ಕಲಬುರಗಿ: ಅಗಸ್ಟ 26 ರಿಂದ 29 ರ ವರೆಗೆ ಗೋವಾದಲ್ಲಿ ನಡೆದ ದೇಶದ ವಿವಿಧ ರಾಜ್ಯಗಳಿಂದ ರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಸ್ಪರ್ದೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಪ್ರಪ್ರಥಮ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ಜಿಲ್ಲೆಯ ಅಂತರಾಷ್ಟ್ರೀಯ ಕರಾಟೆ ಪಟು ಮನೋಹರ ಬೀರನೂರ ರವರು ಕಿಕ್ ಬಾಕ್ಸಿಂಗ್ ಪೈಂಟ್ ಪೈಟ್ – 84 ಕೆಜಿ ವಿಭಾಗದಲ್ಲಿ ಭಾಗವಹಿಸಿ ಬೆಳ್ಳಿಪದಕ ಪಡೆಯುವುದರ ಮುಖಾಂತರ ರಾಜ್ಯಕ್ಕೆ ಹಾಗೂ ಕಲ್ಯಾಣ ಕರ್ನಾಟಕ ಭಾಗಕ್ಕೆ ಮತ್ತು ಜಿಲ್ಲೆಗೆ ಕೀರ್ತಿ ತಂದು ಕೊಟ್ಟಿದ್ದಾರೆ.
ಸಾಧನೆಗೆ ಹರ್ಷ: ಈ ಸಾಧನಗೆ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ , ವಿಧಾನ ಪರಿಷತ್ ಸದಸ್ಯರಾದ ಶಶೀಲ ಜಿ ನಮೋಶಿ , ಮಾಜಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ, ಮಾಜಿ ಜಿಪಂ ಅಧ್ಯಕ್ಷರಾದ ನಿತಿನ್ ಗುತ್ತೇದಾರ , ಕರಾಟೆ ಮುಖ್ಯ ತರಬೇತುದಾರರಾದ ದಶರಥ ದುಮ್ಮನಸೂರ , ಕಾಂಗ್ರೆಸ್ ಮುಖಂಡರಾದ ಅರುಣ ಪಾಟೀಲ , ಗೋಪಿಕೃಷ್ಣ ಗುಡೇನ್, ಮಾಜಿ ಮಹಾಪೌರರಾದ ಶರಣು ಮೋದಿ, ಕರವೇ ಉ.ಕ.ಉಪಾಧ್ಯಕ್ಷರಾದ ರಾಜಶೇಖರ ಪಾಟೀಲ , ಗೋಪಾಲ ನಾಟೀಕಾರ ಸೇರಿದಂತೆ ಇನ್ನಿತರರು ಹರ್ಷ ವ್ಯಕ್ತಪಡಿಸಿದರು. ಕಲಬುರಗಿ ಜನತೆ ಹಾಗೂ ಕ್ರೀಡಾಭಿಮಾನಿಗಳು ಬೀರನೂರ ಸಾಧನಗೆ ಹರ್ಷ ವ್ಯಕ್ತಪಡಿಸಿದ್ದಾರೆ.