ವಾಡಿಯಲ್ಲಿ ಗಿಡ ನೆಡುವ ಮೂಲಕ ಪರಿಸರ ದಿನಾಚರಣೆ ಆಚರಣೆ

0
24

ಚಿತ್ತಾಪುರ:ತಾಲೂಕಿನ ವಾಡಿ ಪಟ್ಟಣದಲ್ಲಿ ಯುವ ಮುಖಂಡ ವಿಠಲ್ ನಾಯಕ್ ಅವರ ನೇತೃತ್ವದಲ್ಲಿ ಗಿಡ ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಣೆ ಮಾಡಲಾಯಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ವಿಠಲ್ ನಾಯಕ್ ಅವರು ಕೋವಿಡ್-19 ಮಾಹಾಮಾರಿ ಬಹುತೇಕ ಇಡೀ ವಿಶ್ವವನ್ನು ಅವರಿಸಿಕೊಂಡ ಬಳಿಕ ಈ ಮಾಹಾಮಾರಿಯನ್ನು ತಡೆಯುವ ಪ್ರಯತ್ನದಲ್ಲಿದ್ದ ಸಂದರ್ಭದಲ್ಲಿ ಆಮ್ಲಜನಕದ ಮಹತ ಎಷ್ಟು ಎಂದು ಈಗಾಗಲೇ ಇಡೀ ಜಗತ್ತಿಗೆ ಗೊತ್ತಾಗಿದೆ.ಕರೋನಾ ಬಹಳಷ್ಟು ಪಾಠ ಕಳಿಸಿದೆ ಪ್ರತಿಯೊಬ್ಬರು ಪ್ರಕೃತಿಯನ್ನು ಕಾಪಾಡಬೇಕು ಅದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯದರ್ಶಿ ವೀರಣ್ಣ ಯಾರಿ, ಪುರಸಭೆ ಸದಸ್ಯ ಭೀಮರಾಯ ಸುಬೇದಾರ್, ಮುಖಂಡರಾದ ಬಸವರಾಜ ಕೊಳಿ,ಲಕ್ಷಣ್ ಮೆಂಗಜಿ ಇನ್ನಿತರರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here