ಸುರಪುರ: ತಾಲೂಕಿನ ಕಿರದಹಳ್ಳಿ ಗ್ರಾಮಕ್ಕೆ ಬಸ್ ಇಲ್ಲದೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪರದಾಡುವಂತಾಗಿದೆ ಆದ್ದರಿಂದ ಕಿರದಹಳ್ಳಿ ಗ್ರಾಮಕ್ಕೆ ಬಸ್ ಆರಂಭಿಸುವಂತೆ ಬಿಜೆಪಿ ಯುವ ಮೋರ್ಚಾದ ತಾಲೂಕು ಅಧ್ಯಕ್ಷ ಶ್ರವಣಕುಮಾರ ನಾಯಕ ಒತ್ತಾಯಿಸಿದರು.
ನಗರದ ಸಾರಿಗೆ ಬಸ್ ಡಿಪೋದಲ್ಲಿನ ಬುಧವಾರ ಮದ್ಹ್ಯಾನ ಘಟಕ ವ್ಯವಸ್ಥಾಪಕರನ್ನು ಭೇಟಿ ಮಾಡಿದ ಮುಖಂಡರು,ಕಿರದಹಳ್ಳಿ ಗ್ರಾಮದಿಂದ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಬರಲು ವಿದ್ಯಾರ್ಥಿಗಳಿಗೆ ತೀವ್ರ ಪರದಾಡುವಂತಾಗಿದೆ,ಅಲ್ಲದೆ ಸಾರ್ವಜನಿಕರು ನಗರಕ್ಕೆ ಆಸ್ಪತ್ರೆಗೆ ಮತ್ತು ವಸ್ತುಗಳು ಖರೀದಿಗೆ ಬರಲು ಬಸ್ ಇಲ್ಲದ್ದರಿಂದ ಸಾರ್ವಜನಿಕರಿಗೆ ತೊಂದರೆಯುಂಟಾಗಿದೆ,ಇಲ್ಲಿಯವರೆಗೆ ಬಸ್ ಇಲ್ಲದೆ ಗ್ರಾಮದ ಜನರು ತೀವ್ರ ತೊಂದರೆಪಡುತ್ತಿದ್ದಾರೆ.ಆದ್ದರಿಂದ ಶೀಘ್ರದಲ್ಲಿ ಗ್ರಾಮಕ್ಕೆ ಬಸ್ ಆರಂಭಿಸುವಂತೆ ಒತ್ತಾಯಿಸಿದರು,ಇಲ್ಲವಾದಲ್ಲಿ ವಿದ್ಯಾರ್ಥಿಗಳಿಗಾಗಿ ಪ್ರತಿಭಟನೆ ನಡೆಸಬೇಕಾಗಲಿದೆ ಎಂದು ಎಚ್ಚರಿಸಿ ನಂತರ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಮನವಿಯನ್ನು ಸ್ವೀಕರಿಸಿದ ಘಟಕ ವ್ಯವಸ್ಥಾಪಕರು ನಿಮ್ಮ ಮನವಿಯನ್ನು ಮೇಲಾಧಿಕಾರಿಗಳಿಗೆ ಕಳುಹಿಸಿ ಕ್ರಮಕ್ಕೆ ತಿಳಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಮಂಗಿಹಾಳ,ಉಪಾಧ್ಯಕ್ಷ ರಾಮನಗೌಡ ಬೈಲಾಪುರ,ಕಾರ್ಯದರ್ಶಿ ಶ್ರೀಕಾಂತ ದೊರೆ ಕಚಕನೂರು ಸೇರಿದಂತೆ ಅನೇಕರಿದ್ದರು.