ಶಹಾಬಾದ: ವಾರ್ಡ ನಂ.೧೩ರಲ್ಲಿ ರಸ್ತೆ ಕಾಮಗಾರಿಗೆ ರಜನಿಕಾಂತ ಚಾಲನೆ

0
99

ಶಹಾಬಾದ: ನಗರಸಭೆಯ ವ್ಯಾಪ್ತಿಯ ವಾರ್ಡ ನಂ.೧೩ರ ಸಿದ್ಧಾರ್ಥ ನಗರದಲ್ಲಿ ಎಸ್ ಸಿ ಪಿ ಹಾಗೂ ಟಿ ಎಸ್ ಪಿ ಯೋಜನೆಯ ಅನುದಾನದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ವಾರ್ಡ ಸದಸ್ಯ ರಜನಿಕಾಂತ ಕಂಬಾನೂರ(ಭಂಟಿ) ಭೂಮಿ ಪೂಜೆ ನೇರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಾರ್ಡ ಸದಸ್ಯ ರಜನಿಕಾಂತ ಕಂಬಾನೂರ, ಸುಮಾರು ೨ ವ?ಗಳಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆಗಳ ನಿರ್ಮಾಣಕ್ಕೆ ಮೂಹೂರ್ಥ ಕೂಡಿ ಬಂದಿದೆ. ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆಯ ಅನುದಾನದಲ್ಲಿ ಎರಡು ವ?ಗಳ ಹಿಂದೆ ಶುರುವಾಗಬೇಕಿದ್ದ ಈ ಕಾಮಗಾರಿಯು ಪ್ರಾರಂಭವಾಗದೆ ನೆನೆಗುದಿಗೆ ಬಿದ್ದ ಕಾರಣ ಸಿದ್ಧಾರ್ಥ ನಗರದ ನಿವಾಸಿಗಳಿಗೆ ಓಡಾಡಲು ರಸ್ತೆಯಿಲ್ಲದೆ ಪರದಾಡುವ ಪರಿಸ್ಥಿತಿ ಉಂಟಾಗಿತ್ತು. ಆಸ್ಪತ್ರೆ ಕರೆದೊಯ್ಯಲು ಒಂದು ಆಟೊ ಸಹ ಒಳಗೆ ಬರದ? ಕಂಟಿಗಳು ಬೆಳೆದಿದ್ದವು. ಸುಮಾರು ವರ್ಷಗಳಿಂದ ರಸ್ತೆಯಿಲ್ಲದೇ ಇರುವುದರಿಂದ ಇಲ್ಲಿನ ಜನರು ಬೇಸತ್ತು ಹೋಗಿದ್ದರು.

Contact Your\'s Advertisement; 9902492681

ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸವರಾಜ ಮತ್ತಿಮಡು ಅವರ ಗಮನಕ್ಕೆ ತಂದು ಕೂಡಲೇ ತಮ್ಮ ವಾರ್ಡ್ ನಾಗರಿಕರ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದರಿಂದ ತಕ್ಷಣ ಸ್ಪಂದಿಸಿದ ಶಾಸಕರು ಕೆಲಸ ಶುರು ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅದರಂತೆ ರಸ್ತೆ ಕಾಮಗಾರಿ ಪ್ರಾರಂಭವಾಗುತ್ತಲಿದೆ ಎಂದರು.

ಈ ಸಂದರ್ಭದಲ್ಲಿ ವಿ. ಅಭಿ?ಕ್, ಪ್ರಜ್ಞಾನಂದ್, ವಿಜಯ್ ರಾಥೋಡ್, ದಿನೇಶ್ ನಾಯಕ್, ನಾಗೇಂದ್ರ ನಾಟೇಕರ್, ಮಲ್ಲೇಶಿ ನಾಟೇಕರ್, ಸುರೇಶ್ ಸಾವಳಗಿ, ರಾಜು ನಾಟೇಕರ್, ಶ್ರೀನಿವಾಸ್ ಕಿಣಕೇರಿ, ಸಂಪತ್ ನಾಟೇಕರ್, ಶಶಿಕುಮಾರ್ ಹಾಗರಗುಂಡಗಿ, ಅಭಯ ಪ್ರಕಾಶ ಇತರರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here