ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ : ದಲಿತ ಮುಖಂಡರು ಆಕ್ರೋಶ

0
85

ಜೇವರ್ಗಿ: ಇಂದು ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯ ಸಭಾ ಸದಸ್ಯರಾದ ಡಾ. ಮಲ್ಲಿಕಾರ್ಜುನ್ ಖರ್ಗೆ ಹೆಸರು ಪ್ರೋಟೋಕಾಲ್ ಪ್ರಕಾರ ಆಹ್ವಾನ ಪತ್ರಿಕೆಯಲ್ಲಿ ಇರಬೇಕಿತ್ತು. ತಾಲೂಕು ಆಡಳಿತ ವೈಫಲ್ಯದಿಂದ ಅವರ ಹೆಸರು ಕೈಬಿಟ್ಟಿರುವುದಕ್ಕೆ ಕಾರ್ಯಕ್ರಮದಲ್ಲಿ ದಲಿತ ಸಂಘಟನೆಯ ಮುಖಂಡರು ವಿರೋಧ ವ್ಯಕ್ತಪಡಿಸಿದರು.

ತಹಶೀಲ್ದಾರ್ ಮತ್ತು ಶಿಕ್ಷಣಾಧಿಕಾರಿಗಳು ನಮ್ಮ ಕಣ್ತಪ್ಪಿನಿಂದ ಆಗಿದೆ ಕ್ಷಮೆ ಕೇಳುವ ಮೂಲಕ ಜಾರಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೂ ತಾವು ಉದ್ದೇಶಪೂರ್ವಕವಾಗಿ ಹೆಸರು ಕೈಬಿಟ್ಟಿದೆ ಎಂದು ದಲಿತ ಸಮಾಜದ ನಾಯಕರು ಆರೋಪಿಸಿದರು.

Contact Your\'s Advertisement; 9902492681

ರಾಷ್ಟ್ರಮಟ್ಟದ ನಾಯಕರಿಗೆ ಗೌರವ ಕೊಡುವುದನ್ನು ಮರೆತಿರುವುದು ಶಿಷ್ಟಾಚಾರದ ಉಲ್ಲಂಘನೆಯಾಗಿದೆಯೆಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ದಲಿತ ನಾಯಕರಾದ ಭೀಮರಾಯ ನಗನೂರ , ಶ್ರೀಮಂತ ಧನಕರ , ರವಿ ಕುಳಗೇರಿ ,ಶ್ರೀ ಹರಿ ಕರಕಳ್ಳಿ, ಭೀಮರಾಯ ಹಾಲಗಡ್ಲಾ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here