ಸಾಂಸ್ಕೃತಿಕ ಕಲಾ ಬಳಗದಿಂದ ಶಿಕ್ಷಕರು ಸೇರಿ ದಂಪತಿಗಳಿಗೆ ವಿದ್ಯಾ ರತ್ನ ಪ್ರಶಸ್ತಿ

0
21

ಕಲಬುರಗಿ: ಕೋಟನೂರ ಡಿ.ಗ್ರಾಮದ ಬಸವೇಶ್ವರ ದೇವಸ್ಥಾನ ಹತ್ತಿರದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಕಲ್ಯಾಣ ನಾಡಿನ ಸಾಂಸ್ಕೃತಿಕ ಕಲಾ ಬಳಗ ವತಿಯಿಂದ ಶಿಕ್ಷಕ, ಶಿಕ್ಷಕಿ ದಂಪತಿಗಳಿಗೆ ವಿದ್ಯಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶ್ರೀನಿವಾಸ ಸರಡಗಿಯ ಷ.ಬ್ರ.ಡಾ ರೇವಣಸಿದ್ಧ ಶಿವಾಚಾರ್ಯರು, ಕೆಸರಟಗಿ ಭಾಗ್ಯವಂತಿ ದೇವಸ್ಥಾನದ ಶ್ರೀ ಮಾತಾ ಲತಾದೇವಿ, ಮೈಸೂರ ಮಾಜಿ ಕುಲಪತಿ ಪ್ರೋ.ರಾಜಾ ಹನುಮಣ್ಣನಾಯಕ ದೊರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಕಾರ್ಯಕ್ರಮ ಸಂಯೋಜಕ ಶಿವಶಂಕರ ಬಿರಾದಾರ, ಕೇಂದ್ರಿಯ ವಿಶ್ವವಿದ್ಯಾಲಯದ ಪಂ.ರವಿಕಿರಣ್ ನಾಕೋಡ್, ರಾಜಕುಮಾರ ಬಿರಾದಾರ ಉದನೂರ, ಶರಣಗೌಡ ಪಾಟೀಲ ಪಾಳಾ, ವಿಶ್ವನಾಥ ಪಾಟೀಲ ಗೌನಳ್ಳಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here