ಆಡಳಿತ ವ್ಯವಸ್ಥೆ ಸುಗಮವಾಗಿ ನಡೆಯಲು ಸರಕಾರಿ ನೌಕರರ ಪಾತ್ರ ಪ್ರಮುಖವಾದುದು: ಜಯಶ್ರೀ ಮತ್ತಿಮಡು

0
100

 

ಶಹಾಬಾದ: ಕೇಂದ್ರ ಹಾಗೂ ರಾಜ್ಯದ ಆಡಳಿತ ವ್ಯವಸ್ಥೆ ಸುಗಮವಾಗಿ ನಡೆಯಲು ಸರಕಾರಿ ನೌಕರರ ಪಾತ್ರ ಪ್ರಮುಖವಾದುದು ಎಂದು ಬಿಜೆಪಿ ಮುಖಂಡೆ ಜಯಶ್ರೀ ಬಸವರಾಜ ಮತ್ತಿಮಡು ಹೇಳಿದರು.ಅವರು ಸೋಮವಾರ ನಗರದ ಸರಕಾರಿ ಶಾಸಕರ ಮಾದರಿ ಶಾಲೆಯಲ್ಲಿ

Contact Your\'s Advertisement; 9902492681

ಸರ್ಕಾರಿ ನೌಕರರ ಸಂಘದ ತಾಲೂಕಾ ಘಟಕದ ವತಿಯಿಂದ ಆಯೋಜಿಸಲಾದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಪ್ರತಿಯೊಬ್ಬರ ಸೇವೆಯೂ ಸ್ಮರಣೀಯ. ವಿಶೇಷವಾಗಿ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು. ಶಿಕ್ಷಣ ಸಮಾಜದ ಸ್ವರೂಪವನ್ನು ಬದಲಾಯಿಸುತ್ತದೆ. ಗುಣಮಟ್ಟದ ಶಿಕ್ಷಣ ನೀಡುವುದರಿಂದ ದೇಶ ಪ್ರಗತಿ ಸಾಧಿಸಲು ನೆರವಾಗಲಿದ್ದು, ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ತಿಳುವಳಿಕೆ ಮೂಡಿಸಬೇಕು. ಸಮಾಜಕ್ಕೆ ಆದರ್ಶ ವ್ಯಕ್ತಿಗಳನ್ನು ನೀಡುವ ಸಾಮರ್ಥ್ಯವುಳ್ಳ ಶಿಕ್ಷಕರಾಗಬೇಕೆಂದು ಅಭಿಪ್ರಾಯಪಟ್ಟರು.

ತಹಸೀಲ್ದಾರ ಸುರೇಶ ವರ್ಮಾ ಮಾತನಾಡಿ, ಸರಕಾರಿ ನೌಕರರು ಆಡಳಿತ ಸುಧಾರಣೆಯಲ್ಲೂ ಪ್ರಮುಖ ಪಾತ್ರವಿದೆ.ಅಲ್ಲದೇ ಕೋವಿಡ್-೧೯ ಸಂದರ್ಭದಲ್ಲಿ ತಮ್ಮ ಜೀವನದ ಹಂಗನ್ನು ತೊರೆದು ಕಾರ್ಯನಿರ್ವಹಿಸಿದ್ದಾರೆ.ಮನೆಮನೆಗೆ ಹೋಗಿ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ. ಮಹಾಮಾರಿಯನ್ನು ತೊಲಗಿಸಲು ಸರಕಾರಿ ನೌಕರರು ಮಾಡಿದ ಕಾರ್ಯ ಶ್ಲಾಘನೀಯವಾದುದು. ಅಲ್ಲದೇ ಹಲವಾರು ಜನರು ತಮ್ಮ ಜೀವನವನ್ನು ಕಳೆದುಕೊಂಡಿದ್ದಾರೆ.ಆದರೆ ಇಂದು ಸರಕಾರಿ ನೌಕರರ ಮೇಲೆ ಹಲ್ಲೆಯಾಗುತ್ತಿರುವುದು ಮಾತ್ರ ಖಂಡನೀಯ.ಸರ್ಕಾರ ಸರಕಾರಿ ನೌಕರರ ರಕ್ಷಣೆ ನೀಡುವಂತಾಗಬೇಕೆಂದು ಹೇಳಿದರು.

ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಈರಣ್ಣ ಕೆಂಭಾವಿ ಮಾತನಾಡಿ, ಸರಕಾರಿ ನೌಕರರ ಒತ್ತಡದಲ್ಲೂ ಸಾಕಷ್ಟು ಕೆಲಸವನ್ನು ನಿರ್ವಹಿಸುತ್ತಿದ್ದಾರೆ.ಆದ್ದರಿಂದ ತಾಲೂಕಾದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಬೇಕು.ತಾಲೂಕಿನಲ್ಲಿ ಎಲ್ಲಾ ಕಚೇರಿಗಳು ಪ್ರಾರಂಭವಾಗಬೇಕು. ಶ್ರೀಘ್ರದಲ್ಲಿ ಶಿಕ್ಷಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪ್ರಾರಂಭ ಮಾಡಬೇಕು. ನೌಕರರ ಸಂಘಕ್ಕೆ ಎರಡು ಎಕರೆ ಜಾಗವನ್ನು ಮಂಜೂರು ಮಾಡಬೇಕೆಂದು ಶಾಸಕರಿಗೆ ಮನವಿ ಸಲ್ಲಿಸಿಲಾಗಿದೆ.ಈಗಾಗಲೇ ನಮ್ಮ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅವರು ಹಿದೆಂದೂ ಕಾಣದ ನೌಕರರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ್ದಾರೆ ಎಂಬುದಕ್ಕೆ ನಮಗೆ ಹೆಮ್ಮೆ ಇದೆ. ನೌಕರರ ೭ನೇ ವೇತನವನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಿದ್ದಾರೆ.ಅವರ ಉತ್ತಮ ಕಾರ್ಯದಿಂದಲೇ ಇಂದು ನೌಕರರ ಬಹುತೇಖ ಸಮಸ್ಯೆಗಳು ಬಗೆಹರಿದಿವೆ.ಅಲ್ಲದೇ ಸಂಘಕ್ಕೆ ಏನಾದರೂ ಬೆಲೆ ಬಂದಿದೆ ಎಂದರೆ ಅದು ನಮ್ಮ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅವರಿಂದಲೇ. ಕಾರಣ ಅವರು ಚುನಾವಣೆ ಮುಂಚೆ ನೀಡಿದ ಪ್ರಣಾಳಿಕೆಯನ್ನು ಬಹುತೇಖ ಈಡೇರಿಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ನಿವೃತ್ತ, ವರ್ಗಾವಣೆ, ಬಡ್ತಿ ಹೊಂದಿದ ಹಾಗೂ ಆಯ್ಕೆದಾದ ನೌಕರರ ಸಂಘದ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಜೇವರ್ಗಿ ಸಂಘದ ಅಧ್ಯಕ್ಷ ಡಿ.ಬಿ.ಪಾಟೀಲ, ಜಿಲ್ಲಾ ಸಂಘದ ಉಪಾಧ್ಯಕ್ಷ ಬಾಬು ಮೌರ್ಯ, ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ ಮಠಪತಿ, ರಾಜ್ಯ ಸಮಿತಿ ಸದಸ್ಯ ಶಶಿಕಾಂತ ಭರಣಿ, ಗೌರವಾಧ್ಯಕ್ಷ ಸಂತೋಷ ಸಲಗರ, ಕ.ರಾ.ಪ್ರಾ.ಶಾ.ಶಿ. ಸಂಘದ ತಾಲೂಕಾಧ್ಯಕ್ಷ ಶಿವಪುತ್ರ ಕರಣಿಕ್, ಕ.ರಾ.ಪ್ರಾ.ಶಾ.ಶಿ. ಸಂಘದ ಯಡ್ರಾಮಿ ತಾಲೂಕಾಧ್ಯಕ್ಷ ಕೆಂಚಪ್ಪ ದೋಣಿ, ಮುಖ್ಯಗುರು ಶಿವಪುತ್ರ ಕೋಣಿನ್,ಪ್ರಮೋದ, ರಮೇಶ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಸಂಜಯ ರಾಠೋಡ,ನಿಜಲಿಂಗಪ್ಪ ಕೊರಳ್ಳಿ, ಏಮನಾಥ ರಾಠೋಡ, ಪ್ರಾಂಶುಪಾಲ ಶಮಶೋದ್ದಿನ್ ಪಟೇಲ್, ಜಗಪ್ಪ.ಆರ್.ಹೊಸಮನಿ. ಡಾ. ಸಂಧ್ಯಾ ಕಾನೇಕರ್,ಬಿಆರ್‌ಪಿ ರಮೇಶ ಮಟ್ಟದ್,ಬನ್ನಪ್ಪ ಸೈದಾಪೂರ,ಯೂಸುಫ್ ನಾಕೇದಾರ, ಸೂರ್ಯಕಾಂತ ಕಟ್ಟಿ, ಶ್ರೀಮಂತ, ಸಯ್ಯದ್ ಖಾದ್ರಿ,ವಿಶಾಲ ಕುಲಕರ್ಣಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here