ಸಗರನಾಡು ಬಸ್‌ಗಳ ಹೆಚ್ಚಿಸಲು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

0
13

ಸುರಪುರ: ಕಲಬುರ್ಗಿಗೆ ಹೋಗಲು ಸುರಪುರ ದಿಂದ ಸಗರನಾಡು ಬಸ್‌ಗಳ ಸಂಖ್ಯೆ ಹೆಚ್ಚಿಸುವಂತೆ ಆಗ್ರಹಿಸಿ ನಗರದ ಬಸ್ ಡಿಪೋ ಮುಂದೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದಿಂದ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯ ನೇತೃತ್ವವಹಿಸಿದ್ದ ಸಮಿತಿಯ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ,ಸುರಪುರದಿಂದ ಕಲಬುರ್ಗಿಗೆ ಹೋಗಲು ಸಗರನಾಡು ಬಸ್‌ಗಳು ತೀರಾ ಕಡಿಮೆಗೊಳಿಸಿದ್ದರಿಂದ ಬಡ ಜನರು ಆಸ್ಪತ್ರೆಯಂತಹ ಅನೇಕ ಕಾರಣಗಳಿಗೆ ಕಲಬುರ್ಗಿಗೆ ಹೋಗಲು ದುಬಾರಿ ಹಣವನ್ನು ನೀಡಿ ಹೋಗಬೇಕಾದ ಪರಸ್ಥಿತಿ ನಿರ್ಮಾಣವಾಗಿದೆ.ಆದ್ದರಿಂದ ಕೂಡಲೇ ಸಗರನಾಡು ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು ಇಲ್ಲವಾದಲ್ಲಿ ಇದೇ ೨೧ನೇ ತಾರೀಖು ಬಸ್ ಡಿಪೋ ಮುಂದಿನ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

Contact Your\'s Advertisement; 9902492681

ನಂತರ ಡಿಪೋ ವ್ಯವಸ್ಥಾಪಕರಿಗೆ ಮನವಿಯನ್ನು ಸಲ್ಲಿಸಿದರು.ಮನವಿ ಸ್ವೀಕರಿಸಿದ ಘಟಕ ವ್ಯವಸ್ಥಾಪಕರು ಮಾತನಾಡಿ,ತಮ್ಮ ಮನವಿಯನ್ನು ಮೇಲಧಿಕಾರಿಗಳಿಗೆ ಕಳುಹಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಕುರಕುಂದಿ,ನಿಂಗಪ್ಪ ಕಟಗಿಶಹಾಪುರ,ಮಾನಪ್ಪ ಬಿಜಾಸಪುರ,ಮಹಾದೇವಪ್ಪ ಬಿಜಾಸಪುರ,ಬುದ್ಧಿವಂತ ನಾಗರಾಳ,ಜೆಟ್ಟೆಪ್ಪ ನಾಗರಾಳ,ರಾಮಣ್ಣ ಶೆಳ್ಳಗಿ,ಆರ್.ಎಸ್.ಮಾಲಗತ್ತಿ,ರಾಮಣ್ಣ ಬಬಲಾದ,ಖಾಜಾಹುಸೇನ್ ಗುಡಗುಂಟಿ,ಮಹೇಶ ಯಾದಗಿರಿ,ಮಲ್ಲೇಶ ಬಡಿಗೇರ ಶೆಳ್ಳಗಿ,ಮುತ್ತುರಾಜ ಬಿ ಪಂಚಾಯತಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here