ಕಲಬುರಗಿ: ಎವಿ ಮೀಡಿಯಾ ಸೊಲ್ಯೂಶನ್ಸ್ ಸೊಸೈಟಿ ವತಿಯಿಂದ ನಗರದ ಆಳಂದ ರಸ್ತೆಯ ಸಂತೋಷ ಕಾಲನಿಯ ಕೆಎಚ್ಬಿ ಗ್ರೀನ ಪಾರ್ಕ ಬಡಾವಣೆಯಲ್ಲಿ ದಿ.ಮಾರುತಿ ಬೊಗ್ಲೆ ಅವರ ದ್ವಿತೀಯ ಪುಣ್ಯಸ್ಮರಣೆ ನಿಮಿತ್ಯ ವಿವಿಧ ಕ್ಷೇತ್ರದ ಸಾಧಕರಾದ ಎಚ್.ಬಿ.ಪಾಟೀಲ, ಬಸವರಾಜ ಹೆಳವರ ಯಾಳಗಿ, ಸಿದ್ದರಾಮ ತಳವಾರ ಅವರಿಗೆ ಬುಧವಾರ ಸಂಜೆ ಸತ್ಕರಿಸಿ, ಗೌರವಿಸಲಾಯಿತು.
ಪೂಜ್ಯ ಗಣೇಶಾನಂದ ಮಹಾಸ್ವಾಮಿಗಳು, ಬಸವರಾಜ ದೇಶಮುಖ, ಶಶಿಕಲಾ ಎಸ್.ಪಾಟೀಲ, ಮಲ್ಲಿನಾಥ ಚಿಂಚೋಳಿ, ಧನರಾಜ ಖಂದಾರಿ, ಮಲ್ಲಿಕಾರ್ಜುನ ಮಡಿವಾಳ, ಶರಣಬಸಪ್ಪ ಆರ್.ಪಾಟೀಲ, ಸಂಜೀವಕುಮಾರ ಶೆಟ್ಟಿ, ವೀರೇಶ ಬೋಳಶೆಟ್ಟಿ ನರೋಣಾ, ಸೂರ್ಯಕಾಂತ ಸಾವಳಗಿ, ಡಿ.ವಿ.ಕುಲಕರ್ಣಿ ಸೇರಿದಂತೆ ಮತ್ತಿತರರು ಇದ್ದರು.