ಕಲಬುರಗಿ : ನಗರದ ಜಗತ್ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಅಮೃತ ನಡಿಗೆಯ ದಕ್ಷಿಣ ವಿಧಾನಸಭಾ ಮತಕ್ಷೇತ್ರದದಲ್ಲಿ ೨ನೇ ದಿನ ಪಾದಯಾತ್ರೆಯನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ ಅವರ ನೇತ್ರತತ್ವದಲ್ಲಿ ಜರುಗಿತು.
ಪಾದಯಾತ್ರೆಯಲ್ಲಿ ನೀಲಕಂಠರಾವ ಮೂಲಗೆ, ಬಾಬು ಒಂಟಿ, ಡಾ.ಕಿರಣ ದೇಶಮುಖ, ಸಂತೋಷ ಬಿಲಗುಂದಿ, ಶಿವಾನಂದ ಹೊನಗುಂಟಿ, ಈರಣ್ಣ ಝಳಕಿ, ಲಿಂಗರಾಜ ತಾರಫೈಲ್, ಲಿಂಗರಾಜ ಕಣ್ಣಿ, ಧರ್ಮರಾಜ ಹೇರೂರ ಹಾಗೂ ಮುಖಂಡರು ಕಾರ್ಯಕರ್ತರು ಪಾಲ್ಗೊಂಡರು.