ಕಲಬುರಗಿ: ಜಿಲ್ಲಾದ್ಯಂತ ವೈಶಾಖದ ಈ ದಿನಗಳಲ್ಲಿ ಬಿರು ಬಿಸಿಲು ದಿನದಿಂದ ಇನಕ್ಕೆ ಹೆಚ್ಚುತ್ತಿರೋದರಿಂದ ಹಾಗೂ ವಾತಾವರಣದಲ್ಲಿನ ಉಷ್ಣತೆ 43 ಡಿಗ್ರಿ ಸೆಲ್ಸಿಯಸ್ ತಲುಪಿ ಕುಡಿಯುವ ನೀರಿನ ತೀವ್ರ ತಾಪತ್ರಯ ಶುರವಾಗಿದೆ.
ಅದಕ್ಕೇ ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನಲ್ಲಿ ರೈತರಿಗೆ ಹಾಗೂ ದನಕರುಗಳಗೆ ನೀರಿನ ಸಮಸ್ಯೆ ಆಗಿರುವುದರಿಂದ ಕೂಡಲೆ ಈ ಭಾಗದಲ್ಲಿರುವ ಕಾಲುವೆಗಳಿಗೆ ಅಣೆಕಟ್ಟೆಯಿಂದ ನೀರು ಹರಿಸುವಂತೆ ಜೇವರ್ಗಿ ಶಾಸಕರು ಹಾಗೂ ವಿರೋಧ ಪP್ಷÀದ ಮುಖ್ಯ ಸಚೇತಕರಾದ ಡಾ.ಅಜಯ್ ಸಿಂಗ್ ಅವರು ರೈತರೊಡನೆ ಹೋಗಿ ಕಲಬುರಗಿ ಜಿಲ್ಲಾಧಿಕಾರಿ ಯಶವಂತ ಗುರುಕರ್ ವರಿಗೆ ಮನವಿ ಪತ್ರ ನೀಡಿ ಗಮನ ಸೆಳೆದರು.