ಶಹಾಬಾದ: ಚಿತ್ತಾಪೂರದಲ್ಲಿ ಬಸವಣ್ಣನವರ ಮೂರ್ತಿಗೆ ಅವಮಾನ ಮಾಡಿರುವ ದುಷ್ಕರ್ಮಿಗಳನ್ನು ಬಂಧಿಸಬೇಕೆಂದು ಶಹಾಬಾದ ಅಡತ್ ಮತ್ತು ದಾಲಮಿಲ್ ಸಂಘದ ಅಧ್ಯಕ್ಷ ಶಿವಕುಮಾರ ಇಂಗಿನಶೆಟ್ಟಿ ಆಗ್ರಹಿಸಿದ್ದಾರೆ.
ಇಡೀ ಮನುಕುಲಕ್ಕೆ ಸಮಾನತೆಯ ತತ್ವವನ್ನು ಸಾರಿದ ವಿಶ್ವಗುರು ಬಸವಣ್ಣವರ ಮೂರ್ತಿಗೆ ಅವಮಾನಿಸುವ ಘಟನೆ ಇಡೀ ಮನುಕುಲಕ್ಕೆ ಮಾಡಿದ ಅವಮಾನವಾಗಿದೆ. ದೇಶವಲ್ಲದೇ ಹೊರ ದೇಶದಲ್ಲಿ ಕೂಡ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆ ಮಾಡಿ ಅವರ ಚಿಂತನೆಗಳಿಗೆ ತಲೆ ಬಾಗುತ್ತಿದ್ದಾರೆ.
ಆದರೆ ಅಂತಹ ಪುಣ್ಯಾತ್ಮರ ನಡೆದಾಡಿದ ನಾಡಲ್ಲಿ ಅವರ ಮೂರ್ತಿಗೆ ಅವಮಾನ ಮಾಡಿದ್ದು ಅತ್ಯಂತ ಖಂಡನೀಯವಾದುದು. ರಾಜ್ಯದಲ್ಲಿ ಮೇಲಿಂದ ಮೇಲೆ ಮಹಾನ್ ನಾಯಕರ ಮೂರ್ತಿಗಳಿಗೆ ಅವಮಾನಿಸುವ ಘಟನೆ ಪ್ರಕರಣಗಳು ಹೆಚ್ಚುತ್ತಿವೆ.ಇದರಿಂದ ರಾಜ್ಯದಲ್ಲಿ ಅಶಾಂತಿ ಸೃಷ್ಠಿಸುವ ಹುನ್ನಾರ ನಡೆಯುತ್ತಿದೆ.ಆದ್ದರಿಂದ ಕೂಡಲೇ ಅವಮಾನ ಮಾಡಿದ ವ್ಯಕ್ತಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಯಿಸಿದರು.