ಖರ್ಗೆ ಅವರನ್ನ ಟೀಕೆ ಮಾಡುವ ಮೊದಲು ಬಿಜೆಪಿಯ ರವಿಕುಮಾರ್ ಕಲಬುರಗಿಯನ್ನು ಚೆನ್ನಾಗಿ ನೋಡಲಿ: ಪ್ರಿಯಾಂಕ್ ಖರ್ಗೆ

1
127

ಕಲಬುರಗಿ,ಸೇಡಂ: ಬಿಜೆಪಿ ಜನರಲ್‌ ಸೆಕ್ರೆಟರಿ ರವಿಕುಮಾರ್ ಮೊದಲು ಕಲಬುರಗಿಯನ್ನು ಹಾಗೂ ಇತಿಹಾಸವನ್ನು ಅರಿತುಕೊಂಡು ಬಂದು ಆಮೇಲೆ ಖರ್ಗೆ ಸಾಹೇಬರ ಅಭಿವೃದ್ಧಿ ಕಾರ್ಯಗಳ ಪ್ರಶ್ನೆ ಮಾಡಲಿ ಎಂದು ಟಾಂಗ್ ನೀಡಿದರು. ಎದೆ ಸೀಳಿದರೆ ಖರ್ಗೆ ಸಾಹೇಬರು ಕಾಣುತ್ತಾರೆ ಎಂದು ಹೇಳುತ್ತಿದ್ದ ಬಾಬುರಾವ್ ಚಿಂಚನಸೂರು ಅವರ ಎದೆಯಲ್ಲಿ ಮೋದಿ, ಶಾ, ಯಡಿಯೂರಪ್ಪ ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ನಾವಂತೂ ಅಂಬೇಡ್ಕರ್ ಅವರನ್ನು ನೋಡಿಲ್ಲ ಖರ್ಗೆ ಸಾಹೇಬರಲ್ಲೇ ಅವರನ್ನು ಕಾಣುತ್ತಿದ್ದೇವೆ ಎನ್ನುತ್ತಿದ್ದ ಮಾಲೀಕಯ್ಯ ಗುತ್ತೇದಾರ ಈಗ ಅದೇ ಖರ್ಗೆ ಸಾಹೇಬರನ್ನ ಟೀಕಿಸುತ್ತಿದ್ದಾರೆ. ಸ್ವತಃ ತಾವೇ ಗೆಲ್ಲಲಾಗದ ಗುತ್ತೇದಾರ, ಚಿಂಚನಸೂರು ಇಂದು ಜಾಧವ್ ಅವರ ಕೈಗೆ ಬ್ಯಾಟ್ ಕೊಟ್ಟು ಫಿಲ್ಡಿಗಿಳಿಸಿ ಗೆಲುವು ನಮ್ಮದೇ ಅಂತ ಮಾಧ್ಯಮದ ಮುಂದೆ ಹೇಳುತ್ತಾರೆ. ಮೊದಲು ಫಿಲ್ಡನ್ನ ನೋಡಲಿ ಜನಬೆಂಬಲ ಯಾರಿಗಿದೆ ಗೆಲುವು ಯಾರದು ಎಂದು ತಿಳಿಯುತ್ತದೆ ಎಂದು ಹೇಳಿದರು.‌

Contact Your\'s Advertisement; 9902492681

ವಿದ್ಯಾವಂತ ಓದಿದವರು ಎಂದು ಟಿಕೇಟ್ ಕೊಟ್ಟು ಶಾಸಕರನ್ನಾಗಿ ಮಾಡಿದರೆ ಜಾಧವ್ ಮತದಾರರಿಗೆ ಮೋಸ ಮಾಡಿ ನಾಚಿಕೆಯಿಲ್ಲದೇ ಬಿಜೆಪಿ ಸೇರಿದ್ದಾರೆ.‌ಕಾರಣ ಕೇಳಿದರೆ, ಚಿಂಚೋಳಿ ಅಭಿವೃದ್ದಿ ಅಂತ ಹೇಳುತ್ತಾರೆ‌. ಬೀದರ ಕ್ಷೇತ್ರಕ್ಕೆ ಬರುವ ಚಿಂಚೋಳಿಯನ್ನ ಇವರು ಹೇಗೆ ಅಭಿವೃದ್ದಿ ಮಾಡುತ್ತಾರೆ? ಎಂದು ಪ್ರಶ್ನಿಸಿದರು.‌ ಇದು ನಿಮ್ಮ ಭವಿಷ್ಯದ ಚುನಾವಣೆ ಹಾಗಾಗಿ ಎಲ್ಲರೂ ಕಡ್ಡಾಯವಾಗಿ ಮತನೀಡಿ ಕಾಂಗ್ರೇಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

1 ಕಾಮೆಂಟ್

  1. ಸರ್ಯ ಚಂದ್ರ ಎಷ್ಟು ಸತ್ಯ , ಡಾಕ್ಟರ್ ಮಲ್ಲಿಕಾರ್ಜುನ ಕರ್ಗೆಜಿ ಗೆಲುವು ಅಷ್ಟೇ ಸತ್ಯ. ಕರ್ಗೆಜಿ ಅಂದರೆ ಅಭಿವೃದ್ಧಿ
    ಕಲಬುರಗಿ ಅಭಿವೃದ್ಧಿ . ಅವರನ್ನು ಸೋಲಿಸುವ ಹಗಲು ಕನಸನ್ನು ಕಾಣುವ ಜನರು. ಹೈದರಾಬಾದ್ ಕರ್ನಾಟಕ
    ಕಲಬುರಗಿ ಅಭಿವೃದ್ಧಿ ವಿರೋಧಿಗಳು ಅಂದರೆ ತಪ್ಪಾಗಲಾರದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here