ಚಿಂಚೋಳಿ: ಮತ್ತೆ ಕಂಪಿಸಿದ ಭೂಮಿ: ಆತಂಕದಲ್ಲಿ ಸ್ಥಳೀಯರು

0
24

ಕಲಬುರಗಿ: ಇಲ್ಲಿನ ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವರ ಗ್ರಾಮ ಪಂಚಾಯಿತ ವ್ಯಾಪ್ತಿಯಲ್ಲಿ ರಾತ್ರಿ ಮತ್ತು ಬೆಳಗ್ಗಿನ ಜಾವ ಭೂಮಿ ಕಂಪಿಸಿರುವ ಘಟನೆ ಮತ್ತೆ ಸಂಭವಿಸಿದೆ.

ಶುಕ್ರವಾರ ರಾತ್ರಿ ಸುಮಾರು 1 ಗಂಟೆಗೆ ಗಡಿಕೇಶ್ವರ ಗ್ರಾಮ ಮತ್ತು ಪಂಚಾಯಿತ ವ್ಯಾಪ್ತಿಯ ರಾಯಕೋಡ್, ಬುದ್ಧಪುರ, ಚಿಂದಪಳ್ಳಿ, ರುದನೂರ, ಕೇರೊಳ್ಳಿ, ಭಂಟಳ್ಳಿ, ಕಪನೂರ ಹಾಗೂ ಬೆನಕನಳ್ಳಿ ಗ್ರಾಮಗಳಲ್ಲಿ ಭೂಮಿ ಒಳಗೆ ವಿಚಿತ್ರವಾದ ಶಬ್ದ ಕೇಳಿಬಂದಿದ್ದು, ಭೂಮಿ ಕಂಪಿಸಿರುವ ಅನುಭವ ಉಂಟಾಗಿದೆ ಎಂದು ಸ್ಥಳೀಯ ಗ್ರಾಮಸ್ಥರು ತಿಳಿಸಿದ್ದಾರೆ.

Contact Your\'s Advertisement; 9902492681

ಈ ಕುರಿತು ರಾಯಕೋಡ್ ಗ್ರಾಮದ ನಿವಾಸಿ ಲೇಖಕ, ಪದಗಳ ಹಾಡುಗಾರ ಆಸೀಫ್ ಅಲಿ ಮತನಾಡಿ ಭೂಮಿಯ ಒಳಗೆ ಬ್ಲಾಸ್ಟ್ ಆಗುವ ಮತ್ತು ಗಣಿಗಾರಿಕೆ ನಡೆಸುತ್ತಿರುವ ರೀತಿಯಲ್ಲಿ ಶಬ್ದಗಳು ಕೇಳಿಬರುತ್ತಿದೆ. ದೂರ ದೂರದ ವರೆಗೆ ಯಾವುದೇ ಗಣಿಗಾರಿಕೆ ನಡೆಸುವುದ ಕಾಣುತ್ತಿಲ್ಲ ಆದರೆ ಈ ವಿಚಿತ್ರವಾದ ಶಬ್ದ ಮತ್ತು ಭೂಮಿ ಕಂಪಿಸುತ್ತಿರುವುದು ಜನರಲ್ಲಿ ಆತಂಕ ಉಂಟುಮಾಡಿದೆ.

ಪಂಚಾಯಿತ ವ್ಯಪ್ತಿಯಲ್ಲಿನ ಸುತ್ತಮುತ್ತಲಿನ ಹಳ್ಳಿಗಳ ಮನೆಗಳು ಬಿರುಕು ಬಿಟ್ಟಿತ್ತಿವೆ ಜನರಲ್ಲಿ ಭಿತ್ತಿ ಉಂಟಾಗಿದೆ ರಾತ್ರಿಹೊತ್ತಲ್ಲ ಬದುಕು ಅತಂತ್ರವಾಗಿರುವಂತೆ ಕಾಣುತ್ತಿದೆ ಎಂದು ತಿಳಿಸಿದರು.

ಅಗಸ್ಟ್ ತಿಂಗಳಲ್ಲಿ ಮೂರನೇ ಬಾರಿ ಈ ರೀತಿ ಭೂಮಿ ಕಂಪಿಸಿರುವ ಘಟನೆ ಜರುಗಿದ್ದು, ಸಮಸ್ಯೆ ಪರಿಹರಿಸಬೇಕೆಂದು ಜಿಲ್ಲಾ ಉಸ್ತುವಾರಿ ಮಂತ್ರಿ ಮುರಗೇಶ್ ನಿರಾಣಿ ಗೆ ಗ್ರಾಮಸ್ಥರ ನಿಯೋಗ ಭೇಟಿ ನೀಡಿ ಮನವರಿಕೆ ಮಾಡಿ ತಿಳಿಸಲಾಗಿದೆ ಅವರು ಸಚಿವರು ಮುಂದಿನ ವಾರ ಗ್ರಾಮದಲ್ಲಿ ವಾಸ್ತವ್ಯ ಮಾಡುವ ಭರವಸೆ ನೀಡಿದ್ದಾರೆ ಎಂದು ಈ ಸಂದರ್ಭದಲ್ಲಿ ಆಸೀಫ್ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here