ಪುರಾಣ ಪ್ರವಚನಗಳು ಮನಸ್ಸಿಗೆ ಶಾಂತಿ ನೀಡುತ್ತವೆ: ನಿತೀನ ಗುತ್ತೇದಾರ

ಅಫಜಲಪುರ: ಪುರಾಣ ಪ್ರವಚನಗಳಲ್ಲಿ ಶರಣರ, ಮಹಾತ್ಮರ, ಹಾಗೂ ಸಾಧನೆ ಮಾಡಿದ ಸಾಧಕರ ಜೀವನ ಚರಿತ್ರೆ ಒಳಗೊಂಡಿರುತ್ತದೆ ಹೀಗಾಗಿ ಪುರಾಣ ಪ್ರವಚನ ಕೇಳುವದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ  ಎಂದು ಮಾಜಿ ಜಿಪಂ ಅಧ್ಯಕ್ಷ ನಿತೀನ ಗುತ್ತೇದಾರ ಹೇಳಿದರು.

ತಾಲೂಕಿನ ಸುಕ್ಷೇತ್ರ ಹಿಂಚಗೇರಾ ಗ್ರಾಮದ ಶ್ರೀ ಶಿವಯೋಗೇಶ್ವರ  36ನೇ ಜಾತ್ರಾ ಮಹೋತ್ಸವ ಅಂಗವಾಗಿ ಗ್ರಾಮದ ಹೃದಯ ಭಾಗದಲ್ಲಿರುವ ಮಹಾಲಕ್ಷ್ಮೀ ದೇವಸ್ಥಾನ ಆವರಣದಲ್ಲಿ ಶ್ರೀ ಜಗದ್ಗುರು ಶಿರಹಟ್ಟಿಯ ಫಕೀರೇಶ್ವರ ಮಹಾ ಪುರಾಣ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಹಿಂಚಗೇರಿ ಶ್ರೀ ಶಿವಯೋಗೇಶ್ವರ ಬ್ರಹನ್ಮಠದ  ಶ್ರೀ ಶಂಭುಲಿಂಗ ಶಿವಾಚಾರ್ಯರು ಸಮಾರಂಭದ ಸಾನಿದ್ಯ ವಹಿಸಿ ಆಶೀರ್ವಚನ ನೀಡಿದ ಅವರು  ದ್ವೇಷ ಬಿಡು ಪ್ರೀತಿ ಮಾಡು ಎಂಬ ಸಂದೇಶ ಸಾರಿ, ನೂರಾರು ಪವಾಡ ಮಾಡಿ ಹಿಂದೂ-ಮುಸ್ಲಿಮರಲ್ಲಿ ಸಹೋದರತೆ, ಸಹಬಾಳ್ವೆಯ ಬೀಜ ಬಿತ್ತಿದ ಶಿರಹಟ್ಟಿ ಫಕೀರೇಶ್ವರಾಗಿದ್ದಾರೆ ಅಂತಹ ಮಹಾತ್ಮರ ಪುರಾಣ ಇಂದು ಶ್ರೀ ಕ್ಷೇತ್ರದಲ್ಲಿ ಪ್ರಾರಂಭವಾಗಿದೆ ಈ ಮಹಾನ ಪುರಾಣ ಕೇಳಿದರೆ ಬದುಕು ಸುಂದರವಾಗಲಿದೆ ಎಂದು ಹೇಳಿದರು.

ವೇ.ದ.ಮೂರ್ತಿ ಪಂಡಿತ ರತ್ನ ಬಂಡಯ್ಯ ಶಾಸ್ತ್ರೀಗಳು ಸಂಸ್ಥಾನ ಹಿರೇಮಠ ಸುಂಟನೂರವರು ಶ್ರೀ ಜಗದ್ಗುರು ಶಿರಹಟ್ಟಿ ಫಕೀರೇಶ್ವರ ಮಹಾ ಪುರಾಣವನ್ನು ಪ್ರಸ್ತುತ ಪಡಿಸಿದರು.

ಕಾರ್ಯಕ್ರಮದದಲ್ಲಿ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಸಾನಿದ್ಯ ವಹಿಸಿದರು. ಮುಖಂಡರಾದ ಗುರು ಸಾಲಿಮಠ, ಭಾಗಪ್ಪಗೌಡ ಬಿರಾದಾರ, ಶಿವರಾಯಗೌಡ ಮಾಲೀಪಾಟೀಲ,ಸುಭಾಷ ರೂಗಿ, ಈರಣ್ಣ ಸುತಾರ, ಸುನೀಲ ಶೆಟ್ಟಿ, ಧಾನು ಪತಾಟೆ, ರಾಚಯ್ಯ ಮಠ, ನಾನಗೌಡ ಪಾಟೀಲ, ಕಲ್ಯಾಣಿ ಸಿಂದಗೇರಿ, ಸಿದ್ದು ತೊನಶ್ಯಾಳ, ಭೀಮರಾಯ ತಳವಾರ, ನಂದಪ್ಪ ದಿಡ್ಡಿಮನಿ,  ಭಾಗೇಶ ಬೊರೆಗಾಂವ್,ಸಂತೋಷ ಕಾಮಶೆಟ್ಟಿ, ಶ್ರೀಮಂತ ಪತ್ತಾರ, ಮುಕ್ತಮ ಪಟೇಲ, ವಿಠಲ ಬನ್ನಟ್ಟಿ,ಈರತಯ್ಯ ಮಠ,ಈರಣ್ಣ ಕುಂಬಾರ, ಪರಮೇಶ್ವರ ಯರಗಲ್ಲ, ಸುರೇಶ ರೂಗಿ, ಕರೆಪ್ಪ ಜೇವರ್ಗಿ, ರಾಹುಲ್ ಸುತಾರ, ಪ್ರಕಾಶ ಜಮಾದಾರ,ರಮೇಶ ಹಂಚನಾಳ, ಶೇಖರ ಬನ್ನಟ್ಟಿ, ಸೇರಿದಂತೆ ಗ್ರಾಮಸ್ಥರು ಇದ್ದರು.

