ಮುಸ್ಲಿಂರು ನಮಾಜ್ ಮಾಡುವಾಗ ನೀಲಿ ಶಾಲು ಹಾಕಿಕೊಂಡು ರಕ್ಷಾ ಕವಚವಾಗಿ ನಿಲ್ಲುತ್ತೇವೆ: ಯಳಸಂಗಿ

ಕಲಬುರಗಿ: ಮುಸ್ಲಿಂರು ನಮಾಜ್ ಮಾಡುವಾಗ ಹಿಂದುಗಳಾದ ನಾವುಗಳು ಅವರ ರಕ್ಷಣೆಗೆ ನೀಲಿ ಶಾಲು ಹಾಕಿಕೊಂಡು ಮಸೀದಿಯ ಎದುರುಗಡೆ ಅವರ ರಕ್ಷಾಕವಚವಾಗಿ ನಿಲ್ಲುತ್ತೇವೆ ಎಂದು ದಲಿತ ಸೇನೆಯ ರಾಜ್ಯಾಧ್ಯಕ್ಷ ಹಣಮಂತ ಜಿ. ಯಳಸಂಗಿ ಅವರು ಆಂದೋಲಾ ಶ್ರೀಗಳ ಹೇಳಿಕೆಗೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಮಸೀದಿಯ ಮೇಲೆ ಅಳವಡಿಸಲಾಗಿರುವ ಸ್ಟೀಕರ್‍ಗಳನ್ನು ಬರುವ 8ನೇ ತಾರೀಖಿನವರೆಗೆ ತೆಗೆಯದೇ ಹೋದರೆ 9ನೇ ತಾರೀಖಿನಂದು ಎಲ್ಲಾ ಮಸೀದಿಗಳ ಎದುರುಗಡೆ ಡಬಲ್ ಸೌಂಡ್ ಡಾಲ್ಬಿಗಳಲ್ಲಿ ಹನುಮಾನ್ ಚಾಳಿಸ್‍ನ್ನು ಹಚ್ಚಲಾಗುತ್ತದೆ ಎಂದು ಆದೋಲಾ ಶ್ರೀ ಹೇಳಿಕೆ ಕೊಟ್ಟಿರುವುದಕ್ಕೆ ದಲಿತ ಸೇನೆ ಅಷ್ಟೇ ಅಲ್ಲಾ ಈಡಿ ಹಿಂದು ಮುಸ್ಲಿಂ ಬಾಂಧವರು ಅವರ ವಿರುದ್ಧ ರೊಚ್ಚಿಗೆದ್ದಿದ್ದಾರೆಂದು ಹೇಳಿದರು.

ಇದನ್ನೂ ಓದಿ: ಗೃಹ ಸಚಿವರಿಗೆ ಕಪ್ಪು ಬಟ್ಟಿ ಪ್ರದರ್ಶನ: ಕಾಂಗ್ರೆಸ್ ಕಾರ್ಯಕರ್ತರ ಬಂಧನ

ದಲಿತ ಸೇನೆಯ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಇರ್ಷಾದ್ ಅಲಿ ಅವರು ಮಾತನಾಡುತ್ತಾ, ಆಂದೋಲಾ ಶ್ರೀಗೆ ತಾಕತ್ತಿದ್ದರೇ ಅವರು ಕೊಟ್ಟಿರುವ ಹೇಳಿಕೆಯಂತೆ ಬರುವ 9ನೇ ತಾರೀಖಿನಂದು ಮಸೀದಿಯ ಎದುರುಗಡೆ ಹನುಮಾನ್ ಚಾಳಿಸ್‍ನ್ನು ಹಚ್ಚಲಿ ನೋಡೋಣ, ಹೇಳೊಕೆ ಶ್ರೀಗಳಂತೆ ಮಾಡೋ ಕೆಲಸ ಮಾತ್ರ ಮಣ್ಣತಿನ್ನೋದು ಎಂದರು.

ರಾಜ್ಯದ ರಾಜಕೀಯದಲ್ಲಿ ತಮ್ಮ ಬೆಳೆಯನ್ನು ಬೇಯಿಸಿಕೊಳ್ಳಲು ರಾಜಕಾರಣಿಗಳು ಜನರ ಸಮಸ್ಯೆಗಳನ್ನು ಬಗೆ ಹರಿಸುವುದನ್ನು ಬಿಟ್ಟು ಸಮಸ್ಯೆಗಳನ್ನು ಹುಟ್ಟು ಹಾಕುತ್ತಿದ್ದಾರೆ. ಯಾವುದಾದರೊಂದು ಸಮಸ್ಯೆಯನ್ನು ಹುಟ್ಟಿಹಾಕಿ ಆ ಸಮಸ್ಯೆಯನ್ನು ಬಗೆಹರಿಯುವ ಹಂತಕ್ಕೆ ಬರುತ್ತಿದ್ದಂತೆ ಮತ್ತೊಂದು ಸಮಸ್ಯೆಯನ್ನು ಹುಟ್ಟಿ ಹಾಕಿ ಹಿಂದಿನ ಸಮಸ್ಯೆಯನ್ನು ಮರೆಯುವಂತೆ ಮಾಡುವುದು ಸದ್ಯದ ರಾಜಕೀಯ ಸ್ಥೀತಿಯಾಗಿದೆ ಎಂದರು.

ಇದನ್ನೂ ಓದಿ: ಜೇವರ್ಗಿ- ಯಡ್ರಾಮಿ ಕಾಲುವೆಗಳಿಗೆ ನೀರು ಹರಿಸಿರಿ

ಹಿಂದು ಮುಸ್ಲಿಂ ಒಟ್ಟುಗೂಡಿದರೆ ಒಂದಲ್ಲ ಲಕ್ಷ ಜನ ಆಂದೋಲಾ ಶ್ರೀಗಳು ಬಂದರು ಏನು ಮಾಡಕ್ಕಾಗಲ್ಲ, ಈ ಒಬ್ಬ ಆಂದೋಲಾ ಶ್ರೀ ಏನು ಮಾಡತ್ತಾನೆ ಎಂದು ಖಾರವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ದಲಿತ ಸೇನೆಯ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ ಇದ್ದರು.

emedialine

Recent Posts

ನಾಡಹಬ್ಬ ಆಚರಣೆ ಅಂಗವಾಗಿ ನಾಡ ದೇವತೆ ಸ್ತಬ್ಧ ಚಿತ್ರಗಳ ಮೆರವಣಿಗೆ

ಸುರಪುರ: ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ವತಿಯಿಂದ 38ನೇ ನಾಡಹಬ್ಬ ಉತ್ಸವಾಚರಣೆ ಅಂಗವಾಗಿ ನಗರದ…

11 hours ago

ವೀರಪ್ಪ ನಿಷ್ಠಿ ಕಾಲೇಜ್ ಮಹಾತ್ಮ ಗಾಂಧಿಜಿ ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿ

ಸುರಪುರ: ನಗರದ ಶ್ರೀ. ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆದ…

11 hours ago

ಲೈಂಗಿಕ ದೌರ್ಜನ್ಯ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ 8ಕ್ಕೆ ಸುರಪುರ ಬಂದ್

ಸುರಪುರ: ಕೊಡೇಕಲ್ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇದೇ ಅಕ್ಟೋಬರ್ 8 ರಂದು ಸುರಪುರ ಬಂದ್…

11 hours ago

ಗರ್ಭಿಣಿ ಮಹಿಳೆಯರಿಗೆ ಹಣ್ಣು ಹಂಪಲು ವಿತರಣೆ

ಕಲಬುರಗಿ:  ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಎಸ್ ಕಿಳ್ಳಿ ರವರ ಜನ್ಮ ದಿನದ ಆಂಗವಾಗಿ ಶ್ರೀನಿವಾಸ ಸರಡಗಿ…

11 hours ago

ಮಹಾತ್ಮ ಗಾಂಧೀಜಿಯವರ ತತ್ವಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ ಮತ್ತು ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರ್ಗಿಯ ಎನ್.ಎಸ್. ಎಸ್ ಘಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ…

11 hours ago

ಜುಡೋಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

ಕಲಬುರಗಿ: ಶಾಲಾ ಶಿಕ್ಷಣ ಇಲಾಖೆ ಕರ್ನಾಟಕ ರಾಜ್ಯಮಟ್ಟದ ಶಾಲಾ ಮಕ್ಕಳ ಆಟೊಗಳ ಸ್ಪರ್ಧೆ 2024 25 ಈಚೆಗೆ ಬೆಂಗಳೂರಿನಲ್ಲಿ ನಡೆದ…

11 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420