31 ಕ್ಕೆ ‘ಅವ್ವ ‘ ಪ್ರಶಸ್ತಿ ಪ್ರದಾನ ಸಮಾರಂಭ

0
46

ಡೊಂಗರಗಾoವದ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನದಿಂದ ಕೊಡಮಾಡುವ ಅವ್ವ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ವನ್ನು ದಿನಾಂಕ.31-10-2021, ರಂದು ಬೆಳಿಗ್ಗೆ 11 ಗಂಟೆಗೆ ಅನ್ನಪೂರ್ಣ ಕ್ರಾಸ ಹತ್ತಿರವಿರುವ ಕಲಾ ಮಂಡಳ ಕಲಬುರಗಿಯಲ್ಲಿ ಹಮ್ಮಿಕೊಂಡಿದ್ದು, ಅತ್ತಿವೇರಿ ಬಸವಧಾಮದ ಪೂಜ್ಯ ಶ್ರೀ ಬಸವೇಶ್ವರಿ ಮಾತಾಜಿ ದಿವ್ಯ ಸಾನಿಧ್ಯ ವಹಿಸಲಿದ್ದು,ಗುಲ್ಬರ್ಗವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ದಯಾನಂದ ಅಗಸರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕಲಾ ನಿಕಾಯನದ ಡೀನರಾದ ಡಾ. ಎಚ್ ಟಿ. ಪೋತೆ ಅವರು ಡಾ. ಅಶೋಕ ಕುಮಾರ್ ಮಟ್ಟಿ ದಂಪತಿಗಳು ರಚಿಸಿರುವ ಏಳು ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ರವೀಂದ್ರ ಮಾಲಿಪಾಟೀಲ್ ಆಗಮಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಹಿರಿಯ ಉಪಾಧ್ಯಕ್ಷರಾದ ಶ್ರೀ ಅಪ್ಪಾರಾವ ಅಕ್ಕೋಣಿ ವಹಿಸಲಿದ್ದು, ಪ್ರಾಧ್ಯಾಪಕರಾದ,ಡಾ ವಿಜಯಕುಮಾರ್ ಪರುತೆ ಉಪಸ್ಥಿತರಿರಲಿದ್ದಾರೆ.

Contact Your\'s Advertisement; 9902492681

2021ನೇ ಸಾಲಿನ ಅವ್ವ ಪ್ರಶಸ್ತಿಗೆ ಬೆಂಗಳೂರಿನ ಡಾ.ಪದ್ಮಿನಿ ನಾಗರಾಜು, ಚಂದ್ ಪಾಷ್ಎನ್. ಎಸ್,ಪ್ರೊ. ಬಿ ಪಿ ಹೂಗಾರ,ಶ್ರೀ ಸಿದ್ರಾಮಪ್ಪ ಮೂಲಗೆ,ಡಾ ಶಾಂತಾ ಅಷ್ಟಗಿ,ಶ್ರೀವಿಶ್ವೇಶ್ವರಯ್ಯ ಟಿ.ಎನ್ ಭಜನರಾಗಿದ್ದು, ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.ಎಂದುಪ್ರತಿಷ್ಠಾನದ ಅಧ್ಯಕ್ಷರಾದಡಾ.ಶರಣಬಸಪ್ಪ ವಡ್ಡನಕೇರಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here