ಅರಸುತನ ಮೇಲಲ್ಲ; ಅಗಸತನ ಕೀಳಲ್ಲ: ಸತ್ಯಂಪೇಟೆ

ಕಲಬುರಗಿ: ಶಿವಶರಣರ ಹಾಗೂ ಕಾಯಕದಲ್ಲಿ ನಿಷ್ಠೆಯುಳ್ಳವರ ಮೈಲಿಗೆಯ ಬಟ್ಟೆಗಳನ್ನು ಮಡಿ ಮಾಡಿ ಮುಟ್ಟಿಸುವ ಕಾರ್ಯ ಮಾಡುತ್ತಿದ್ದ ಮಡಿವಾಳ ಮಾಚಿದೇವರು ಮಡಿ ಬಟ್ಟೆ ಹೊತ್ತುಕೊಂಡು ವೀರಗಂಟೆ ಬಾರಸುತ್ತ ಭಕ್ತರಲ್ಲವರು ತಮ್ಮನ್ನು ಮುಟ್ಟಬಾಋದು ಎಂಬ ಷರತ್ತನ್ನು ವಿಧಿಸಿಕೊಂಡಿದ್ದರು ಎಂದು ಪತ್ರಕರ್ತ-ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಯಪಟ್ಟರು.

ವಚನನೋತ್ಸವ ಸಮಿತಿ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ನಗರದ ಬಸವೇಶ್ವರ ಬಡಾವಣೆಯ ಸೂರ್ಯಪ್ರಕಾಶ ಕಲಗುರ್ಕಿ ಅವರ ಮನೆಯಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಶರಣರ ವಚನಗಳ ಉಪನ್ಯಾಸ ಮಾಲೆಯಲ್ಲಿ ಮಡಿವಾಳ ಮಾಚಿದೇವರ “ಅರಸಿನ ಭಕ್ತಿ ಅಹಂಕಾರದಲ್ಲಿ ಹೋಯಿತ್ತು” ಎಂಬ ವಚನ ಕುರಿತು ಮಾತನಾಡಿದ ಅವರು, “ಅರಸುತನ ಮೇಲಲ್ಲ; ಅಗಸತನ ಕೀಳಲ್ಲ” ಎಂಬುದನ್ನು ಜನಕ್ಕೆ ಸಾರಿದರು ಎಂದು ತಿಳಿಸಿದರು.

ಬಟ್ಟೆಗೆ ಅಂಟಿದ ಕೊಳೆ ತೊಳೆಯುವುದರ ಜೊತೆಗೆ ಮನದ ಮೈಲಿಗೆ ತೊಳೆಯುವ ಕಾರ್ಯ ಮಾಡಿದ ಮಡಿವಾಳ ಮಾಚಿದೇವರು, ಭಕ್ತಿ ಎಂಬುದು ತೋರುಂಬವ ಲಾಭವಲ್ಲ. ಕಾಯಾ-ವಾಚಾ ಶುದ್ಧವಾಗಿಟ್ಟುಕೊಳ್ಳಬೇಕು. ಢಾಂಬಿಕ ಭಕ್ತಿಯನ್ನು ದೇವರು ಮೆಚ್ಚುವುದಿಲ್ಲ. ಪ್ರಕೃತಿ ಧರ್ಮದಂತೆ ಸರಳ-ಸಹಜ ಧರ್ಮವನ್ನು ಎಲ್ಲರೂ ಪರಿಪಾಲಿಸುವಂತೆ ಹೇಳಿದ ಮಾಚಿದೇವರು ಕಾಯಕ ಹಿಮಾಚಲವಾಗಿದ್ದರು ಎಂದು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಅಧಿಕಾರಿ ನಾಗಣ್ಣ ಗಣಜಲಖೇಡ ಮಾತನಾಡಿ, ಶರಣರ ವಚನಗಳು ಅದರಕ್ಕೆ ಕಹಿ ಉದರಕ್ಕೆ ಸಿಹಿಯಾಗಿವೆ. ಗುರು ವ್ಯಕ್ತಿಯಲ್ಲ. ಅರಿವು ನೀಡುವವರೆ ಗುರುಗಳು. ಗುರು ಮನಸ್ಸಿನ ತಾಪ ಕಳೆಯಬೇಕು ಎಂದು ಹೇಳಿದರು. ಶಿವಲೀಲಾ ಕಲಗುರ್ಕಿ ಸ್ವಾಗತಿಸಿದರು. ಈರಣ್ಣ ತೊರವಿ ನಿರೂಪಿಸಿದರು. ಶಿವಶರಣಪ್ಪ ಕೋಳಾರ ವಂದಿಸಿದರು. ಡಾ. ಸಂಗಮೇಶ ಹಿರೇಮಠ, ರುದ್ರಪ್ಪ ಪಾಟೀಲ, ಬಸವರಾಜ ಆವಂಟಿ, ನಾಗೀಂದ್ರಪ್ಪ, ವಿ.ಎಸ್. ರಟಕಲ್ ಸೇರಿದಂತೆ ಬಡಾವಣೆಯ ನಿವಾಸಿಗಳು ಭಾಗವಹಿಸಿದ್ದರು.

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

12 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

15 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

19 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

20 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

22 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420