ಕಲಬುರಗಿ: ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ ೦೮ ರಲ್ಲಿ ಬರುವ ಸಂಜು ನಗರ ಬಡಾವಣೆಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಸೇವಾ ಸಮಿತಿ ಭವನವನ್ನು ಕಲಬುರಗಿ ಉತ್ತರ ಮತಕ್ಷೇತ್ರದ ಜನಪ್ರಿಯ ಶಾಸಕಿ ಖನಿಜ್ ಫಾತಿಮಾ ಹಾಗೂ ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಜುಕುಮಾರ್ ಕಪನೂರ ಜಂಟಿಯಾಗಿ ಉದ್ಘಾಟಿಸಿದರು.
ಈ ಸಂಧರ್ಭದಲ್ಲಿ ಕಾಂಗ್ರೇಸ್ ಮುಖಂಡರಾದ ಫರಾಜ್ ಉಲ್ ಇಸ್ಲಾಮ್, ಶರಣು ಗೋಧಿ, ಸೈಯದ್ , ಆದಿಲ್ ಸುಲೇಮಾನ್, ರಮೇಶ್ ಕಮಲಾಪುರ್, ರಾಜು ಕಠಾರೆ, ಕಾಶೀನಾಥ್ ಮಾಳಗೆ, ಕಲ್ಯಾಣರಾವ್ ಹಾಲು ಮತ್ತು ಸಂಜು ನಗರ ಬಡಾವಣೆಯ ಎಲ್ಲಾ ಮುಖಂಡರು ಇದ್ದರು.