emedialine

Recent Posts

ನಗನೂರ ಗ್ರಾ.ಪಂ ಪಿಡಿಓ ಅಮಾನತ್ತು ಮಾಡಿದಿದ್ದರೆ ಉಪವಾಸ ಸತ್ಯಾಗ್ರಹ

ಸುರಪುರ: ನಗನೂರ ಗ್ರಾಮ ಪಂಚಾಯತಿ ಅಭಿವೃಧ್ಧಿ ಅಧಿಕಾರಿಗಳು ನರೇಗಾ ಯೋಜನೆಯಡಿ ಭ್ರಷ್ಟಾಚಾರ ನಡೆಸಿದ್ದು ಕೂಡಲೇ ಪಿಡಿಓ ಅವರನ್ನು ಅಮಾನತ್ತು ಮಾಡುವಂತೆ…

3 mins ago

ಡೆಂಗ್ಯೂ ಪಾಸಿಟಿವ್ ಬಂದರೆ ಸುತ್ತ 100 ಮನೆ ಸರ್ವೆ ಮಾಡಿ | ಡಿ. ಸಿ ಸೂಚನೆ

ಪಾಸಿಟಿವ್ ಬಂದರೆ ಸುತ್ತ 100 ಮನೆ ಸರ್ವೆ ಮಾಡಿ: ಡೆಂಗ್ಯೂ ಪಾಸಿಟಿವ್ ಪತ್ತೆಯಾದಲ್ಲಿ ರೋಗಿಯ ಮನೆ ಸುತ್ತ 100 ಮನೆಗಳು…

5 mins ago

4 ಕೋಟಿ ಅನುದಾನದ ವಿವಿಧ ಕಾಮಗಾರಿಗಳಿಗೆ ಶಾಸಕ ಆರ್.ವಿ.ನಾಯಕ ಚಾಲನೆ

ಸುರಪುರ: ಶಾಸಕ ರಾಜಾ ವೇಣುಗೋಪಾಲ ನಾಯಕ ಅವ ವಿಧಾನಸಭಾ ಕ್ಷೇತ್ರದಲ್ಲಿನ ರತ್ತಾಳ, ಬಾದ್ಯಾಪೂರ, ಬಾದ್ಯಾಪೂರ ದೊಡ್ಡಿ, ಬೈರಿಮಡ್ಡಿ, ಖಾನಾಪೂರ(ಎಸ್.ಹೆಚ್), ಕೃಷ್ಣಾಪೂರ,…

9 mins ago

ದಾಲ್ ಮಿಲ್ಲರ್ಸ್ ಅಸೋಸಿಯೇಷನ್ ವತಿಯಿಂದ ಸಂಸದ ದೊಡ್ಡಮನಿಗೆ ಸನ್ಮಾನ

ಕಲಬುರಗಿ: ನೂತನ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರನ್ನು ಗುಲಬರ್ಗಾ ದಾಲ್ ಮಿಲ್ಲರ್ಸ್ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಲಾಯಿತು. ಅಧ್ಯಕ್ಷ ಚಂದ್ರಶೇಖರ ಎನ್.…

12 mins ago

ಆಧ್ಯಾತ್ಮಿಕತೆ ಅಳವಡಿಕೆಯಿಂದ ಅರ್ಥಪೂರ್ಣ ಜೀವನ ಸಾಧ್ಯ

ಕಲಬುರಗಿ: ಮಾನವ ತನಗಾಗಿ, ತನ್ನ ಕುಟುಂಬಕ್ಕಾಗಿ ಬದುಕು ಸಾಗಿಸುವ ಸ್ವಾರ್ಥ ಜೀವನಕ್ಕೆ ಮಹತ್ವವಿಲ್ಲ. ಸಮಾಜದಲ್ಲಿರುವ ಅಸಹಾಯಕರಿಗೆ ಸಹಾಯಹಸ್ತ ಚಾಚಬೇಕು. ದೇವರು…

14 mins ago

ವಿವಿಧ ಕಾಮಗಾಗಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ

ಕಲಬುರಗಿ: ನಗರದ ವಾರ್ಡ್ ನಂಬರ್ 52 ರಲ್ಲಿ ಬರುವ ಅಕ್ಕಮಹಾದೇವಿ ಕಾಲೋನಿಯ ಬೆಥನಿ ಕಾನ್ವೆಂಟ್ ಶಾಲೆಯ ಎದುರುಗಡೆ ಸುಮಾರು 20…

20 mins ago