾಪುರ,ಚಂದ್ರಶೇಖರ ಸಾಹು ಆರಬೋಳ,ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಸಿದ್ದಲಿಂಗಣ್ಣ ಆನೇಗುಂದಿ,ಸಾಹಿತಿಗಳಾದ ಸಿದ್ಧರಾಮ ಹೊನಕಲ್,ಶಿವಣ್ಣ ಇಜೇರಿ,ಮಲ್ಲಿಕಾರ್ಜುನ ಸತ್ಯಂಪೇಟೆ ವಿಶ್ವರಾಧ್ಯ ಸತ್ಯಂಪೇಟೆ,ಲಿಂಗಣ್ಣ ಪಡಶೆಟ್ಟಿ,ಬಸನಗೌಡ ಮಾಲಿ ಪಾಟೀಲ್,ಶರಣಪ್ಪ ಸಲದಾಪುರ,ಬಸವರಾಜ ಸಿನ್ನೂರ, ಪಂಚಾಕ್ಷರಿ ಹಿರೇಮಠ,ಹಾಗೂ ಇತರರು ಸಂತಾಪ ಸೂಚಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here