ಪತ್ರಿಕಾ ರತ್ನ ಪ್ರಶಸ್ತಿ ಪ್ರದಾನ ನಾಳೆ

0
43

ಸುರಪುರ: ವಿಜಯ ಕರ್ನಾಟಕ ಕಲಬುರಗಿ ಆವೃತ್ತಿಯ ಉಪ ಸಂಪಾದಕ ಪ್ರಕಾಶ ದೊರೆ ಹಾಗೂ ಪತ್ರಕರ್ತರಾದ ಅನಿಲ್ ದೇಶಪಾಂಡೆ, ಅಶೋಕ ಸಾಲವಾಡಗಿ ಅವರಿಗೆ ಶುಕ್ರವಾರ ‘ಪತ್ರಿಕಾ ರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತಿದೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸುರಪುರ ತಾಲೂಕು ಘಟಕದಿಂದ ನಾಳೆ ನಗರದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ ಹಮ್ಮಿಕೊಂಡಿದ್ದು ಈ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಜರುಗಲಿದೆ.

Contact Your\'s Advertisement; 9902492681

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ದೇವಾಪುರ ಶ್ರೀಗಳಾದ ಶ್ರೀಶಿವಮೂರ್ತಿ ಶಿವಾಚಾರ್ಯರು ವಹಿಸಲಿದ್ದಾರೆ. ಶಾಸಕ ರಾಜೂಗೌಡ ಉದ್ಘಾಟಿಸಲಿದ್ದಾರೆ. ಸಂಘದ ಅಧ್ಯಕ್ಷ ಸಿದ್ದಯ್ಯ ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ.

ಪ್ರಮುಖರಾದ ಶಾರದಾ ಭೀಮಣ್ಣ ಬೇವಿನಾಳ, ಸುಜಾತಾ ವೇಣುಗೋಪಾಲ ಜೇವರ್ಗಿ, ರಾಜ ಹನುಮಪ್ಪನಾಯಕ, ಡಾ.ಸುರೇಶ ಸಜ್ಜನ್, ಇಂದೂಧರ ಸಿನ್ನೂರ್ ಸಂಜೀವರಾವ್ ಕುಲಕರ್ಣಿ ಹಾಗೂ ಸಂಘದ ಎಲ್ಲ ಪದಾಧಿಕಾರಿಗಳು ಉಪಸ್ಥಿರಿರುವರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here