ಕಲಬುರಗಿ: ಆಳಂದ ತಾಲೂಕಿನ ಧಂಗಾಪುರದಲ್ಲಿ ದನಕರುಗಳಿಗೆ ಮೇವು ಹಾಕಲು ಹೋಗಿ ಕಬ್ಬಿನ ಗದ್ದೆಯಲ್ಲಿ ತುಂಡಾಗಿ ಬಿದ್ದಿದ್ದ ಜೆಸ್ಕಾಂ ಮೇನ್ ಲೈನ್ ತುಂಡಾಗಿ ಬಿದ್ದಿದ್ದನ್ನು ತುಳಿದು ಶ್ರೀಖಂಡೆ ರೈತ ಕುಟುಂಬದ ಅಜ್ಜ ಹಾಗೂ ಮೊಮ್ಮಗನ ದಾರುಣ ಸಾವಿನ ಘಟನೆಗೆ ಗುಲ್ಬರ್ಗ ವಿದ್ಯುಚ್ಚಕ್ತಿ ಸರಬರಾಜು ಕಂಪನಿಯ ಇಂಜಿನಿಯರ್ಗಳ ಅಲಕ್ಷತನವೇ ಕಾರಣ ಎಂದು ಆಕ್ರೋಶ ಹೊರಹಾಕಿರುವ ಕೆಪಿಸಿಸಿ ಸದಸ್ಯ ಹಣಮಂತ ಭೂಸನೂರ್ ಸದರಿ ಘಟನೆಯ ಹೊಣೆ ಹೊರುವ ಮೂಲಕ ಜೆಸ್ಕಾಂ ನೊಂದ ಕುಟುಂಬದ ವಾರಸುದಾರರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಆಳಂದದಲ್ಲಿ ಜೆಸ್ಕಾಂ ಅಲಕ್ಷತನ ಅದೆಷ್ಟಿದೆ ಎಂದರೆ ಹೊಲಗದ್ದೆಗಳಲ್ಲಷ್ಟೇ ಅಲ್ಲ, ಜನ ವಾಸವಾಗಿರುವ ಊರುಗಳಲ್ಲೂ ವಿದ್ಯುತ್ ಕಂಬಗಲ ತಂತಿಗಳು ಜೋತು ಬಿದ್ದರೂ ಕೇಲೋರಿಲ್ಲದಂತಾಗಿದೆ. ಹೊಲಗದ್ದೆಗಳಲ್ಲಿ ಕಂಬ, ವೈರ್ಗಳ ನಿರ್ವಹಣೆಯೇ ಜೆಸ್ಕಾಂ ಮಾಡುತ್ತಿಲ್ಲ. ಕೇವಲ ಕಾಗದದಲ್ಲೇ ನಿರ್ವಹಣೆ, ಜಂಗಲ್ ಕಟ್ಟಿಂಗ್ನಂತಹ ಕೆಲಸಗಳನ್ನು ಮಾಡಿ ಮುಗಿಸಿ ಹಣ ಗುಳುಂ ಮಾಡಲಾಗುತ್ತಿದೆ. ಇದಕ್ಕೆ ಅಲ್ಲಿ ಕೆಲಸ ಮಾಡುವ ತಾಲೂಕಿನ ಉಪ ವಿಭಾಗಗಳ, ವಿದ್ಯುತ್ ಸ್ಟೇಷನ್ಗಳ ನಿರ್ವಹಣಾ ಸಿಬ್ಬಂದಿ, ಇಂಜಿನಿಯರ್ಗಳೇ ಕಾರಣ. ಇಂತಹ ಸಾವು- ನೋವಿನ ಘಟನೆಗಳಿಗೆ ಸಂಬಂಧಪಟ್ಟಂತಹ ಪ್ರದೇಶದ ಇಂಜಿನಯರ್, ಲೈನ್ಮನ್ರನ್ನೇ ಹೊಣೆಗಾರರನ್ನಾಗಿಸಿ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದೂ ಹಣಮಂತ ಭೂಸನೂರ್ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರನ್ನು ಆಗ್ರಹಿಸಿದ್ದಾರೆ.
