ಶ್ರೀ ಸೌಹಾರ್ದ ಪತ್ತಿಯ ಸಹಕಾರಿ ಸಂಘದ 9ನೇ ಸಾಮಾನ್ಯ ಸಭೆ

0
63

ಕಲಬುರಗಿ: ನಗರದ ಆವಂಟಿ ಬಿಲ್ಡಿಂಗ್ ನಲ್ಲಿ ಶ್ರೀ ಸೌಹಾರ್ದ ಪತ್ತಿನ ಸಹಕಾರಿ ಸಂಘದ 9ನೇ ಸಾಮಾನ್ಯ ಸಭೆ ನಡೆಯಿತು.

ಈ ಸಭೆಯನ್ನು ಉದ್ದೇಶಿಸಿ ಶ್ರೀ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಡಾ. ವಿಶ್ವನಾಥ ಟಿ. ಬೆಲ್ಲದ ರವರು ಮಾತನಾಡುತ್ತಾ, ಸಂಘವು ಯಶಸ್ವಿಯಾಗಿ 9 ವರ್ಷಗಳನ್ನು ಪೂರ್ಣಗೊಳಿಸಿದೆ. ಎಲ್ಲಾ ಸದಸ್ಯರ ಹಾಗೂ ನಿರ್ದೇಶಕ ಮಂಡಳಿಯ ನಿರ್ದೇಶಕ ಸತತ ಸಹಕಾರದಿಂದ ಸಂಘವು ಪ್ರತಿ ವರ್ಷ ಲಾಭದಲ್ಲಿ ನಡೆಯುತ್ತಿದೆ.

Contact Your\'s Advertisement; 9902492681

ಸಂಘವು ಸದಸ್ಯರ ಆರ್ಥಿಕ ಅಗತ್ಯತೆಗಳನ್ನು ಅರಿತುಕೊಂಡು ಅವರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲಗಳನ್ನು ವಿತರಿಸುತ್ತಿದೆ. ಅಲ್ಲದೆ ಸಂಘದ ಸದಸ್ಯರು ತಮ್ಮ ಆರ್ಥಿಕ ಚಟುವಟಿಕೆಗಳನ್ನು ಸರಿಯಾದ ರೀತಿಯಲ್ಲಿ ಮಾಡಿದರೆ ಸಂಘವು ಇನ್ನು ಬೆಳೆಯಲು ಸಾಧ್ಯ ಎಂದು ನುಡಿದರು.

ವೇದಿಕೆ ಮೇಲೆ ಸಂಘದ ಉಪಾಧ್ಯಕ್ಷರಾದ ಶ್ರೀ ಬಾಬು ಬಿ. ಪವಾರ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಾಕರಾದ ಶ್ರೀ ರಾಘವೇಂದ್ರ ಎಂ.ಜಿ. ಇದ್ದರು. ಕಾರ್ಯಕ್ರಮವನ್ನು sಸಂಘದ ಕಾನೂನು ಸಲಹೆಗಾರರಾದ ತಿಮ್ಮಯ್ಯ ಹೆಚ್. ಮಾನೆ. ರವರು ನಡೆಸಿಕೊಟ್ಟರು. ರಾಮಣ್ಣ ಎಸ್. ಇಬ್ರಾಹಿಂಪೂರ, ಎಲ್ಲಪ್ಪ ಬಾಂಬೆ, ಶಂಕರ ದಂಡಗುಲಕರ್, ಶರಣು ಸನಾದಿ, ನರಸಪ್ಪ ಮಾನೆ, ತಿಮ್ಮಯ್ಯ ಮಾನೆ, ಕಿರಣಕುಮಾರ, ನೀಲಕಂಠ ಹುಲಿ, ದುರ್ಗಣ್ಣ ವಿ. ಕುಸಾಳೆ, ಹಣಮಂತ ದಂಡಗುಲಕರ್, ಸೇರಿದಂತೆ ಅನೇಕ ಸದಸ್ಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here