ಯರ್ರಾಬಿರ್ರಿ ಸಿನೆಮಾ ನಟ ಆಗಮನ:ನೋಡಲು ಕಿಕ್ಕಿರಿದ ಜನಸ್ತೋಮ

0
17

ಸುರಪುರ: ನಗರಕ್ಕೆ ಯರ್ರಾಬಿರ್ರಿ ಸಿನೆಮಾದ ನಾಯಕ ನಟ ರೂರಲ್ ಅಂಜನ್ ಆಗಮಿಸಿದ್ದರು.ನೆಚ್ಚಿನ ನಟನನ್ನು ನೋಡಲು ಸುರಪುರ ನಗರ ಮಾತ್ರವಲ್ಲದೆ ಗ್ರಾಮೀಣ ಭಾಗದಿಂದ ಅನೇಕ ಜನ ಸಿನಿರಸಿಕರು ಆಗಮಿಸಿ ನಟನನ್ನು ಕಂಡು ಕೇಕೆ ಹಾಕಿ ಹರ್ಷ ವ್ಯಕ್ತಪಡಿಸಿದರು.

ಬುಧವಾರ ಮದ್ಹ್ಯಾನ ನಗರದ ಮಹಾತ್ಮ ಗಾಂಧಿ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ ಜಯಘೋಷ ಮೊಳಗಿಸಿದರು.ಅನೇಕು ನಟನಿಗೆ ಹಸ್ತಲಾಘವ ಮಾಡಲು ಮತ್ತು ಸೆಲ್ಫಿಗಾಗಿ ಮುಗಿಬಿದ್ದಿದ್ದು ಕಂಡುಬಂತು.ಮೊದಲಿ ಮಹಾತ್ಮ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಎಲ್ಲರನ್ನು ಭೇಟಿ ಮಾಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಾತನಾಡಿದ ನಟ ರೂರಲ್ ಅಂಜನ್,ನಮ್ಮ ಭಾಗದ ಜನರು ತುಂಬಾ ಸಿನಿಪ್ರಿಯರು ತಾವೆಲ್ಲರು ಬೆಂಗಳೂರು ಮೈಸೂರು ಭಾಗದ ಜನತೆಯ ಅನೇಕ ಸಿನೆಮಾಗಳನ್ನು ಗೆಲ್ಲಿಸಿರುವಿರಿ ಅದರಂತೆ ನಮ್ಮ ಯರ್ರಾಬಿರ್ರಿ ಸಿನೆಮಾವು ಇದೇ ತಿಂಗಳು ೧೨ನೇ ತಾರೀಖಿನಂದು ಬಿಡುಗಡೆಯಾಗಲಿದ್ದು ತಾವೆಲ್ಲರು ನೋಡಿ ನಮಗೆ ಹರಸುವಂತೆ ವಿನಂತಿಸಿದರು.ಅಲ್ಲದೆ ಉತ್ತರ ಕರ್ನಾಟಕ,ಕಲ್ಯಾಣ ಕರ್ನಾಟಕ ಭಾಗದ ಕಲಾವಿದರನ್ನು ಬೆಳೆಸುವ ಕೆಲಸವನ್ನು ತಾವೆಲ್ಲರು ಮಾಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ,ಈ ಭಾಗದಲ್ಲಿ ಒಳ್ಳೆ ಪ್ರತಿಭಾವಂತರಿದ್ದು ಅವಕಾಶಗಳು ಕಡಿಮೆಯಿವೆ,ತಾವೆಲ್ಲರು ಬೆಳೆಸುವ ಮೂಲಕ ಈ ಭಾಗದ ಪ್ರತಿಭೆಗಳನ್ನು ಮೇಲಕ್ಕೆತ್ತುವಂತೆ ಮನವಿ ಮಾಡಿದರು.

ನಟನ ಆಗಮನದ ಹಿನ್ನೆಲೆಯಲ್ಲಿ ಸಾವಿರಾರು ಜನರು ಸೇರಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿ ಅರ್ಧಗಂಟೆಗಳ ಕಾಲ ವಾಹನ ಸವಾರರು ಪರದಾಡುವಂತಾಗಿತ್ತು.ಈ ಸಂದರ್ಭದಲ್ಲಿ ಮುಖಂಡರಾದ ಬಲಭೀಮ ನಾಯಕ ಬೈರಿಮಡ್ಡಿ,ವೆಂಕಟೇಶ ನಾಯಕ ಬೈರಿಮಡ್ಡಿ,ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಶ್ರವಣಕುಮಾರ ನಾಯಕ ಡೊಣ್ಣಿಗೇರಾ, ಅಂಬ್ರೇಶ ನಾಯಕ ಡೊಣ್ಣಿಗೇರಾ,ರಾಮಣಗೌಡ ಬೈಲಾಪುರ,ವಾಸು ನಾಯಕ ಬೈರಿಮಡ್ಡಿ,ಶಿವರಾಜ ಕಲಕೇರಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here