ಸುರಪುರ: ರಾಮ್ ಸೇನಾ ಸಂಸ್ಥಾಪನ ದಿನ ಆಚರಣೆ

0
9

ಸುರಪುರ: ರಾಮ್ ಸೇನಾ ಸಂಘಟನೆಯ ತಾಲೂಕು ಘಟಕದಿಂದ ರಾಮ್ ಸೇನಾ ಸಂಘಟನೆಯ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.ಶುಕ್ರವಾರ ನಗರದ ರಂಗಂಪೇಟೆಯ ಅಂಬಾ ಭವಾನಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ನಂತರ ನಗರದ ಕುದರಿ ಗುಡ್ಡದಲ್ಲಿ ರಾಮ್ ಸೇನಾ ಧ್ವಜಾರೋಹಣ ನೆರವೇರಿಸುವ ಮೂಲಕ ರಾಮ್ ಸೇನಾಪರ ಘೋಷಣೆಗಳನ್ನು ಕೂಗಿ ಸಿಹಿ ಹಂಚಿ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ಶರಣು ನಾಯಕ ಡೊಣ್ಣಿಗೇರಿ,ಪ್ರಧಾನ ಕಾರ್ಯದರ್ಶಿ ಶರಣು ನಾಯಕ ದೀವಳಗುಡ್ಡ,ನಗರ ಅಧ್ಯಕ್ಷ ಲೊಕೇಶ್,ನಾಮನಿರ್ದೇಶಿತ ನಗರಸಭೆ ಸದಸ್ಯ ಹರೀಶ್ ತ್ರಿವೇದಿ,ಅನಿಲ್‌ಗೌಡ ಹಸನಾಪುರ,ವಿಷ್ಣು ರಂಗಂಪೇಟ,ರಮೇಶ ದೇಸಾಯಿ ಕೆಂಭಾವಿ,ಶಂಕರ್,ದುರ್ಗಪ್ಪ,ಬಲಭೀಮ ಶೆಳ್ಳಗಿ,ತಿಪ್ಪಣ್ಣ,ಭೀಮು,ಪುಟ್ಟಯ್ಯ,ಅಂಬರೇಶ ಬೋನಾಳ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here