ಮುಂಗಾರು ಹಂಗಾಮು ಶುರುವಾಗಿದೆ, ಜೊತೆಗೇ ಹೊಲಗದ್ದೆಗಳಲ್ಲಿ ರೈತರು ತೋಟಗಾರಿಕೆ ಮಾಡಿರುತ್ತಾರೆ. ಇಂತಹ ಸಮಯದಲ್ಲಿ ಕಂಬುಗಳು, ವೈರಿಂಗ್ ಸರಿಯಾಗಿ ಇರುವ ಬಗ್ಗೆ ಜೆಸ್ಕಾಂ ಎಲ್ಲೆಡೆ ಸಂಚರಿಸಿ ಪರಿಶೀಲನೆ ನಡೆಸಬೇಕು. ಮಳೆ, ಗಾಳಿ ಜೋರಾಗಿ ಬೀಸುವ ಈ ದಿನಗಳಲ್ಲಿ ತಂತಿ ಕಡಿದು ಬೀಳುವ ಸಾಧ್ಯತೆಗಳು ಹೆಚ್ಚು. ಇವನ್ನೆಲ್ಲ ಪರಿಹರಿಸಲು ಜೆಸ್ಕಾಂ ಸಿಬ್ಬಂದಿ ಆಳಂದ ತಾಲೂಕಿನಾದ್ಯಂತ ತಮ್ಮ ಹೊಣೆಗಾರಿಕೆ ನಿಭಾಯಿಸಿದರೆ ಮಾತ್ರ ಸಾಧ್ಯ ಎಂದು ಭೂಸನೂರ್ ಅಭಿಪ್ರಾಯಪಟ್ಟಿದ್ದಾರೆ.
ನೀರಾವರಿ ಪಂಪ್ಸೆಟ್ಗಳಿರುವ ಭಾಗದಲ್ಲಿ ಟಿಸಿ ಸುಟ್ಟರೆ ತಕ್ಷಣ ಬದಲಾವಣೆ ಆಗೋದಿಲ್ಲ, ರೈತರು ಹಣ ಕೊಟ್ಟರೆ ಮಾತ್ರ ಕೆಲ್ಸ, ಇಲ್ಲದೆ ಹೋದಲ್ಲಿ ತಿಂಗಳು, 2 ತಿಂಗಳಾದರೂ ಟಿಸಿ ದುರಸ್ಥಿ ಆಗೋದಿಲ್ಲ, ಈ ರೂಪದಲ್ಲಿ ಜೆಸ್ಕಾಂ ಆಳಂದ ರೈತರಿಗೆ ಕಿಕುಳ ನೀಡುತ್ತಿದೆ. ಹೀಗಿದ್ದರೂ ರೈತರು ಸಹಿಸಿಕೊಂಡಿದ್ದಾರೆ. ಇನ್ನಾದರೂ ಜೆಸ್ಕಾಂ ಹಿರಿಯ ಅದಿಕಾರಿಗಳು ಆಳಂದನತ್ತ ಮುಖ ಮಾಡಿ ಅಲ್ಲಿನ ಅಧಿಕಾರಿಗಳ ಅಲಕ್ಷನದಿಂದ ಸಂಭವಿಸಿರುತ್ತಿರುವ ರೈತರ ಸಾವು- ನೋವು, ರೈತ ಕುಟುಂಬಕ್ಕೆ ಆಗುತ್ತಿರುವ ಕಿರುಕುಳ ತಪ್ಪಿಸಲಿ ಎಂದು ಹಣಮಂತ ಭೂಸನೂರ್ ಒತ್ತಾಯಿಸಿದ್ದಾರೆ.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…