ಕಲಬುರಗಿ: ನಗರದ ಶ್ರೀ ವಿಠ್ಠಲರಾವ ತುಕಾರಮ ಸುತ್ತಾವೆ ಸ್ಮಾರಕ ಪ್ರಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ೧೫ ರಿಂದ ೧೮ ವರ್ಷದ ಶಾಲಾ ಮಕ್ಕಳಿಗೆ ಕೋವಿಡ ಲಸಿಕೆ ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ದಕ್ಷಿಣ ವಲಯ ಶಂಕ್ರಮ್ಮ ಧವಳಗಿ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಡಾ.ವೀಣಾ, ಪ್ರೌಢ ಶಾಲೆಯ ಮುಖ್ಯ ಗುರು ಎಸ್.ಎಸ್.ಪಾಟೀಲ್, ಮಲ್ಲಿಕಾರ್ಜುನ ಬಿರಾದಾರ ಮತ್ತು ಶಾಲೆಯ ಶಿಕ್ಷಕರು ಇದ್ದರು.