ಕಲಬುರಗಿ: ನಗರದ ಜೆಸ್ಕಾಂ ನಿಗಮ ಕಚೇರಿಯಲ್ಲಿ ಕರ್ನಾಟಕ ವಿದ್ಯಚ್ಛಕ್ತಿ ಮಂಡಳಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗಗಳ ಕಲ್ಯಾಣ ಸಂಸ್ಥೆ, ಜೆಸ್ಕಾಂ ವತಿಯಿಂದ ಬುದ್ಧ, ಬಸವ, ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತ್ಯೋತ್ಸವ ಪ್ರಯುಕ್ತ ರಕ್ತದಾನ ಶಿಬಿರ ಹಮ್ಮಿಕೋಳಲಾಯಿತು.
ಈ ಸಂದರ್ಭದಲ್ಲಿ ಕವಿಮಂ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗಗಳ ಕಲ್ಯಾಣ ಸಂಸ್ಥೆಯ ಉಪಾಧ್ಯಕ್ಷ ಬಿ.ಆರ್.ಬುದ್ಧಾ, ಕವಿಮಂ ಇಂಜಿನಿಯರಗಳ ಸಂಘದ ಉಪಾಧ್ಯಕ್ಷ ರಾಜೇಶ ಹಿಪ್ಪರಗಿ, ಕವಿಪ್ರನಿನಿ, ಗುವಿಸಕಂನಿ ಜೆಸ್ಕಾಂ ಕೇಂಧ್ರ ಸಮಿತಿ ಮುಸ್ಲಿಂ ನೌಕರರ ಸಂಘದ ಉಪಾಧ್ಯಕ್ಷ ಮಹ್ಮದ ಮೀನಾಜೋದ್ದನ್, ಕಾರ್ಯಕಾರಿ ಸಮಿತಿ ಸದಸ್ಯರಾದ ನಿಂಗಪ್ಪ ಸೋನ್ನದ, ಶಿವಾನಂದ ತೋಳೆ, ಶಿವರಾಮ ಪವಾರ, ರಕ್ತದಾನಿಗಳಾದ ರವಿನಾಯ್ಕ, ಸಾಹೇಬಗೌಡ ಪಾಟಿಲ, ಶಂಕರ ಕಣ್ಣಿ, ಅಶೋಕ ಚವ್ಹಾಣ ಹಾಗೂ ಇತರರು ಇದ್ದರು.