ಕಲಬುರಗಿ: ಈಗಾಗಲೇ ರಾಜ್ಯ ಸರ್ಕಾರ ಲಾಕ್ ಡೌನ್ ಮಾಡಿದ್ದು ಸ್ವಾಗತರ್ಹ ಆದರೆ ರಾಜ್ಯದಲ್ಲಿ ತುಂಬಾ ಕಡು ಬಡವರಿದ್ದು , ಆ ಕಡು ಬಡವರ ಕುಟುಂಬಕ್ಕೆ ಆಹಾರ ಧಾನ್ಯ ಸೇರಿದಂತೆ ಜೀವನಕ್ಕಾಗಿ ಬೇಕಾಗುವ ಸಾಮಗ್ರಿಗಳನ್ನು ಅವರ ಕುಟುಂಬಕ್ಕೆ ಇನ್ನೂ ತಲುಪದೇ ಇರುವಾಗ ರಾಜ್ಯ ಸರ್ಕಾರ ಲಾಕ್ ಡೌನ್ ಮಾಡಿರುವುದು ಹೇಡಿತನವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಯ ಕಲ್ಯಾಣ ಕರ್ನಾಟಕ (ಕನ್ನಡಿಗರ ಬಣ) ದ ಅಧ್ಯಕ್ಷರಾದ ಶರಣು ಹೊಸಮನಿ ಆರೋಪಿಸಿದರು.
ಕರವೇ ಕಛೇರಿಯಲ್ಲಿ ಹಮ್ಮಿಕೊಂಡ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಬಹುತೇಕ ನಗರಗಳಲ್ಲಿ ತುಂಬಾ ಬಡವರಿದ್ದು ಆ ಬಡ ಕುಟುಂಬಕ್ಕೆ ರೇಷನ್ ವಿತರಣೆ ಮಾಡದೆ , ಝೀರೋ ಅಕೌಂಟ್ ಇರುವ ಬಡ ಕುಟುಂಬಕ್ಕೆ ಹಣ ಹಾಕದೇ ಬಡವರ ಹೊಟ್ಟೆಯ ಮೇಲೆ ಸರ್ಕಾರ ಬರ ಎಳೆಯುತ್ತಿದೆ.
ಬಿಜೆಪಿ ನೇತೃತ್ವದ ಸರಕಾರವು ಮೊದಲು ಬಡವರಿಗೆ ಬೇಕಾಗುವ ಆಹಾರ ಸಾಮಗ್ರಿ ವಿತರಣೆ ಮಾಡಿ ನಂತರ ಲಾಕ್ ಡೌನ ಮಾಡಬೇಕಾಗಿತ್ತು ಆದರೆ ರಾಜ್ಯ ಸರ್ಕಾರ ಬಡವರ ಕೈಯಲ್ಲಿ ಖಾಲಿ ತಟ್ಟೆ ಕೊಟ್ಟು , ಅನ್ನ ನೀಡದೇ ಕಟು ನಿರ್ಧಾರದಿಂದ ಲಾಕ್ ಡೌನ್ ಘೋಷಣೆ ಮಾಡಿರುವುದು ಸರಿಯಲ್ಲ ಎಂದು ಅವರು ಕಿಡಿಕಾರಿದರು. ಕೂಡಲೇ ಸರಕಾರ ಬಡವರಿಗೆ ಆಹಾರ ಧಾನ್ಯ ಹಾಗೂ ಕೀಟ್ ಗಳನ್ನು ಪೂರೈಸಬೇಕು ಎಂದು ಅವರು ಒತ್ತಾಯಿಸಿದರು.