ಶಿವಾನಂದರ ಪಾಟೀಲ ಗೆಲುವು ನನ್ನ ಗೆಲುವು ಡಾ.ಮಲ್ಲಿಕಾರ್ಜುನ ಖರ್ಗೆ

0
51

ಜೇವರ್ಗಿ:ಕಲಬುರ್ಗಿ-ಯಾದಗಿರಿ ಜಿಲ್ಲಾ ಕಾಂಗ್ರೆಸ್ ವಿಧಾನ ಪರಿಷತ್ ಚುಣಾವಣೆ ಪ್ರಚಾರ ಸಭೆಯಲ್ಲಿ ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೇ ಅವರು ಮಾತನಾಡಿ ನನ್ನ ಸೋಲು ಪ್ರಜಾ ಪ್ರಭುತ್ವದ ಉತ್ತಮ ನಾಯಕನ ಸೋಲು ಇದನ್ನು ಮರೆಯಬೇಕಾದರೆ, ಶಿವಾನಂದ ಪಾಟೀಲರನ್ನು ಚುನಾಯಿತ ಪ್ರತಿನಿಧಿಗಳು ಗೆಲ್ಲಿಸಲೆಬೇಕು ಎಂದು ಕರೆ ನೀಡಿದರು. ಕಾಂಗ್ರೆಸ್ ಅಭ್ಯರ್ಥಿಯಾದ ಶಿವಾನಂದ ಪಾಟೀಲ್ ಪಾಟೀಲ್ ಮರತೂರ ಅವರಿಗೆ ಮತ ನೀಡುವಂತೆ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಶಾಸಕರು ಶರಣಬಸಪ್ಪಗೌಡ ದಶ೯ನಾಪೂರ, ಮಾಜಿ ಸಚಿವರಾದ ಶರಣಪ್ರಕಾಶ ಪಾಟೀಲ್, ಮಾಜಿ ಶಾಸಕರು ರಾಜ ವೆಂಕಟಪ್ಪ ನಾಯಕ್, ಮಾಜಿ ಸಂಸದರು ಬಿ ವಿ ನಾಯಕ ಯಾದಗಿರಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮರಿಗೌಡ ಹುಲಕಲ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಚನ್ನಾರಡ್ಡಿ ಪಾಟೀಲ್ ತುನ್ನೂರ್, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು,ಕಾರ್ಯಕರ್ತರು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here