ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿ ನಾಯಕ ಭಗತ್‍ಸಿಂಗ್

0
35

ಶಹಾಬಾದ: ಭಾರತದಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸ್ವಾತಂತ್ರ್ಯ ಹೋರಾಟದಲ್ಲಿ ಗೊತ್ತಿರುವ ಕ್ರಾಂತಿಕಾರಿ ನಾಯಕ ಎಂದರೆ ಅದು ಭಗತ್‍ಸಿಂಗ್ ಅಲ್ಲದೇ ಮತ್ಯಾರೂ ಅಲ್ಲ ಎಂದು ಎಸ್‍ಯುಸಿಐ(ಸಿ) ಸ್ಥಳೀಯ ಕಾರ್ಯದರ್ಶಿ ಗಣಪತ್‍ರಾವ್ ಮಾನೆ ಹೇಳಿದರು.

ಅವರು ನಗರದ ಎಐಡಿಎಸ್‍ಓ ಸಂಘಟನೆ ವತಿಯಿಂದ ಆಯೋಜಿಸಲಾದ ಶಹೀದ್ ಭಗತ್ ಸಿಂಗ ರವರ 114 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

Contact Your\'s Advertisement; 9902492681

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿ ಭಗತ್‍ಸಿಂಗ್ ಅವರ ಪಾತ್ರ ಬಹಳ ಮಹತ್ವದ್ದಾಗಿದೆ. ಬ್ರಿಟಿಷರ ವಿರುದ್ಧ ಎದೆಗುಂದದೆ ಹೋರಾಡಿ ತನ್ನ 23ನೇ ವಯಸ್ಸಿನಲ್ಲೇ ವೀರಮರಣ ಹೊಂದಿದ ಧೀಮಂತ ಭಗತ್‍ಸಿಂಗ್. ಭಗತ್ ಸಿಂಗ್ ಹುಟ್ಟು ಹೋರಾಟಗಾರ. ಸಾಮಾಜಿಕ ಕ್ರಾಂತಿಕಾರಿ. 1931ರಲ್ಲಿ ತನ್ನ ಗೆಳೆಯರಾದ ರಾಜ್‍ಗುರು ಮತ್ತು ಸುಖದೇವ್ ಜೊತೆಗೆ ನೇಣಿಗೆ ಕೊರಳೊಡ್ಡಿದ ವೀರ ಸೇನಾನಿ. ಬ್ರಿಟಿಷರ ವಿರುದ್ಧ ಕ್ರಾಂತಿಕಾರಿ ಹೋರಾಟ ನಡೆಸಿದ ವೀರ. ದೇಶಕ್ಕಾಗಿ ತನ್ನ ಪ್ರಾಣ ತ್ಯಾಗ ಮಾಡಿದ ಧೀರ ಭಗತ್ ಸಿಂಗ್. ಆದರೆ ಇಂದು ಸರಕಾರದ ಎಲ್ಲಾ ನೀತಿಗಳು ಕಾರ್ಪೋರೇಟ್ ಪರವಾಗಿ ತರುತ್ತಿದ್ದು ಇದರ ವಿರುದ್ಧ ಹೋರಾಡಲು ಭಗತ್‍ಸಿಂಗ್‍ರ ವಿಚಾರ ಬಹಳ ಅವಶ್ಯಕವೆಂದು ಎಂದು ಹೇಳಿದರು.

ಎಐಡಿವೈಓ ಜಿಲಾ ್ಲಕಾರ್ಯದರ್ಶಿ ಜಗನ್ನಾಥ.ಎಸ್.ಎಚ್ ಕೃಷಿ ನೀತಿಗಳು ಸಾರ್ವಜನಿಕ ಉದ್ಯಮಗಳ ಖಾಸಗಿಕರಣ ಹಾಗೂ ಬೆಲೆ ಏರಿಕೆ ಕಾರ್ಪೋರೇಟ್ ಪರವಾಗಿದ್ದು ಇದರ ವಿರುಧ್ಧ ಸಂಘಟಿತ ಹೋರಾಟ ಕಟ್ಟಲು ಯುವಜನರು ಮಂದಾಗಬೇಕೆಂದು ಹೇಳಿದರು.

ಎಐಡಿಎಸ್‍ಓ ಅಧ್ಯಕ್ಷ ಸಿದ್ದು ಚೌಧರಿ ಅಧ್ಯಕ್ಷತೆ ವಹಿಸಿದ್ದರು.
ತಿಮ್ಮಯ್ಯ ಮಾನೆ , ನೀಲಕಂಠ.ಎಮ್.ಹುಲಿ , ಪ್ರವೀಣ.ಬಿ , ಶ್ರೀನೀವಾಸ , ರಾಘು ಪವಾರ, ಮಲ್ಲಿಕಾರ್ಜನ್, ಕಿರಣ ಕುಮಾರ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here