ಕಾಂಗ್ರೆಸ್ ಕಾರ್ಯಾಲಯದಲ್ಲಿ ಟಿಪ್ಪು ಸುಲ್ತಾನ ಜಯಂತಿ

0
26

ಬಾಗಲಕೋಟ: ಇಂದು ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮೈಸೂರು ಹುಲಿ ಟಿಪ್ಪುಸುಲ್ತಾನರ ಜಯಂತಿ ಬಹಳ ಸರಳ ಸಡಗರದಿಂದ ಆಚರಿಸಲಾಯಿತು.

ಸಭೆಯನ್ನುದ್ದೇಶಿಸಿ ಬಾಗಲಕೋಟ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ತೋಹಿದ ಅಲಿ ಸಂತಿಶಿರೂರ ಮಾತನಾಡಿ ಶೃಂಗೇರಿ ಶಾರದಾ ಪೀಠಕ್ಕೆ ಮರಾಠರು ದಾಳಿ ಮಾಡಿದಾಗ ಮಠದ ಶ್ರೀಗಳು ಟಿಪ್ಪುರವರಿಗೆ ಬರೆದ ಪತ್ರ ಮತ್ತು ಮಠದ ಜೀರ್ಣೋಧ್ಧಾರಕ್ಕಾಗಿ ಮಾಡಿದ ಸಹಾಯ ಸಹಕಾರ ಇಂದಿಗೂ ಐತಿಹಾಸಿಕ,ಭಾವೖಕ್ಯತೆಯ ಪ್ರತೀಕ,ಇಂತಹ ದೇಶಪ್ರೇಮಿ , ಮೈಸೂರು ಹುಲಿ ಕನ್ನಡ ಪ್ರೇಮಿ , ಸರ್ವಜನ ಹಿತ ಬಯಸುವ ದೇಶಭಕ್ತರನ್ನು ಕೆಲನಕಲಿ ಮಬ್ ಭಕ್ತರು ನಿಜಾಂಶ ತಿಳಿಲಾರದೇ ದೇಶದ್ರೋಹಿ ,ಮತಾಂಧ ಎಂದು ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ.
ಇದು ಖಂಡನಾರ್ಹ ಎಂದು ಹೇಳಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಜಿಲ್ಲಾ ಅಲ್ಪಸಂಖ್ಯಾತ ಪ್ರಧಾನ ಕಾರ್ಯದರ್ಶಿ ಶಬ್ಬೀರ ನದಾಫ, ಮುಖಂಡ ಕುತುಬುದ್ದೀನ ಖಾಜಿ,ಆನಂದ ಶಿಲ್ಪಿ ,ದಂಡಿನ, ರಾಜು ಮನ್ನಿಕೇರಿ,ಬಾಬು, ಇಟಗಿ ,ಇನ್ನೂ ಹಲವಾರು ಮುಖಂಡರು,ಕಾರ್ಯಕರ್ತರು ಭಾಗಿಯಾಗಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here